Kantara | ಚೇತನ ಅವ್ರದ್ದು ಪ್ರೊಫೆಶನಲ್ ಜಲಸ್ಸಿ: ಚಕ್ರವರ್ತಿ ಸೂಲೆಬಲೆ
ಬಾಗಲಕೋಟೆ : ಚೇತನ ಅವರಿಗೆ ಒಳ್ಳೆಯ ಚಿತ್ರ ಮಾಡಿ ಹಿಟ್ ಮಾಡಿಕೊಳ್ಳುವಂತ ನಟನಾಗಿ ಉಳಿದುಕೊಳ್ಳುವಂತೆ ಯಾವ ಸಾಮರ್ಥ್ಯ ಇಲ್ಲ.
ಅವ್ರು ಒಂದಿಲ್ಲವೊಂದು ಸುದ್ದಿಯಲ್ಲಿ ಇರಬೇಕು ಎಂದು ಕಾಂತಾರ ಚಿತ್ರದಲ್ಲಿ ಚಿತ್ರದ ಭೂತಾರಾಧನೆ ಹಿಂದೂ ಧರ್ಮದಲ್ಲ ಹೇಳುವುದು ಸರಿಯಲ್ಲ ಎಂದು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ತೇರದಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಚೇತನ ಹಿಂದು ಧರ್ಮ ವನ್ನು ಟಾರ್ಗೆಟ್ ಮಾಡುತಿದ್ದಾರೆ.
ಎಡಪಂಥೀಯರದು ಮೂಲ ಭಾರತೀಯರ ಸಂಸ್ಕೃತಿಗಳ ಬೇರೆ, ಹಿಂದೂ ಸಂಸ್ಕೃತಿ ಬೇರೆ ಅಂತಾ ಹಿಂದೂ ಧರ್ಮದ ವನ್ನು ಹೀಗಳಿಯುವುದು ತಪ್ಪು ಎಂದು ತಿಳಿಸಿದರು.

ಕಾಂತಾರಾ ಸಿನಿಮಾ ಬಗ್ಗೆ ನಟ ಚೇತನ್ ಅಹಿಂಸಾ ಫೇಸ್ ಬುಕ್ ನಲ್ಲಿ.. ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ ಆದ್ರೆ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.
ಇದು ನಿಜವಲ್ಲ. ನಮ್ಮ ಪಂಬದ ಬಹುಜನ ಸಂಪ್ರದಾಯಗಳು, ವೈದಿಕ, ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು.
ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ಬರೆದುಕೊಂಡಿದ್ದಾರೆ.








