ind-vs-sa ಸೋಲಿಗೆ ಕಾರಣ ಬಿಚ್ಚಿಟ್ಟ ಪಂತ್
ನಾವು ಒಂದೊಳ್ಳೆ ಮೊತ್ತವನ್ನು ಬೋರ್ಡ್ ಮೇಲೆ ಇಟ್ಟಿದ್ದೇವು. ಆದ್ರೆ ಆ ನಂತರ ನಾವು ನಮ್ಮ ಪ್ರಣಾಳಿಕೆಯನ್ನು ಜಾರಿ ಮಾಡುವಲ್ಲಿ ವಿಫಲರಾದ್ವಿ. ಆದ್ರೂ ಎದುರಾಳಿ ತಂಡಕ್ಕೆ ಕ್ರೆಡಿಟ್ ಕೊಡಬೇಕು. ಮಿಲ್ಲರ್, ವಾನ್ ಡೆರ್ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದು ಟೀಂ ಇಂಡಿಯಾದ ನಾಯಕ ರಿಷಬ್ ಪಂತ್ ಹೇಳಿದ್ದಾರೆ.
ಐದು ಪಂದ್ಯಗಳ ಟಿ 20 ಸರಣಿಯ ಭಾಗವಾಗಿ ದಕ್ಷಿಣ ಆಫ್ರಿಕಾ ಭಾರತದ ಪ್ರವಾಸಕ್ಕೆ ಬಂದಿದೆ. ಅದರ ಅಂಗವಾಗಿ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಗುರುವಾರ ಮೊದಲ ಟಿ 20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಇಶಾನ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 211 ರನ್ ಕಲೆಹಾಕಿತ್ತು.
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಆರಂಭಿಕ ಆಘಾತ ಅನುಭವಿಸಿದ್ರೂ ನಾಲ್ಕನೇ ವಿಕೆಟ್ ಗೆ ಡೇವಿಡ್ ಮಿಲ್ಲರ್, ಡೆರ್ ಡು ಸನ್ ಜೋಡಿ ಭಾರತೀಯ ಬೌಲರ್ ಗಳ ಬೆಂಡೆತ್ತಿದ್ರು. ಪರಿಣಾಮ 19.1 ಓವರ್ ಗಳಲ್ಲಿ 212 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತ ತಂಡ 1-0 ಅಂತರದಲ್ಲಿ ಹಿನ್ನಡೆಯಲ್ಲಿದೆ.
ಇನ್ನು ಪಂದ್ಯ ಬಳಿಕ ಮಾತನಾಡಿ ಟೀಂ ಇಂಡಿಯಾದ ನಾಯಕ ರಿಷಬ್ ಪಂತ್, ಟೀಂ ಇಂಡಿಯಾ ಆಟಗಾರರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ಒಂದೊಳ್ಳೆ ಮೊತ್ತವನ್ನು ಬೋರ್ಡ್ ಮೇಲೆ ಇಟ್ಟಿದ್ದೇವು. ಆದ್ರೆ ಆ ನಂತರ ನಾವು ನಮ್ಮ ಪ್ರಣಾಳಿಕೆಯನ್ನು ಜಾರಿ ಮಾಡುವಲ್ಲಿ ವಿಫಲರಾದ್ವಿ. ಆದ್ರೂ ಎದುರಾಳಿ ತಂಡಕ್ಕೆ ಕ್ರೆಡಿಟ್ ಕೊಡಬೇಕು. ಮಿಲ್ಲರ್, ವಾನ್ ಡೆರ್ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಾವು ಬ್ಯಾಟಿಂಗ್ ಮಾಡುವಾಗ ವಿಕೆಟ್ ಸ್ವಲ್ಪ ಸ್ಲೋ ಇತ್ತು.
ಆ ನಂತರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ಮಿಲ್ಲರ್ ಅವರನ್ನ ಕಟ್ಟಿಹಾಕಲು ನಾವು ಪ್ರಯತ್ನಿಸಿದ್ದೇವು. ಆದ್ರೆ ಪಿಚ್ ಬ್ಯಾಟಿಂಗ್ ಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿತ್ತು. ಆದ್ರೂ ನಮ್ಮ ಪ್ರದರ್ಶನದ ಬಗ್ಗೆ ಖುಷಿ ಇದೆ. ಮುಂದಿನ ಪಂದ್ಯದಲ್ಲಿ ನಾವು ಖಂಡಿತವಾಗಿ ಕಮ್ ಬ್ಯಾಕ್ ಮಾಡುತ್ತೇವೆ ಎಂದು ಪಂತ್ ಹೇಳಿದ್ದಾರೆ.
ಇನ್ನು ಈ ಸೋಲಿನೊಂದಿಗೆ ಟಿಂ ಇಂಡಿಯಾ ಸತತ 13ನೇ ಪಂದ್ಯ ಗೆದ್ದು ವಿಶ್ವ ದಾಖಲೆ ನಿರ್ಮಿಸುವ ಅವಕಾಶವನ್ನು ಮಿಸ್ ಮಾಡಿಕೊಂಡಿದೆ. ಈ ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬೂಮ್ರಾ ಅವರಿಗೆ ರೆಸ್ಟ್ ನೀಡಲಾಗಿತ್ತು. ನಂತರ ನಾಯಕ ಕೆ.ಎಲ್.ರಾಹುಲ್ ಕೂಡ ಇಂಜೂರಿಯಾಗಿದ್ದು, ಸರಣಿಯಿಂದ ಹೊರಗುಳಿದಿದ್ದಾರೆ.








