ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ನಮ್ರತಾ ಬಳಿ ಸಾರಿ ಕೇಳಿದ್ರು ಕಾರ್ತಿಕ್: ಸಂಗೀತಾ ಮಾತು ಕೇಳಕ್ಕೇ ರೆಡಿ ಇಲ್ಲ ವಿನಯ್!

admin by admin
October 19, 2023
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ನಮ್ರತಾ ಬಳಿ ಸಾರಿ ಕೇಳಿದ್ರು ಕಾರ್ತಿಕ್: ಸಂಗೀತಾ ಮಾತು ಕೇಳಕ್ಕೇ ರೆಡಿ ಇಲ್ಲ ವಿನಯ್!

Karthik asked Namrata: Vinay, I am not ready to listen to Sangita’s words!

Related posts

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

February 2, 2026
ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

February 2, 2026

ಟಾಸ್ಕ್‌ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾರ್ತಿಕ್ ಕೋಪದಿಂದ ಆರ್ಭಟಿಸಿದ್ದನ್ನು ನೋಡಿ ನಮ್ರತಾ ನಡುಗಿಹೋಗಿದ್ದರಂತೆ. ಕಾರ್ತಿಕ್‌ಗೆ ತಾನು ಪ್ರತಾಪ್‌ ಪರವಾಗಿ ನಿಂತು ತಪ್ಪುಮಾಡಿದೆ ಅನಿಸಿದೆ. ತಾವು ಕೋಪದಿಂದ ಕೂಗಾಡಿದ್ದಕ್ಕೆ ಅವರು ನಮ್ರತಾ ಅವರ ಕ್ಷಮೆಯನ್ನೂ ಕೇಳಿದ್ದಾರೆ.
ಮನೆಯೊಳಗೆ ವಿನಯ್‌-ಸಂಗೀತಾ ಜಗಳ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮನೆಯ ಸದಸ್ಯರೆಲ್ಲರೂ ಯಾರ ಪರವಾಗಿ ಮಾತಾಡುವುದು, ಯಾರ ತಪ್ಪನ್ನು ಹೇಳುವುದು ಎಂದು ತಿಳಿಯದೇ ಗೊಂದಲಗೊಂಡಂತಿದ್ದಾರೆ.

ಈ ನಡುವೆ ಕಾರ್ತಿಕ್-ನಮ್ರತಾ-ಸಂಗೀತಾ ನಡುವೆ ನಡೆದ ಮಾತುಕತೆ ಈ ಕಥೆಯ ಮತ್ತೊಂದು ಮಗ್ಗುಲನ್ನು ಕಾಣಿಸುವಂತಿದೆ. ಈ ವಿಡಿಯೊ JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ ‘Deep ಆಗಿ ನೋಡಿ’ ಸೆಗ್ಮೆಂಟ್‌ನಲ್ಲಿ ದಾಖಲಾಗಿದೆ.

