ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಡೆಲ್ಲಿ ಬೊಂಬಾಟ್ ಆಟ : ದುಬೈನಲ್ಲೂ ರೈಸ್ ಆಗದ ಹೈದರಾಬಾದ್

Mahesh M Dhandu by Mahesh M Dhandu
September 23, 2021
in IPL 2021, Newsbeat, ಐಪಿಎಲ್ 2021
IPL 2021 saaksha tv
Share on FacebookShare on TwitterShare on WhatsappShare on Telegram

Related posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

February 4, 2026
ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

February 4, 2026

ಡೆಲ್ಲಿ ಬೊಂಬಾಟ್ ಆಟ : ದುಬೈನಲ್ಲೂ ರೈಸ್ ಆಗದ ಹೈದರಾಬಾದ್

ದುಬೈನಲ್ಲಿ ಆಟ ಆರಂಭವಾದಾಗ ದೊಡ್ಡ ನಿರೀಕ್ಷೆ ಇತ್ತು. ಸನ್​​ ರೈಸರ್ಸ್​ ಹೈದ್ರಾಬಾದ್​​ ಚೇತರಿಸಿಕೊಳ್ಳಬಹುದು ಅನ್ನುವ ವಿಶ್ಲೇಷಣೆ ನಡೆಯುತ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್​​ ತಾಕತ್ತಿನ ಬಗ್ಗೆಯೂ ಚರ್ಚೆ ಆಗಿತ್ತು. ಆದರೆ ದುಬೈ ಡರ್ಬಿಯಲ್ಲಿ ಸನ್​ ರೈಸರ್ಸ್​ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್​​ 8 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್​​ ಗೆದ್ದ  ಸನ್​​ರೈಸರ್ಸ್​ ಬ್ಯಾಟಿಂಗ್​​ ಆಯ್ದುಕೊಂಡಿತ್ತು. ಕೇನ್​​ವಿಲಿಯಮ್ಸನ್​ ಆಯ್ಕೆ ತಪ್ಪು ಅನ್ನುವುದು ಗೊತ್ತಾಗಲು ಜಸ್ಟ್​​ ಮೂರೇ ಮೂರು ಎಸೆತ ಸಾಕಾಗಿತ್ತು. ಇನ್ನಿಂಗ್ಸ್​​ನ ಮೂರನೇ ಓವರ್​​ನಲ್ಲಿ ಅನ್ರಿಚ್​ ನೋರ್ಟ್ಜೆ ಅಪಾಯಕಾರಿ ಡೇವಿಡ್​​ ವಾರ್ನರ್​​ರನ್ನು ಖಾತೆ ತೆರೆಯದಂತೆ ಮಾಡಿ ಡಗ್​ಔಟ್​ಗೆ ಅಟ್ಟಿದ್ರು.  ವೃದ್ಧಿಮಾನ್​ ಸಾಹಾ ಕೇನ್​ವಿಲಿಯಮ್ಸನ್​​ ಇನ್ನಿಂಗ್ಸ್​ ಕಟ್ಟುವ ಜವಾಬ್ದಾರಿ ತೆಗೆದುಕೊಂಡರು. ಸಹಾ 2 ಬೌಂಡರಿ ಮತ್ತು 1 ಸಿಕ್ಸ್​ ಬಾರಿಸಿ ಡೆಲ್ಲಿಗೆ ಶಾಕ್​ ನೀಡುವ ಯೋಜನೆ ಮಾಡಿದ್ದರು. ಆದ್ರೆ ದಾಳಿಗಿಳಿದ ಕಗಿಸೊ ರಬಾಡಾ 18 ರನ್​​ಗಳಿಸಿದ್ದ ಸಾಹಾ ವಿಕೆಟ್​ ಹಾರಿಸಿದ್ರು.

ವಿಲಿಯಮ್ಸನ್​ ಮತ್ತು ಮನೀಶ್​ ಪಾಂಡೆ ಜೋಡಿ ವಿಕೆಟ್​ ಕಾಯ್ದುಕೊಂಡು ರನ್​ರೇಟ್​ ಏರಿಸುವ ಪ್ಲಾನ್​ ಮಾಡಿತ್ತು. ಈ ಮಧ್ಯೆ ಡೆಲ್ಲಿ ಫೀಲ್ಡರ್​​ಗಳುಸ ವಿಲಿಯಮ್ಸನ್​​ಗೆ 2 ಜೀವದಾನ ಕೂಡ ನೀಡಿದ್ದರು. ಆದರೆ ವಿಲಿಯಮ್ಸನ್​ ಇದರ ಉಪಯೋಗ ಪಡೆಯಲಿಲ್ಲ. 26 ಎಸೆತಗಳಲ್ಲಿ 18 ರನ್​​ಗಳಿಸಿದ್ದ ವಿಲಿಯಮ್ಸನ್​​ ಅಕ್ಸರ್​ ಪಟೇಲ್​​​ ಎಸೆತದಲ್ಲಿ ಹೆಟ್ಮಯರ್​ಗೆ ಕ್ಯಾಚಿತ್ತು ಔಟಾದರು.  ಮನೀಷ್​ ಪಾಂಡೆ 16 ಎಸೆತಗಳಲ್ಲಿ 17 ರನ್​​ಗಳಿಸಿ ರಬಾಡಗೆ ವಿಕೆಟ್​ ಒಪ್ಪಿಸಿದ್ರು. ಇವರ ಹಿಂದೆಯೇ  ಅನ್ರಿಚ್​ ನೋರ್ಟ್ಜೆ 3ರನ್​​ಗಳಿಸಿದ್ದ ಕೇಧಾರ್​ ಜಾಧವ್​​ ಆಟಕ್ಕೆ ಅಂತ್ಯ ಹಾಡಿದರು. ಅಕ್ಸರ್​ ಪಟೇಲ್​​ 10 ರನ್​​ಗಳಿಸಿದ್ದ ಜೇಸನ್​ ಹೋಲ್ಡರ್​​ ರನ್ನು ಪೃಥ್ವಿ ಷಾಗೆ ಕ್ಯಾಚ್​​ ಕೊಡುವಂತೆ ಮಾಡಿ ಹೈದ್ರಾಬಾದ್​ ಇನ್ನಿಂಗ್ಸ್​​ಗೆ ಶಾಕ್​ ಕೊಟ್ರು.

