ಆಯುಷ್ಮಾನ್ ಭವ – ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರಿಂದ ಸಾಕ್ಷಾಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯೋಗಾಸನದ ಬಗ್ಗೆ ಮಾಹಿತಿ yoga guru narendra kamath

ಚೀನಾದಿಂದ ಪ್ರಾರಂಭವಾದ ಮತ್ತು ಈಗ ಸಾಂಕ್ರಾಮಿಕ ರೋಗವೆಂದು ಘೋಷಿಸಲ್ಪಟ್ಟಿರುವ ಕೊರೋನವೈರಸ್ ವಿರುದ್ಧ ನಾವು ಪ್ರತಿಯೊಬ್ಬರೂ ಪ್ರತ್ಯೇಕವಾಗಿ ಹೋರಾಡುತ್ತಾ ಹಲವಾರು ತಿಂಗಳುಗಳು ಕಳೆದಿವೆ. ಇಷ್ಟು ಮಾತ್ರವಲ್ಲ, ಇದೀಗ ಚಳಿಗಾಲವು ಪ್ರಾರಂಭವಾಗಿದ್ದು, ಕೊರೋನಾ ವೈರಸ್ ನ ಎರಡನೇ ಅಲೆಯೂ ಪ್ರಾರಂಭವಾಗಿದೆ.
Yoga guru narendra kamath

ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ಕೆಲವು ಅಭ್ಯಾಸಗಳನ್ನು ಅನುಸರಿಸುವುದು ಮುಖ್ಯ. ಇದರಿಂದ ಕೊರೋನವೈರಸ್ ಮಾತ್ರವಲ್ಲದೆ ಅಜೀರ್ಣ, ಅತಿಸಾರ, ಕಾಮಾಲೆ ಮುಂತಾದ ಇತರ ಸಾಂಕ್ರಾಮಿಕದಿಂದಲೂ ದೂರವಿರಲು ಸಾಧ್ಯ.
ಆರೋಗ್ಯಕರ ಜೀವನಕ್ಕಾಗಿ ಆಯುಷ್ ಆರೋಗ್ಯ ಸಚಿವಾಲಯ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ದೈನಂದಿನ ಅಭ್ಯಾಸ, ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಆರಾಮದಾಯಕ ವೇಗದಲ್ಲಿ ನಡೆಯಿರಿ ಎಂದು ಸಲಹೆಯನ್ನು ನೀಡಿದೆ.
ಯೋಗ ಆಸನಗಳು ಮತ್ತು ಪ್ರಾಣಾಯಾಮಗಳನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ನಮ್ಮನ್ನು ಆರೋಗ್ಯವಾಗಿ ಮತ್ತು ಸದೃಢವಾಗಿರಿಸಿಕೊಳ್ಳಬಹುದು.
ಅವುಗಳ ಕೆಲವು ಪ್ರಯೋಜನಗಳು ಇಂತಿವೆ:
ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಾಂಗ ವ್ಯವಸ್ಥೆ ಉತ್ತಮವಾಗುವುದು
ನೆನಪಿನ ಶಕ್ತಿ ಪ್ರಬಲವಾಗುವುದು
ದೇಹವನ್ನು ನಿರ್ವಿಷಗೊಳಿಸುತ್ತದೆ.
ಸ್ವಾಮಿ ರಾಮದೇವ್ ದೇಹದಲ್ಲಿ ರಕ್ತದ ಸರಿಯಾದ ಹರಿವನ್ನು ಕಾಪಾಡಿಕೊಳ್ಳಲು ಪ್ರತಿದಿನ ಪ್ರಾಣಾಯಾಮಗಳನ್ನು ಮಾಡುವ ಮಹತ್ವವನ್ನು ಒತ್ತಿಹೇಳಿದ್ದಾರೆ. ಅಧಿಕ ರಕ್ತದೊತ್ತಡ, ಪಿತ್ತಜನಕಾಂಗ ಸಂಬಂಧಿಸಿದ ಸಮಸ್ಯೆಗಳು, ಸೈನಸ್, ಒತ್ತಡ, ಖಿನ್ನತೆ ಮತ್ತು ಮಧುಮೇಹ ಮುಂತಾದ ಕಾಯಿಲೆಗಳನ್ನು ದೂರವಿರಿಸಲು ಇದು ಸಹಾಯಕಾರಿ.
ಹಾಗಾಗಿ ಖ್ಯಾತ ಯೋಗಾಸನ ಗುರುಗಳಾದ ಶ್ರೀ ನರೇಂದ್ರ ಕಾಮತ್ ಕೆ ಕಾರ್ಕಳ ಇವರು ಯೋಗದ ಬಗ್ಗೆ ನಿಮ್ಮ ಸಾಕ್ಷಾ ಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಮಾಹಿತಿ ನೀಡಲಿದ್ದಾರೆ.

ಯೋಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು 25 ವರ್ಷ ಗಳಿಂದ ಯೋಗ ಶಿಕ್ಷಕರಾಗಿ ತರಭೇತಿ ನೀಡುತ್ತಿದ್ದಾರೆ. ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ತೀರ್ಪು ಗಾರರಾಗಿ ಭಾಗವಹಿಸಿದ ಹಿರಿಮೆ ಇವರದ್ದು. ಯೋಗ ವಿಶಾರದ ಯೋಗ ರತ್ನಾಕರ, ಯೋಗ ಸಾಧಕ ಬಿರುದನ್ನು ಪಡೆದ ಇವರ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಭಾರತದಲ್ಲಿ 750ನೇ ಸ್ಥಾನ ಒಲಿಂಪಿಕ್ ಯೋಗಾಸನದಲ್ಲಿ 5ನೇ ಸ್ಥಾನ, ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಕುರಿತು ಏನಾದರೂ ಸಲಹೆ ಸೂಚನೆಗಳು ಬೇಕಿದ್ದಲ್ಲಿ ಅವರನ್ನು ನೀವು ಸಂಪರ್ಕಿಸಬಹುದಾಗಿದೆ.
ಯೋಗ ಗುರು ನರೇಂದ್ರ ಕಾಮತ್ ಕೆ ಅವರಿಂದ ಯೋಗಾಸನ ಮಾಹಿತಿಯನ್ನು ಸೋಮವಾರ ದಿಂದ ಪ್ರತಿದಿನ ಸಾಕ್ಷಾಟಿವಿ ಯೂಟ್ಯೂಬ್ ಚಾನಲ್ ನಲ್ಲಿ ಬೆಳಿಗ್ಗೆ 7 ಗಂಟೆಗೆ ವೀಕ್ಷಿಸಬಹುದಾಗಿದೆ.
ಆಯುಷ್ ಇಲಾಖೆಯಿಂದ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮೂರು ಸರಳ ಕ್ರಮಗಳು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1331264801553543168?s=19
ಆಧಾರ್ ಮತ್ತು ಪ್ಯಾನ್ ಕಾರ್ಡ್ ನಲ್ಲಿ ಹೆಸರು ಭಿನ್ನವಾಗಿದೆಯೇ? ಸರಿಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ https://t.co/8llnlACZ8K
— Saaksha TV (@SaakshaTv) November 24, 2020