ಕಾರ್ತಿಕ್: ಸಾರಿ, ಇಫ್‌ ಐ ವಾಸ್ ಟೂ ರೂಢ್‌…
ನಮ್ರತಾ: ನಂಗ್ ನಿಜವಾಗ್ಲೂ ಭಯ ಆಯ್ತು… ನೀವು ಆ ಥರ ಮಾತಾಡ್ತಿರಾ? ನೀವು ಹಾಗೆ ಇದೀರಾ?
ಕಾರ್ತಿಕ್: ಇಲ್ಲ, ಹಾಗೇನಿಲ್ಲ… ನಂಗ್ ಕೋಪ ಬಂತು ಆಕ್ಚುಲಿ… ರೂಢ್ ಆಗಿರಬೇಕು ಅನ್ನೋದಲ್ಲ… ವಿನಯ್ ಬೇರೆ ಎಲ್ಲರಿಗೂ ಹೇಳ್ತಾ ಇದ್ದ… ಯಾರೂ ಮಾತಾಡ್ತಿರ್ಲಿಲ್ಲ… ಆಗ ಇವ್ನು ಮಧ್ಯ ಬಂದ. ಜೋರಾಗೇ ಮಾತಾಡ್ತಿದ್ದ… ಐ ವಾಸ್ ಟೇಕಿಂಗ್ ಸ್ಟ್ಯಾಂಡ್ ಫಾರ್ ಪ್ರತಾಪ್ ಅಷ್ಟೆ. ಬಟ್ ಕೊನೆಗೂ ನಾನು ಸಪೋರ್ಟ್‌ ಮಾಡಿದ್ದು ತಪ್ಪು ಅಂತ ಪ್ರತಾಪ್‌ ಪ್ರೂವ್ ಮಾಡಿಬಿಟ್ಟ…
ನಮ್ರತಾ: ನೋ… ಇಟ್ಸ್ ಓಕೆ… ಬಟ್ ನಂಗೆ ನಿಜವಾಗ್ಲೂ ಭಯ ಆಯ್ತು… ಅಕ್ಷರಶಃ ನಡುಗಲು ಶುರುಮಾಡಿದ್ದೆ. ನಂಗೆ ಅಭ್ಯಾಸ ಇಲ್ಲ ಅದು…
ಕಾರ್ತಿಕ್: ಸಾರಿ… ಟೀಮ್ ಕೋ ಆರ್ಡಿನೇಷನ್ ಬೇಕು. ಅದು ಇಂಪಾರ್ಟೆಂಟ್… ಎಲ್ರೂ ಬ್ರೇಕ್‌ಡೌನ್ ಆಗ್ತಿದಾರೆ…
ನಮ್ರತಾ: ಅದನ್ನೇ ನಾನು ಹೇಳೋಕೆ ಬಂದೆ. ಇನ್ ಸೆಕ್ಯೂರಿಟಿ…
ಅಷ್ಟರಲ್ಲಿ ಅಲ್ಲಿಗೆ ಸಂಗೀತಾ ಬರುತ್ತಾರೆ.

ಸಂಗೀತಾ: ಆಂ…
ನಮ್ರತಾ: ಆರ್‍‌ ಯು ಓಕೆ?
ಸಂಗೀತಾ: ನಿಮ್ ಜೊತೆಗೆ ಜಗಳ ಮಾಡ್ಬೇಕು ಅಂತಿರ್ಲಿಲ್ಲ ನಂಗೆ…
ನಮ್ರತಾ: ಅಲ್ಲಾ… ನಾನು ಪ್ರತಾಪ್‌ಗೆ ಟಾಸ್ಕ್‌ ಏನು ಅಂತ ಎಕ್ಸ್‌ಪ್ಲೇನ್ ಮಾಡ್ತಿದ್ದೆ. ಅಷ್ಟರಲ್ಲಿ ನೀವು ಬಂದ್ರಲ್ಲಾ… ‘ಥ್ರೆಟನಿಂಗ್’ ಅಂದ್ರಿ… ಅದು ತಪ್ಪು ಶಬ್ದ.. ಅದನ್ನು ಬಳಸಬೇಡಿ ಅಷ್ಟೇ ನಾನು ಹೇಳಿದ್ದು…
ಕಾರ್ತಿಕ್: ಆ ಶಬ್ದ ಬಳಸಬಾರದಿತ್ತು. ಇಟ್ಸ್ ಓಕೆ…
ನಮ್ರತಾ: ನಂಗೆ ನಿಮ್ಮ ವಿರುದ್ಧವಾಗಲಿ, ಪ್ರತಾಪ್‌ ವಿರುದ್ಧವಾಗಲಿ ಏನೂ ಇಲ್ಲ…
ಸಂಗೀತಾ: ಹೌದು… ನಾನು ಆ ಶಬ್ದವನ್ನು ಭಳಸಬಾರದಿತ್ತು.
ಕಾರ್ತಿಕ್: ಅವಳು ಒಂದು ಹೀಟ್‌ ಮೊಮೆಂಟ್‌ನಲ್ಲಿ ಹೇಳಿದ್ದಾರೆ. ನಾನೂ ಒಂದು ಹೀಟ್ ಮೊಮೆಂಟ್‌ನಲ್ಲಿ ಮಾತಾಡ್ಬಿಟ್ಟೆ.

ಸಂಗೀತಾ: ವಿಷಯ ಏನೇ ಇರಲಿ. ನನಗೆ ಯಾರ ಜೊತೆಗೂ ಫೈಟ್ ಮಾಡಲು ಇಷ್ಟವಿಲ್ಲ. ಮತ್ತೆ ಹೀಗಾಗದಂತೆ ನೋಡಿಕೊಳ್ಳೋಣ ಅಷ್ಟೆ.
ಕಾರ್ತಿಕ್: ಎಲ್ಲೆಲ್ಲಿಂದ ಎಲ್ಲೆಲ್ಲೋ ಹೋಯ್ತು… ಏನೇನೋ ಆಯ್ತು…
ಸಂಗೀತಾ ಅಲ್ಲಿಂದ ಹೊರಡುತ್ತಾರೆ. ಕಾರ್ತಿಕ್ ಅವಳ ಕೈ ಹಿಡಿದು ನಿಲ್ಲಿಸಿಕೊಳ್ಳುತ್ತಾರೆ.
ಕಾರ್ತಿಕ್: ಎಲ್ಲಿ? ಯಾಕೆ?
ಸಂಗೀತಾ: ವಿನಯ್ ಜೊತೆ ಮಾತಾಡ್ಕೊಂಡ್ ಬರ್ತೀನಿ…
ಕಾರ್ತಿಕ್: ಏ… ಯಾಕೆ?
ಸಂಗೀತಾ: ನಾನ್ ಮಾತಾಡ್ಕೊಂಡ್ ಬರ್ತೀನಿ.
ನಮ್ರತಾ: ಅವ್ರು ಮಾತಾಡ್ತಾರಂತೆ. ಮಾತಾಡ್ಲಿ ಬಿಡಿ…
ಸಂಗೀತಾ ಅಲ್ಲಿಂದ ಹೊರಡುತ್ತಾರೆ.
ಕಾರ್ತಿಕ್: ಅವಳಿಗೆ ಹುಶಾರಿಲ್ಲ… ಎಲ್ಲ ಕ್ಯಾಮೆರಾ ಎದುರಿಗೆ ಹೋಗಿ ನಾನ್ ಹೋಗ್ತೀನಿ ಹೋಗ್ತೀನಿ ಅಂತಿದಾಳೆ.

ನಮ್ರತಾ: ಹೌದಾ… ಕಳಿಸಿಬಿಡ್ತಾರಾ ಬಿಗ್‌ಬಾಸ್‌?
ಅಷ್ಟರಲ್ಲಿ ವಿನಯ್ ಅಲ್ಲಿಗೆ ಬರುತ್ತಾರೆ. ಸಂಗೀತಾರನ್ನೂ ಹಾದು, ಕಾರ್ತಿಕ್ ಮತ್ತು ನಮ್ರತಾ ನಡುವಿನಿಂದಲೇ ಹಾದು ಹೋಗುತ್ತಾರೆ.

ಸಂಗೀತಾ ‘ವಿನಯ್’ ಎಂದು ಕರೆದರೂ ಕೇಳದೆ ಮುಂದೆ ನಡೆಯುತ್ತಾರೆ. ನಮ್ರತಾ, ವಿನಯ್‌ ಅವರ ಕೈ ಹಿಡಿದು ನಿಲ್ಲುತ್ತಾರೆ… ಅವರಿಂದಲೂ ಬಿಡಿಸಿಕೊಂಡು ಮುಂದೆ ನಡೆದುಬಿಡುತ್ತಾರೆ. ನಮ್ರತಾ, ‘ಅಲ್ಲಾ.. ವಿನಯ್.. ಏನೋ ಮಾತಾಡ್ಬೇಕು…. ಕೇಳಿ ಅಂತಷ್ಟೆ’ ಎಂದು ಹೇಳುತ್ತಿದ್ದರೂ ಕೇಳದ ಹಾಗೆ ಹೊರಟುಬಿಡುತ್ತಾರೆ.

ಕಾರ್ತಿಕ್, ಸಂಗೀತಾ ಮತ್ತು ನಮ್ರತಾ ಜಗಳವನ್ನುಬಗೆಹರಿಸಿಕೊಳ್ಳುವ ಮೂಡ್‌ನಲ್ಲಿದ್ದರೆ ವಿನಯ್ ಮಾತ್ರ ಇನ್ನೂ ಫೈಟಿಂಗ್ ಮೂಡ್‌ನಲ್ಲಿಯೇ ಇದ್ದಂತಿದೆ. ಅವರ ಕೋಪ ಯಾವಾಗ ಹೇಗೆ ಯಾರ ಮೇಲೆ ಸ್ಫೋಟಗೊಳ್ಳುತ್ತದೆಯೋ ಹೇಳುವುದು ಕಷ್ಟವೇ.

https://jiocinema.onelink.me/fRhd/bcgx0p6j
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
#BiggBossKannada #BBK10 #KichchaSudeep #BBK10onJioCinema #BBKOnJioCinema #ColorsKannada

Tags: Bigg Boss Kannadabigg boss kannada 10bigg boss kannada balibigg boss kannada fightsbigg boss kannada kicha sudeepbigg boss kannada season 10bigg boss kannada season 10 contestantsbigg boss kannada season 10 housebigg boss kannada season 10 promobigg boss kannada season 8bigg boss kannada trollbigg boss season 10colors kannadacolors kannada bigg bosscolors kannada bigg boss season 10Kannadakannada bigg bosskannada series
ShareTweetSendShare
Join us on:

Related Posts

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
February 2, 2026
0

ಬೆಂಗಳೂರು: ಇರಾನ್ ಬದಲಿಗೆ ಭಾರತವು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಈಗ ಭಾರತೀಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ...

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

by Shwetha
February 2, 2026
0

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರನ್ನು ಜಾಗತಿಕ...

ಬಜೆಟ್ 2026: ಶ್ರೀಗಂಧದ ಕಂಪಿಗೆ ಹೈಸ್ಪೀಡ್ ವೇಗ! ಹೈಟೆಕ್ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ

ಬಜೆಟ್ 2026: ಶ್ರೀಗಂಧದ ಕಂಪಿಗೆ ಹೈಸ್ಪೀಡ್ ವೇಗ! ಹೈಟೆಕ್ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ

by Shwetha
February 2, 2026
0

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸಂಸತ್ತಿನಲ್ಲಿ ಮಂಡಿಸಿದ 2026ರ ಕೇಂದ್ರ ಬಜೆಟ್, ಕರ್ನಾಟಕದ ಪಾಲಿಗೆ ಭರಪೂರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ದೇಶದ ಆರ್ಥಿಕತೆಯ...

ಕೇಂದ್ರ ಬಜೆಟ್ 2026 : ಐಟಿ ರಿಟರ್ನ್ ಫೈಲ್ ಮಾಡುವ ಮುನ್ನ ಎಚ್ಚರ! ಸಣ್ಣ ತಪ್ಪಿಗೂ ಬೀಳುತ್ತೆ ಭಾರೀ ದಂಡ

ಕೇಂದ್ರ ಬಜೆಟ್ 2026 : ಐಟಿ ರಿಟರ್ನ್ ಫೈಲ್ ಮಾಡುವ ಮುನ್ನ ಎಚ್ಚರ! ಸಣ್ಣ ತಪ್ಪಿಗೂ ಬೀಳುತ್ತೆ ಭಾರೀ ದಂಡ

by Shwetha
February 2, 2026
0

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ 2026ರ ಸಾಲಿನ ಕೇಂದ್ರ ಬಜೆಟ್ ತೆರಿಗೆ ವಂಚಕರ ನಿದ್ದೆ ಕೆಡಿಸಿದೆ. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಮತ್ತು ತೆರಿಗೆ...

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (02-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 2, 2026
0

ದಿನ ಭವಿಷ್ಯ: 02-02-2026 1. ಮೇಷ ರಾಶಿ ಇಂದು ನಿಮಗೆ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram