ಜುಲೈ 25 – ಸೆಪ್ಟೆಂಬರ್ 30 ರ ನಡುವೆ ಕರ್ನಾಟಕದಲ್ಲಿ ಮಳೆಯಿಂದಾಗಿ 15,108 ಕೋಟಿ ನಷ್ಟ Karnataka rain losses
ಬೆಂಗಳೂರು, ಅಕ್ಟೋಬರ್17: ಜುಲೈ 25 ಮತ್ತು ಸೆಪ್ಟೆಂಬರ್ 30 ರ ನಡುವೆ ಕರ್ನಾಟಕವು ಮಳೆಯಿಂದಾಗಿ 15,108 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಸಲಾಗಿದೆ. Karnataka rain losses

ಆದಾಗ್ಯೂ, ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್ಡಿಆರ್ಎಫ್) ಅಡಿಯಲ್ಲಿ ಕೇವಲ 1,306 ಕೋಟಿ ರೂ.ಗಳನ್ನು ಮಾತ್ರ ಪಡೆಯಲು ರಾಜ್ಯವು ಅರ್ಹವಾಗಿದೆ.
ಈ ಅಧಿಕೃತ ನಷ್ಟದ ಅಂದಾಜುಗಳು ಉತ್ತರ ಕರ್ನಾಟಕದಲ್ಲಿ ಪ್ರಸ್ತುತ ಪ್ರವಾಹದಿಂದ ಉಂಟಾದ ಹಾನಿಗಳನ್ನು ಒಳಗೊಂಡಿಲ್ಲ.
ಬಸವಸಾಗರ ಜಲಾಶಯದಿಂದ ಕೃಷ್ಣಾಗೆ ನೀರು : ಜನರಲ್ಲಿ ಪ್ರವಾಹ ಆತಂಕ
ನಷ್ಟದ ವ್ಯಾಪ್ತಿಯ ಬಗ್ಗೆ ರಾಜ್ಯವು ಕೇಂದ್ರದೊಂದಿಗೆ ಚರ್ಚಿಸಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವೇ ದಿನಗಳಲ್ಲಿ ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದು, ಹಣವನ್ನು ಬಿಡುಗಡೆ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಸಿಎಂ ಹೇಳಿದರು. ಆಗಸ್ಟ್ನಲ್ಲಿ ಪ್ರವಾಹ ಪರಿಹಾರಕ್ಕಾಗಿ ರಾಜ್ಯವು 4,000 ಕೋಟಿ ರೂಪಾಯಿಗಳ ಸಹಾಯವನ್ನು ಕೋರಿತ್ತು.
ರಾಜ್ಯವು ಅಕ್ಟೋಬರ್ ಎರಡನೇ ಮತ್ತು ಮೂರನೇ ವಾರದಲ್ಲಿ ಮೂರನೇ ಪ್ರವಾಹಕ್ಕೆ ತುತ್ತಾಗಿದೆ. ಜುಲೈ 25 ಮತ್ತು ಸೆಪ್ಟೆಂಬರ್ 15 ರ ನಡುವೆ ಮತ್ತು ಸೆಪ್ಟೆಂಬರ್ 15 ರಿಂದ 30 ರವರೆಗೆ ಸರ್ಕಾರವು ಸುಮಾರು 5,521 ಕೋಟಿ ಮೌಲ್ಯದ 10.07 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ನಷ್ಟವನ್ನು ಅಂದಾಜು ಮಾಡಿದೆ. ಇದಕ್ಕಾಗಿ ಎಸ್ಡಿಆರ್ಎಫ್ ಅಡಿಯಲ್ಲಿ 813 ಕೋಟಿ ರೂ ಪರಿಹಾರ ದೊರಕಿದೆ.
ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ
ಅಂತೆಯೇ, 30,455 ಕಿ.ಮೀ ರಸ್ತೆಗಳು, 1,659 ಸಣ್ಣ ನೀರಾವರಿ ಯೋಜನೆಗಳು ಮತ್ತು ಟ್ಯಾಂಕ್ಗಳು ಮತ್ತು 444 ನೀರು ಸರಬರಾಜು ಯೋಜನೆಗಳಿಗೆ ಹಾನಿಯಾಗಿದೆ .
ಉತ್ತರ ಕರ್ನಾಟಕದ ಪ್ರವಾಹದ ಒಟ್ಟಾರೆ ಹಾನಿಯನ್ನು ಸರ್ಕಾರ ಅಂದಾಜು ಮಾಡಿದ ನಂತರವೇ ನಷ್ಟದ ಅಂಕಿ ಅಂಶಗಳು ತಿಳಿದು ಬರಲಿದೆ. ಭೀಮಾದಲ್ಲಿ ಭಾರಿ ಮಳೆ ಮತ್ತು ನದಿ ಉಕ್ಕಿ ಹರಿಯುತ್ತಿರುವುದರಿಂದ 2.2 ಲಕ್ಷ ಹೆಕ್ಟೇರ್ ಭೂಮಿಯಲ್ಲಿನ ಬೆಳೆಗಳು ಹಾನಿಗೊಳಗಾದವು ಎಂದು ಆರಂಭಿಕ ಅಂದಾಜುಗಳು ತೋರಿಸಿವೆ.

ಅಕ್ಟೋಬರ್ 30 ರೊಳಗೆ ಪ್ರವಾಹದಲ್ಲಿ ಎಷ್ಟು ನಷ್ಟವಾಗಿದೆ ಎಂಬ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ಸೀಮಿತ ಎಸ್ಡಿಆರ್ಎಫ್ ಅನುದಾನದ ಪ್ರಶ್ನೆಗೆ, ಎಸ್ಡಿಆರ್ಎಫ್ ಅನುದಾನ ಖಾಲಿಯಾದರೆ ಹೆಚ್ಚುವರಿ ಪರಿಹಾರವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಬಿಡುಗಡೆ ಮಾಡಲಾಗುವುದು ಎಂದು ರಾಜನ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