IPL 2021 saakshatv

ಡೆತ್​​ ಓವರ್​​ಗಳಲ್ಲಿ ಅಬ್ದುಲ್​ ಸಮದ್​ ಮತ್ತು ರಶೀದ್​ ಖಾನ್​ ಹೋರಾಟ ಮಾಡಿದರು. ಸಮದ್​​​ 28 ರನ್​​ಗಳಿಸಿದ್ರೆ, ರಶೀದ್​​ 22ರನ್​​ಗಳಿಸಿದ್ರು. ನಿಗದಿತ 20 ಓವರುಗಳಲ್ಲಿ ಎಸ್​​ಆರ್​​ಎಚ್​​ 9 ವಿಕೆಟ್​ ಕಳೆದುಕೊಂಡು 134ರನ್​​ಗಳಿಸಿತ್ತು.  ರಬಾಡಾ 3 ವಿಕೆಟ್​ ಪಡೆದ್ರೆ ಅನ್ರಿಚ್​ ನೋರ್ಟ್ಜೆ ಮತ್ತು ಅಕ್ಸರ್​​ ಪಟೇಲ್​ ತಲಾ 2 ವಿಕೆಟ್​ ಪಡೆದ್ರು.

ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಪೃಥ್ವಿ ಷಾ ಮತ್ತು ಶಿಖರ್​​ ಧವನ್​ ಬೌಂಡರಿ ಗಳ ಮೇಲೆ ಬೌಂಡರಿ ಸಿಡಿಸಿ ಉತ್ತಮ  ಆರಂಭ ತಂದುಕೊಟ್ರು. ಪೃಥ್ವಿ ಷಾ 11 ರನ್​​ಗಳಿಸಿ ಖಲೀಲ್​ ಅಹ್ಮದ್​​ಗೆ ವಿಕೆಟ್​ ಒಪ್ಪಿಸಿದ್ರು.  ಧವನ್​​ ಜೊತೆ ಸೇರಿದ ಶ್ರೇಯಸ್​​ ಅಯ್ಯರ್​​ ಹೈದ್ರಾಬಾದ್​​ ಬೌಲರ್​​ಗಳನ ಬೆವರಿಳಿಸಿದ್ರು. ಬೌಂಡರಿ, ಸಿಕ್ಸರ್​​ಗಳು ಸರಾಗವಾಗಿ ಹರಿದು ಬಂತು.  ಧವನ್​​  6 ಬೌಂಡರಿ ಮತ್ತು 1 ಸಿಕ್ಸರ್​​ ನೆರವಿನಿಂದ 42 ರನ್​​ಗಳಿಸಿ ರಶೀದ್​ಗೆ ವಿಕೆಟ್​ ಒಪ್ಪಿಸಿದ್ರು.

ಅಯ್ಯರ್​ ಜೊತೆ ಸೇರಿದ ರಿಷಭ್​ ಪಂತ್​​ ಕೂಡ ಅಬ್ಬರದ ಆಟಕ್ಕೆ ಕೈ ಹಾಕಿದ್ರು. ಪರಿಣಾಮ ಡೆಲ್ಲಿ ಗೆಲುವು ಸುಲಭವಾಯಿತು. ಅಯ್ಯರ್​​ ಸಿಕ್ಸರ್​​ ಸಿಡಿಸುವ ಮೂಲಕ ಡೆಲ್ಲಿ ಇನ್ನೂ 13 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು. ಅಯ್ಯರ್​​ 41 ಎಸೆತದಲ್ಲಿ ಅಜೇಯ 47 ರನ್​​ಗಳಿಸಿದ್ರೆ, ಪಂತ್​​ 21 ಎಸೆತಗಳಲ್ಲಿ ಅಜೇಯ 35 ರನ್​​ಗಳಿಸಿದ್ರು.  ಈ ಜಯದ ಜೊತೆಗೆ ಡೆಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು.

Tags: #Saaksha TVdcDubaiipl 2021srh
ShareTweetSendShare
Join us on:

Related Posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

by Shwetha
February 4, 2026
0

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದ ಗುತ್ತಿಗೆದಾರರ ಸಂಘವೇ ಈಗ ಭಾರೀ ವಿವಾದದ ಕೇಂದ್ರಬಿಂದುವಾಗಿದೆ. ಸಂಘದೊಳಗೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ...

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

by Shwetha
February 4, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. GBA ಅಧೀನದಲ್ಲಿರುವ 5 ನಗರ ಪಾಲಿಕೆ...

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

by Shwetha
February 4, 2026
0

ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ತುರ್ತು ಎಚ್ಚರಿಕೆಯೊಂದನ್ನು ರವಾನಿಸಿದೆ. ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರಗಳು...

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

by Shwetha
February 4, 2026
0

ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್...

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

by Shwetha
February 4, 2026
0

ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಉರ್ದು ಶಾಲೆಗಳ ಕಾರ್ಯನಿರ್ವಹಣಾ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ರಾಜಕೀಯ ವಲಯದಲ್ಲಿ ಭಾರೀ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram