ಐಪಿಎಲ್ 2021- ಸಿಎಸ್ ಕೆ ತಂಡಕ್ಕೂ ಕಾಡಿದ ಕೋವಿಡ್ -19 ಸೋಂಕು..!
14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಕೋವಿಡ್ -19 ಆತಂಕ ಕಾಡುತ್ತಿದೆ. ವಾಂಖೇಡೆ ಕ್ರೀಡಾಂಗಣದ ಎಂಟು ಮಂದಿ ಸಿಬ್ಬಂದಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್ ಅವರಿಗೆ ಈಗಾಗಲೇ ಕೋವಿಡ್ ಸೋಂಕು ದೃಢಪಟ್ಟಿದೆ. ಇದ್ರ ಬೆನ್ನಲ್ಲೇ ಸಿಎಸ್ ಕೆ ತಂಡದಿಂದ ಆಘಾತಕಾರಿಯಾಗುವಂತಹ ಫಲಿತಾಂಶ ಬಂದಿದೆ.
ಸಿಎಸ್ ಕೆ ತಂಡದ ಸದಸ್ಯನಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಆದ್ರೆ ಯಾರು ಎಂದು ಇನ್ನೂ ಕೂಡ ತಿಳಿದು ಬಂದಿಲ್ಲ.
ಸಿಎಸ್ ಕೆ ತಂಡದ ಕೋವಿಡ್ ಟೆಸ್ಟ್ ಫಲಿತಾಂಶ ಇಂದು ಬಂದಿದೆ. ಒಬ್ಬ ಸದಸ್ಯನಿಗೆ ಪಾಸಿಟಿವ್ ಬಂದಿದ್ದು, ಅವರನ್ನು ತಕ್ಷಣವೇ ಐಸೋಲೇಷನ್ ನಲ್ಲಿಡಲಾಗಿದೆ.
ಕಳೆದ ಬಾರಿಯ ಯುಎಓ ಐಪಿಎಲ್ ಟೂರ್ನಿಯ ಆರಂಭದಲ್ಲೇ ಸಿಎಸ್ ಕೆ ತಂಡಕ್ಕೆ ಕೋವಿಡ್ ಆತಂಕ ಕಾಡಿತ್ತು. ತಂಡದ 11 ಮಂದಿ ಸಿಬ್ಬಂದಿ ಹಾಗೂ ಋತುರಾಜ್ ಗಾಯಕ್ವಾಡ್ ಮತ್ತು ದೀಪಕ್ ಚಾಹರ್ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು. ಈ ಬಾರಿಯೂ ಅದೇ ರೀತಿ ಸಿಎಸ್ ಕೆ ತಂಡಕ್ಕೆ ಕೋವಿಡ್ ಕಾರ್ಮೋಡ ಬಂದಿದೆ.
ಏಪ್ರಿಲ್ 10ರಂದು ಸಿಎಸ್ ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದ್ರ ಬೆನ್ನಲ್ಲೇ ಕೋವಿಡ್ ಆತಂಕ ತಂಡವನ್ನು ಕಾಡುತ್ತಿದೆ.
ipl-2021-chennai-super-kings-contingent-tests-positive-for-covid-19
ಮುಂಬೈನಲ್ಲಿ ಈಗಾಗಲೇ ಕೋವಿಡ್ -10 ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಐಪಿಎಲ್ ಟೂರ್ನಿಯನ್ನು ಜೈವಿಕ ಸುರಕ್ಷತೆಯಡಿಯಲ್ಲಿ ಆಯೋಜನೆ ಮಾಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಮತ್ತು ಬಿಸಿಸಿಐನ ಎಸ್ಒಪಿಯ ಸಲಹೆಯಂತೆ ಫ್ರಾಂಚೈಸಿಗಳು ನಿಯಮಗಳನ್ನು ಪರಿಪಾಲಿಸುತ್ತವೆ.
ಆದ್ರೂ ಮಹಾಮಾರಿ ಕೋವಿಡ್ -19 ಐಪಿಎಲ್ ಟೂರ್ನಿಗೆ ಅಡ್ಡಿಯನ್ನುಂಟು ಮಾಡುತ್ತಿದೆ.
ಒಂದಂತೂ ಸತ್ಯ, ಇಲ್ಲಿ ದುಡ್ಡು, ಕ್ರಿಕೆಟ್ ಆಟಕ್ಕಿಂತ ಆರೋಗ್ಯ ಮುಖ್ಯ. ಹೀಗಾಗಿ ಆಟಗಾರರ ಮತ್ತು ಸಿಬ್ಬಂದಿಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕಾಗುತ್ತದೆ.
ಈ ನಡುವೆ, ಕೋವಿಡ್ ಭಯದಿಂದ ವಿದೇಶಿ ಆಟಗಾರರು ಹಿಂದೇಟು ಹಾಕಿದ್ರೆ ಐಪಿಎಲ್ ಟೂರ್ನಿಗೆ ಅಡಚಣೆಯಾಗುವ ಸಾಧ್ಯತೆಗಳಿವೆ. ಏನೇ ಆಗ್ಲಿ, ಬಿಸಿಸಿಐ ಬಹಳ ಎಚ್ಚರಿಕೆಯಿಂದ 2021ರ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಬೇಕಾಗುತ್ತದೆ.
ಈ ನಡುವೆ, ಕಳೆದ ವಾರ ಮುಕ್ತಾಯಗೊಂಡ ರೋಡ್ ಸೇಫ್ಟಿ ವಲ್ರ್ಡ್ ಸೀರೀಸ್ ನಲ್ಲಿ ಭಾಗಿಯಾಗಿದ್ದ ಭಾರತದ ಸಚಿನ್ ತೆಂಡುಲ್ಕರ್, ಎಸ್. ಬದ್ರಿನಾಥ್, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ಐಸೋಲೇಷನ್ ನಲ್ಲಿದ್ದಾರೆ. ಅದ್ರಲ್ಲೂ ಸಚಿನ್ ತೆಂಡುಲ್ಕರ್ ಆಸ್ಪತ್ರೆಗೂ ದಾಖಲಾಗಿದ್ದಾರೆ.








