ಐಪಿಎಲ್ 2020 – 25ನೇ ಪಂದ್ಯದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳ ಜಟಾಪಟಿ
13ನೇ ಆವೃತ್ತಿಯ 25ನೇ ಪಂದ್ಯ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ.
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಂಡದ ಕಳಪೆ ಪ್ರದರ್ಶನದ ಬಗ್ಗೆ ಕ್ರಿಕೆಟ್ ಪಂಡಿತರು ಕೂಡ ಕಿಡಿ ಕಾರಿದ್ದಾರೆ.
ಯಾಕಂದ್ರೆ ಸಿಎಸ್ ಕೆ ತಂಡದಲ್ಲಿ ಅದ್ಭುತ ಆಟಗಾರರು ಇದ್ದಾರೆ. ಆದ್ರೆ ಯಾರು ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.
ಇದು ನಾಯಕ ಧೋನಿ ಹಾಗು ಟೀಮ್ ಮ್ಯಾನೇಜ್ ಮೆಂಟ್ಗೆ ದೊಡ್ಡ ಚಿಂತೆಯಾಗಿದೆ.
ಸಿಎಸ್ಕೆ ತಂಡಕ್ಕೆ ಇಂದಿನ ಪಂದ್ಯ ಮೊದಲ ಹಂತದ ಲೀಗ್ ನ ಕೊನೆಯ ಪಂದ್ಯ.
ಇಲ್ಲಿಯವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ.
ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಮುಖ್ಯವಾಗಿ ಕೇದಾರ್ ಜಾಧವ್ ನೀರಸ ಪ್ರದರ್ಶನ ನಾಯಕ ಧೋನಿಯ ಚಿಂತೆಯನ್ನು ಹೆಚ್ಚು ಮಾಡಿದೆ.
ಅಲ್ಲದೆ ಇಂದಿನ ಪಂದ್ಯದಲ್ಲಿ ಕೇದಾರ್ ಜಾಧವ್ ಬದಲು ಋತುರಾಜ್ ಗಾಯಕ್ವಾಡ್ಗೆ ಮತ್ತೊಂದು ಅವಕಾಶ ನೀಡ್ತಾರಾ ಅನ್ನೋದನ್ನು ನೋಡಬೇಕಿದೆ.
ಇನ್ನು ಆರ್ಸಿಬಿ ತಂಡ ಹೇಗೋ ಸೋಲಿನಿಂದ ಹೊರಬಂದಿದೆ. ಆಡಿರುವ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ.
ಇದೀಗ ಆರನೇ ಪಂದ್ಯದಲ್ಲೂ ಗೆಲುವನ್ನೇ ಎದುರು ನೋಡುತ್ತಿದೆ.
ಸಿಎಸ್ ಕೆ ವಿರುದ್ಧದ ಪಂದ್ಯಕ್ಕೆ ಆರ್ ಸಿಬಿಯಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆ ಇದೆ.
ಕ್ರಿಸ್ ಮೋರಿಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಮೋರಿಸ್ ತಂಡ ಸೇರಿಕೊಂಡ್ರೆ
ಆಡಮ್ ಝಂಪಾ ಅಥವಾ ಮೋಯಿನ್ ಆಲಿ ಹೊರಗುಳಿಯಬೇಕಾಗುತ್ತದೆ. ಇನ್ನುಳಿದಂತೆ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಸಂಭವನೀಯ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ), ಶೇನ್ ವಾಟ್ಸನ್, ಫಾಫ್ ಡು ಪ್ಲೇಸಸ್, ಅಂಬಟಿ ರಾಯುಡು, ಕೇದಾರ್ ಜಾಧವ್ /ಋತುರಾಜ್ ಗಾಯಕ್ವಾಡ್,
ಸ್ಯಾಮ್ ಕುರನ್, ಡ್ವೇನ್ ಬ್ರೇವೋ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಶಾರ್ದೂಲ್ ಥಾಕೂರ್, ಕರ್ಣ ಶರ್ಮಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭವನೀಯ ತಂಡ
ವಿರಾಟ್ ಕೊಹ್ಲಿ (ನಾಯಕ) ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ಎಬಿಡಿ ವಿಲಿಯರ್ಸ್, ಕ್ರಿಸ್ ಮೋರಿಸ್,
ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಇಸುರು ಉದನಾ, ಗುರ್ ಕೀರತ್ ಸಿಂಗ್, ನವದೀಪ್ ಸೈನಿ, ಯುಜುವೇಂದ್ರ ಚಾಹಲ್.