Congress | ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ?
ಬೆಂಗಳೂರು : ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ತೆಲಂಗಾಣಕ್ಕೆ ರಾಯಚೂರು ವಿಲೀನ ಎಂಬ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾಡಿದೆ.
ಈ ಕುರಿತು ಟ್ವಟ್ಟರ್ ನಲ್ಲಿ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, ಅಭಿವೃದ್ದಿ, ಮೂಲಸೌಕರ್ಯಗಳನ್ನು ಮುಂದಿಟ್ಟು ಹಿಂದೆ ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಣಕ್ಕೆ ಆಹ್ವಾನಿಸಿದ್ದರು, ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ.ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ಮಾಡುತ್ತಿರುವ ‘ಅಣಕ’ ಅಲ್ಲವೇ ಬಸವರಾಜ ಬೊಮ್ಮಾಯಿ ಅವರೇ,ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ?

ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಶಾಸಕ ಶಿವರಾಜ್ ಪಾಟೀಲ್ರವರು ರಾಯಚೂರಿನ ಕಡೆಗಣನೆಯ ಬಗ್ಗೆ ನಿಮ್ಮದೇ ಸಚಿವರಿಗೆ ವಿವರಿಸುತ್ತಾ ರಾಯಚೂರನ್ನು ತೆಲಂಗಣಕ್ಕೆ ಸೇರಿಸಿಬಿಡಿ ಎನ್ನುತ್ತಾರೆ. ಇದು ನಿಮ್ಮ ಸರ್ಕಾರದ ದುರಾಡಳಿತಕ್ಕೆ & ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯಕ್ಕೆ ವ್ಯಕ್ತಪಡಿಸಿದ ಆಕ್ರೋಶವೇ? ಅಥವಾ #BJPvsBJP ಯ ಮುಂದುವರೆದ ಅಧ್ಯಾಯವೇ?
ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರ ಹೇಳಿಕೆಯ ಆಧಾರದಲ್ಲಿ ತೆಲಂಗಾಣದ ಸಿಎಂ ‘ರಾಯಚೂರಿನ ಜನ ತೆಲಂಗಾಣಕ್ಕೆ ಸೇರಲು ಬಯಸುತ್ತಿದ್ದಾರೆ’ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ಇಂತಹ ಗಂಭೀರ ಹೇಳಿಕೆಗೆ ನಿಮ್ಮ ಉತ್ತರವಿಲ್ಲವೇಕೆ? ನಿಮ್ಮ ಈ ‘ಮೌನ’ ಸಮ್ಮತಿಯ ಲಕ್ಷಣವೇ? ಕಲ್ಯಾಣ ಕರ್ನಾಟಕದೆಡೆಗಿನ ನಿರ್ಲಕ್ಷ್ಯವೇ? ಅಭಿವೃದ್ಧಿ ವಂಚಿಸಿದ ಪಾಪಪ್ರಜ್ಞೆಯೇ ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.








