ADVERTISEMENT
Monday, April 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಸತತ ನಾಲ್ಕನೇ ಸೋಲು.. ಸನ್ ರೈಸರ್ಸ್ ಅಮೋಘ ಜಯ

Sanath Rai by Sanath Rai
October 9, 2020
in IPL 2020, Newsbeat, Sports, ಐಪಿಎಲ್ 2020, ಕ್ರೀಡೆ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಐಪಿಎಲ್ 2020- ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಸತತ ನಾಲ್ಕನೇ ಸೋಲು.. ಸನ್ ರೈಸರ್ಸ್ ಅಮೋಘ ಜಯ

David Warner ipl 2020 saakshatvಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಗೆಲುವಿನ ನಗೆ ಬೀರಿದೆ. ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ 69 ರನ್ ಗಳಿಂದ ಕಿಂಗ್ಸ್ ಇಲೆವೆನ್ ತಂಡವನ್ನು ಪರಾಭವಗೊಳಿಸಿತು.

Related posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

April 13, 2026
ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

April 13, 2026

ಇದರೊಂದಿಗೆ ಸನ್ ರೈಸರ್ಸ್ ಹೈದ್ರಬಾದ್ ತಂಡ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದ್ರೆ, ಕಿಂಗ್ಸ್ ಇಲೆವೆನ್ ತಂಡ ಸತತ ನಾಲ್ಕನೇ ಸೋಲು ಕಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಜೋನಿ ಬೇರ್ ಸ್ಟೋ ಭದ್ರ ಅಡಿಪಾಯ ಹಾಕಿಕೊಟ್ಟರು.

ಅಲ್ಲದೆ 15 ಓವರ್ ಗಳಲ್ಲಿ 160 ರನ್ ಗಳ ಜೊತೆಯಾಟವನ್ನು ಆಡಿದ್ದರು. ಈ ಹಂತದಲ್ಲಿ 40 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‍ನೊಂದಿಗೆ 52 ರನ್ ಗಳಿಸಿದ್ದ ಡೇವಿಡ್ ವಾರ್ನರ್ ರವಿ ಬಿಸ್ನೋಯ್ ಅವರಿಗೆ ವಿಕೆಟ್ ಒಪ್ಪಿಸಿದ್ರು.

ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜೋನಿ ಬೇರ್ ಸ್ಟೋ ಕೇವಲ ಮೂರು ರನ್ ಗಳ ಅಂತರದಿಂದ ಶತಕ ವಂಚಿತರಾದ್ರು. ಕಿಂಗ್ಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ದ ಜೋನಿ ಬೇರ್ ಸ್ಟೋ 55 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 97 ರನ್ ಗಳಿಸಿದ್ದರು.

ಆದ್ರೆ ಸನ್ ರೈಸರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಮತ್ತೊಮ್ಮೆ ವಿಫಲರಾದ್ರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಅಬ್ದುಲ್ ಸಮಾದ್ ಎಂಟು ರನ್, ಮನಿಷ್ ಪಾಂಡೆ 1 ರನ್, ಪ್ರಿಯಮ್ ಗರ್ಗ್ ಶೂನ್ಯ ಸುತ್ತಿದ್ರೆ, ಅಭಿಷೇಕ್ ಶರ್ಮಾ 12 ರನ್ ಗಳಿಸಿದ್ರು.

ಉಳಿದಂತೆ ಕೇನ್ ವಿಲಿಯಮ್ಸ್ ಅವರು 20 ಅಜೇಯ 20 ರನ್ ಗಳಿಸಿದ್ರು. ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲನ್ನು ಬೆನ್ನಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಹೊಂದಾಣಿಕೆಯ ಕೊರತೆಯಿಂದ ಮಯಾಂಕ್ ಅಗರ್ ವಾಲ್ 9 ರನ್ ಗಳಿಸಿ ರನೌಟಾದ್ರು. ಹಾಗೇ, ಸಿಮ್ರಾನ್ ಸಿಂಗ್ 11 ರನ್ ಗೆ ಸೀಮಿತವಾದ್ರೆ, ಕೆ.ಎಲ್. ರಾಹುಲ್ ಹೋರಾಟ 11 ರನ್ ಗೆ ಅಂತ್ಯಗೊಂಡಿತು.

Nicholas Pooran ipl 2020 saakshatvಇನ್ನೊಂದೆಡೆ ನಿಕೊಲಾಸ್ ಪೂರನ್ ಏಕಾಂಗಿ ಹೋರಾಟ ನಡೆಸಿದ್ರು. ಆದ್ರೆ ಗ್ಲೇನ್ ಮ್ಯಾಕ್ಸ್ ವೆಲ್ ಮಿಂಚು ಹರಿಸಲು ಮತ್ತೆ ವಿಫಲರಾದ್ರು. ಗ್ಲೇನ್ ಮ್ಯಾಕ್ಸ್ ವೆಲ್ 7 ರನ್ ಹಾಗೂ ಮನದೀಪ್ ಸಿಂಗ್ 6 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.

ಇನ್ನುಳಿದಂತೆ ಮುಜೀಬ್ ಉರ್ ರಹಮಾನ್ 1, ಮಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್, ಆರ್ಶ್‍ದೀಪ್ ಸಿಂಗ್ ಅವರು ಶೂನ್ಯ ಸುತ್ತಿದ್ರು. ನಿಕೊಲಾಸ್ ಪೂರನ್ ಅವರು 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ನೆರವಿನಿಂದ 77 ರನ್ ಸಿಡಿಸಿದ್ರು. ರವಿ ಬಿಸ್ನೋಯ್ ಅವರು ಅಜೇಯ 6 ರನ್ ಗಳಿಸಿದ್ರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೋನಿ ಬೇರ್ ಸ್ಟೋ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ರಶೀದ್ ಖಾನ್ ಮೂರು ವಿಕೆಟ್ ಪಡೆದ್ರೆ, ಖಲಿಲ್ ಅಹಮ್ಮದ್, ನಟರಾಜನ್ ಅವರು ತಲಾ ಎರಡು ವಿಕೆಟ್ ಉರುಳಿಸಿದ್ರು.

Tags: #David Warner.#Jonny Bairstow#Nicholas Pooran'#saakshatvGlenn MaxwellIPL 2020Kings XI PunjabKL RahuLManish PandeyMayank AgarwalRashid KhanSunRisers Hyderabad
ShareTweetSendShare
Join us on:

Related Posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

by Shwetha
April 13, 2026
0

ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಇಂದು ಪ್ರತಿಯೊಬ್ಬರೂ ಎಸಿ ಮೊರೆ ಹೋಗುತ್ತಿದ್ದಾರೆ. ಮನೆ, ಕಚೇರಿ ಮಾತ್ರವಲ್ಲದೆ ಪ್ರಯಾಣದ ವೇಳೆಯೂ ಎಸಿ ಅನಿವಾರ್ಯವಾಗಿದೆ. ಆದರೆ ಈ ತಂಪಾದ...

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

by Shwetha
April 13, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ...

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

by Shwetha
April 13, 2026
0

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಫ್ರೀಡಂ ಪಾರ್ಕ್ ಇಂದು ಮೂಕ ಪ್ರಾಣಿಗಳ ಪರವಾಗಿ ಮೊಳಗಿದ ಆಕ್ರೋಶದ ಧ್ವನಿಗೆ ಸಾಕ್ಷಿಯಾಯಿತು. ಕಗ್ಗದಾಸಪುರದ ಡಿಆರ್ ಡಿಒ ಸಂಕೀರ್ಣದಲ್ಲಿ ನಡೆದ ಬೀದಿ ನಾಯಿಗಳ...

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

by Shwetha
April 13, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚುನಾವಣಾ ಕಣದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯಕ್ಕೆ ಕುಮ್ಮಕ್ಕು ನೀಡಿದ...

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

by Shwetha
April 13, 2026
0

ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನದ ಸ್ಫೋಟ ಸಂಭವಿಸಿದೆ. ಟಿಕೆಟ್ ವಂಚಿತರಾದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram