ADVERTISEMENT
Tuesday, December 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಬೇಕೇ ಬೇಕು… ಸುರೇಶ್ ರೈನಾ…ಬೇಕು.. ಸಾಮಾಜಿಕ ಜಾಲ ತಾಣದಲ್ಲಿ ಸಿಎಸ್‍ಕೆ ಅಭಿಮಾನಿಗಳ ಡಿಮ್ಯಾಂಡ್..!

admin by admin
September 26, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಬೇಕೇ ಬೇಕು… ಸುರೇಶ್ ರೈನಾ…ಬೇಕು.. ಸಾಮಾಜಿಕ ಜಾಲ ತಾಣದಲ್ಲಿ ಸಿಎಸ್‍ಕೆ ಅಭಿಮಾನಿಗಳ ಡಿಮ್ಯಾಂಡ್..!

ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಐಪಿಎಲ್ ಟೂರ್ನಿಯಲ್ಲಿ ಅಭಿಮಾನಿಗಳನ್ನು ನಿರಾಸೆಗೊಳಿಸುತ್ತಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಧೋನಿ ಪಡೆ ಈಗ ಒತ್ತಡಕ್ಕೆ ಸಿಲುಕಿದೆ. ದಿಟ್ಟ ನಿರ್ಧಾರದೊಂದಿಗೆ ಗ್ಯಾಂಬ್ಲಿಂಗ್ ಮಾಡುತ್ತಾ ತಂಡವನ್ನು ಗೆಲುವಿನ ದಡ ಸೇರಿಸುತ್ತಿದ್ದ ಧೋನಿಯ ಗೇಮ್ ಪ್ಲಾನ್ ಗಳು ವರ್ಕ್ ಔಟ್ ಆಗುತ್ತಿಲ್ಲ
ಮುಖ್ಯವಾಗಿ ಸಿಎಸ್ ಕೆ ತಂಡ ಉತ್ತಮ ಆರಂಭ ಪಡೆದುಕೊಳ್ಳುತ್ತಿಲ್ಲ. ಹಾಗೇ ಮೂರನೇ ಕ್ರಮಾಂಕದ ಬ್ಯಾಟ್ಸ್ ಮೆನ್ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಹೊಸ ಅಭಿಯಾನವನ್ನು ಶುರು ಮಾಡಿಕೊಂಡಿದ್ದಾರೆ.
ಸಿಎಸ್‍ಕೆ ತಂಡದ ಚಿನ್ನ ತಲಾ ಸುರೇಶ್ ರೈನಾ ಮತ್ತೆ ತಂಡವನ್ನು ಸೇರಿಕೊಳ್ಳಬೇಕು ಎಂದು ಸಿಎಸ್‍ಕೆ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನವನ್ನು ಶುರು ಮಾಡಿಕೊಂಡಿರುವ ಸಿಎಸ್ ಕೆ ಅಭಿಮಾನಿಗಳು ಸುರೇಶ್ ರೈನಾ ತಂಡವನ್ನು ಸೇರಿಕೊಳ್ಳಬೇಕು. ಮೂರನೇ ಕ್ರಮಾಂಕದ ಕೊರತೆಯನ್ನು ನಿವಾರಿಸಬೇಕು ಅನ್ನೋ ಬೇಡಿಕೆಯನ್ನು ಮುಂದಿಟ್ಟುಕೊಂಡಿದ್ದಾರೆ.
ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರನಡೆದಿದ್ದರು. ತನ್ನ ಕುಟುಂಬದ ಮೇಲೆ ನಡೆದ ಭೀಕರ ಹತ್ಯೆಯ ಕಾರಣದಿಂದಾಗಿ ಸುರೇಶ್ ರೈನಾ ದುಬೈನಿಂದ ತವರಿಗೆ ಆಗಮಿಸಿದ್ದರು. ಸುರೇಶ್ ರೈನಾ ತಂಡದಿಂದ ನಿರ್ಗಮಿಸುತ್ತಿದ್ದಂತೆ ಸಿಎಸ್‍ಕೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ರೈನಾ ವಿರುದ್ಧ ಕಿಡಿ ಕಾರಿದ್ದರು. ಕೇದಾರ್ ಜಾಧವ್ ಕೂಡ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಆದ್ರೆ ಈ ಬಗ್ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ಈ ನಡುವೆ, ಸುರೇಶ್ ರೈನಾ ಮತ್ತೆ ತಂಡವನ್ನು ಸೇರಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ರೂ ಸಿಎಸ್‍ಕೆ ಮ್ಯಾನೇಜ್ ಮೆಂಟ್ ಯಾವುದೇ ಉತ್ತರವನ್ನು ಹೇಳಿಲ್ಲ. ಇದೀಗ ರೈನಾ ಅವರ ಅನುಪಸ್ಥಿತಿ ಸಿಎಸ್‍ಕೆ ತಂಡದ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ.
ಸಿಎಸ್‍ಕೆ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾದಾಗ ಸುರೇಶ್ ರೈನಾ ಮೂರನೇ ಕ್ರಮಾಂಕದಲ್ಲಿ ಜವಾಬ್ದಾರಿಯುತವಾಗಿ ತಂಡಕ್ಕೆ ಆಧಾರವಾಗುತ್ತಿದ್ದರು. ಹೀಗಾಗಿ ಕೊನೆಯ ಕ್ಷಣಗಳಲ್ಲಿ ಸವಾಲು ಎಷ್ಟೇ ದೊಡ್ಡದಾಗಿರಲಿ, ಧೋನಿಗೆ ಯಾವುದೇ ಒತ್ತಡಗಳು ಇಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗುತ್ತಿತ್ತು.
ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಸಿಎಸ್‍ಕೆ ತಂಡ ಉತ್ತಮ ಆರಂಭವನ್ನು ಪಡೆಯುತ್ತಿಲ್ಲ. ಮೂರನೇ ಕ್ರಮಾಂಕ ಹಾಗೂ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳಿಂದಲೂ ನಿರೀಕ್ಷಿತ ಆಟ ಹೊರಬರುತ್ತಿಲ್ಲ. ಹೀಗಾಗಿ ಧೋನಿ ಒತ್ತಡಕ್ಕೆ ಸಿಲುಕಿದ್ದಾರೆ. ಧೋನಿಗೂ ಸುರೇಶ್ ರೈನಾ ಅವರ ಅನುಪಸ್ಥಿತಿ ಕಾಡುತ್ತಿದೆ ಎಂಬುದು ಮನವರಿಕೆಯಾಗಿದೆ.
ಅದೇ ರೀತಿ ಬೌಲಿಂಗ್ ನಲ್ಲೂ ಜಾದು ಮಾಡುವ ರೈನಾ ಫೀಲ್ಡಿಂಗ್ ನಲ್ಲೂ ರನ್ ವೇಗಕ್ಕೆ ಕಡಿವಾಣ ಹಾಕುತ್ತಿದ್ದರು. ಒಟ್ಟಾರೆಯಾಗಿ ಧೋನಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಸ್ ಕೆ ತಂಡದ ಆಟಗಾರರು ಆಟದ ಎಲ್ಲಾ ವಿಭಾಗದಲ್ಲೂ ನಿರಾಸೆ ಮೂಡಿಸುತ್ತಿದ್ದಾರೆ.
ಸುರೇಶ್ ರೈನಾ ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನೇ ನೀಡಿದ್ದಾರೆ. ಗರಿಷ್ಠ ಪಂದ್ಯವನ್ನಾಡಿರುವ ದಾಖಲೆ ಒಂದು ಕಡೆಯಾದ್ರೆ, ಗರಿಷ್ಠ ರನ್ ಪೇರಿಸಿದವರ ಸಾಲಿನಲ್ಲೂ ಮುಂಚೂಣಿಯಲ್ಲಿದ್ದಾರೆ. ಅದೇ ರೀತಿ ಗರಿಷ್ಠ ಸಿಕ್ಸರ್ ಸಿಡಿಸಿದ್ದ ದಾಖಲೆಯ ಪಟ್ಟಿಯಲ್ಲೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

Related posts

ಸಿಡ್ನಿ ನರಮೇಧ:16 ಅಮಾಯಕರ ಬಲಿ ಪಡೆದ ಅಪ್ಪ-ಮಗ ಪಕ್ಕಾ ಜೆಂಟಲ್ ಮೆನ್ ಅಂತೆ! ತಾಯಿ ಮಾತಿಗೆ ಬೆಚ್ಚಿಬಿದ್ದ ಜಗತ್ತು

ಸಿಡ್ನಿ ನರಮೇಧ:16 ಅಮಾಯಕರ ಬಲಿ ಪಡೆದ ಅಪ್ಪ-ಮಗ ಪಕ್ಕಾ ಜೆಂಟಲ್ ಮೆನ್ ಅಂತೆ! ತಾಯಿ ಮಾತಿಗೆ ಬೆಚ್ಚಿಬಿದ್ದ ಜಗತ್ತು

December 16, 2025
ಶಿವಣ್ಣ ಮತ್ತು ರಿಯಲ್ ಸ್ಟಾರ್ ಅಬ್ಬರಕ್ಕೆ ಫಿದಾ ಆದ ಡಿವೈನ್ ಸ್ಟಾರ್ ರಾಜ್ ಬಿ ಶೆಟ್ಟಿ ಹೆಸರು ಹೇಳದೆ 45 ಚಿತ್ರಕ್ಕೆ ವಿಶ್ ಮಾಡಿದ ಕಾಂತಾರ ಹೀರೋ

ಶಿವಣ್ಣ ಮತ್ತು ರಿಯಲ್ ಸ್ಟಾರ್ ಅಬ್ಬರಕ್ಕೆ ಫಿದಾ ಆದ ಡಿವೈನ್ ಸ್ಟಾರ್ ರಾಜ್ ಬಿ ಶೆಟ್ಟಿ ಹೆಸರು ಹೇಳದೆ 45 ಚಿತ್ರಕ್ಕೆ ವಿಶ್ ಮಾಡಿದ ಕಾಂತಾರ ಹೀರೋ

December 16, 2025
Tags: #IPL 2020 newschennai super kingscskIPL 2020Mahendra Singh DhoniSuresh RainaUAEuae ipl 2020
ShareTweetSendShare
Join us on:

Related Posts

ಸಿಡ್ನಿ ನರಮೇಧ:16 ಅಮಾಯಕರ ಬಲಿ ಪಡೆದ ಅಪ್ಪ-ಮಗ ಪಕ್ಕಾ ಜೆಂಟಲ್ ಮೆನ್ ಅಂತೆ! ತಾಯಿ ಮಾತಿಗೆ ಬೆಚ್ಚಿಬಿದ್ದ ಜಗತ್ತು

ಸಿಡ್ನಿ ನರಮೇಧ:16 ಅಮಾಯಕರ ಬಲಿ ಪಡೆದ ಅಪ್ಪ-ಮಗ ಪಕ್ಕಾ ಜೆಂಟಲ್ ಮೆನ್ ಅಂತೆ! ತಾಯಿ ಮಾತಿಗೆ ಬೆಚ್ಚಿಬಿದ್ದ ಜಗತ್ತು

by Shwetha
December 16, 2025
0

ಸಿಡ್ನಿ: ಆಸ್ಟ್ರೇಲಿಯಾದ ಪ್ರಖ್ಯಾತ ಬೋಂಡಿ ಬೀಚ್‌ನಲ್ಲಿ (Bondi Beach) ನಡೆದ ಭೀಕರ ಗುಂಡಿನ ದಾಳಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಯಹೂದಿ ಹಬ್ಬದ ಸಂಭ್ರಮದಲ್ಲಿದ್ದ ಸಾವಿರಾರು ಜನರ ನಡುವೆ...

ಶಿವಣ್ಣ ಮತ್ತು ರಿಯಲ್ ಸ್ಟಾರ್ ಅಬ್ಬರಕ್ಕೆ ಫಿದಾ ಆದ ಡಿವೈನ್ ಸ್ಟಾರ್ ರಾಜ್ ಬಿ ಶೆಟ್ಟಿ ಹೆಸರು ಹೇಳದೆ 45 ಚಿತ್ರಕ್ಕೆ ವಿಶ್ ಮಾಡಿದ ಕಾಂತಾರ ಹೀರೋ

ಶಿವಣ್ಣ ಮತ್ತು ರಿಯಲ್ ಸ್ಟಾರ್ ಅಬ್ಬರಕ್ಕೆ ಫಿದಾ ಆದ ಡಿವೈನ್ ಸ್ಟಾರ್ ರಾಜ್ ಬಿ ಶೆಟ್ಟಿ ಹೆಸರು ಹೇಳದೆ 45 ಚಿತ್ರಕ್ಕೆ ವಿಶ್ ಮಾಡಿದ ಕಾಂತಾರ ಹೀರೋ

by Shwetha
December 16, 2025
0

ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗೇನಿದ್ದರೂ 45 ಚಿತ್ರದ ಹವಾ ಜೋರಾಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ, ಕರುನಾಡ ಚಕ್ರವರ್ತಿ ಶಿವಣ್ಣ,...

ದಿನ ಭವಿಷ್ಯ (08-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 16, 2025
0

ಡಿಸೆಂಬರ್ 16, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹದ ದಿನವಾಗಿದೆ. ನಿಮ್ಮ ರಾಶ್ಯಾಧಿಪತಿ ಕುಜನ ಅನುಗ್ರಹದಿಂದ ಕೆಲಸ...

ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ

ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ

by admin
December 15, 2025
0

ದುಷ್ಟ ಗ್ರಹಗಳಿಂದ ನಿಮ್ಮ ಜೀವನದಲ್ಲಿ ಎಂದಿಗೂ ದುಃಖ ಇರುವುದಿಲ್ಲ. ಹನುಮಂತನ ಈ ತಾರಕ ಮಂತ್ರವನ್ನು ಒಮ್ಮೆ ಪಠಿಸಿದರೂ ಸಹ ಗ್ರಹಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕುಟುಂಬಕ್ಕೆ...

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!

by admin
December 15, 2025
0

ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram