Jayalalitha Death: ಮೋದಿ ವಿರುದ್ಧ ಸಂಚಲನಾತ್ಮಕ ಆರೋಪ ಮಾಡಿದ DMK ಶಾಸಕ…..
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಶಾಸಕ ಮಾರ್ಕಂಡೇಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಹಿಂದೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕೈವಾಡವಿದೆ ಎಂದು ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಸದ್ಯ ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.
ಆ ಮಹಿಳೆಯನ್ನು (ಜಯಲಲಿತಾ) ಕೊಂದವರು ಯಾರು? ಅವಳನ್ನು ಕೊಂದದ್ದು ಮೋದಿ. “ಅವರು ಪ್ರಧಾನಿ ಹುದ್ದೆಗೆ ಅವರ ವಿರುದ್ಧ ಸ್ಪರ್ದಿಯಾಗಿದ್ದರು” ಎಂದು ಮಾರ್ಕಂಡೇಯನ್ ವೀಡಿಯೊದಲ್ಲಿ ಆರೋಪಿಸಿದ್ದಾರೆ. ”ಅವಳು ಹೇಗೆ ಸ್ಪರ್ಧಿಸುತ್ತಾಳೆ? ನನ್ನ ವಿರುದ್ಧ ಯಾರೂ ಸ್ಪರ್ಧಿಸಬಾರದು. ಇದನ್ನೇ ಮೋದಿ ಹೇಳಿದ್ದು,” ಎಂಬ ಆರೋಪ ಮಾಡಿದ್ದಾರೆ.
ಸಿಟ್ಟಿಗೆದ್ದ ಬಿಜೆಪಿ
ಜಯಲಲಿತಾ ಸಾವಿನ ಹಿಂದೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಕೈವಾಡವಿದೆ ಎಂಬ ಡಿಎಂಕೆ ಶಾಸಕರ ಆರೋಪಕ್ಕೆ ಬಿಜೆಪಿ ಸಿಟ್ಟಿಗೆದ್ದಿದೆ. ಬಿಜೆಪಿ ಮುಖಂಡ ಎಸ್.ಜಿ.ಸುರಯ್ಯ ಮಾತನಾಡಿ, ಡಿಎಂಕೆ ಶಾಸಕರು ಸುಳ್ಳು ಹೇಳುವುದನ್ನು ರೂಢಿಸಿಕೊಂಡಿದ್ದಾರೆ, ಸರಕಾರದಲ್ಲಿನ ಅಕ್ರಮಗಳನ್ನು ಮುಚ್ಚಿಹಾಕಲು ಡಿಎಂಕೆ ಇಂತಹ ಗಿಮಿಕ್ ಮಾಡುತ್ತಿದೆ. ಡಿಎಂಕೆ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಆಕ್ರೋಶ ಜನರಲ್ಲಿದೆ ಎಂದರು.
ಮಾರ್ಕಂಡೇಯ ಹೇಳಿಕೆಗೆ ಕೂಡಲೇ ವಿವರಣೆ ನೀಡಬೇಕು, ಇಲ್ಲವಾದಲ್ಲಿ ಶಾಸಕರ ಬಂಧನಕ್ಕೆ ಕೋರಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕೂಡ ಟ್ವೀಟ್ನಲ್ಲಿ ಶಾಸಕರ ಆರೋಪವನ್ನು ನಿರಾಕರಿಸಿದ್ದಾರೆ. ಡಿಎಂಕೆ ಶಾಸಕರು ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಅರಿತುಕೊಳ್ಳಬೇಕು ಮತ್ತು ಬಿಜೆಪಿ ರಾಜ್ಯ ಘಟಕವು ಎಂದಿಗೂ ಮೂಕ ಪ್ರೇಕ್ಷಕರಂತೆ ಇರುವುದಿಲ್ಲ ಎಂದು ಹೇಳಿದರು.
Jayalalitha Death: DMK MLA Makes Sensational Allegation Against Modi….








