Karunya
ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬಿರಿಸಿನಿಂದ ನಡೆಯುತ್ತಿದೆ. ಮುಂಜಾನೆಯಿಂದಲೇ ಜನರು, ಹಾಗೂ ಸ್ಯಾಂಡಲ್ ವುಡ್ ತಾರೆಯರು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅದ್ರಂತೆ ನಟಿ ಕಾರುಣ್ಯ ರಾಮ್ ಅವರು ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರೊಂದಿಗೆ ಮತಗಟ್ಟೆಯತ್ತ ಬಂದು ಮತದಾನ ಮಾಡಿದ್ದಾರೆ.
ಆರ್ ಆರ್ ನಗರದಲ್ಲಿ ಮತಚಲಾಯಿಸಿ ಮಾತನಾಡಿರುವ ಕಾರುಣ್ಯ ಮತದಾನ ಮಾಡುವುದು ಪ್ರತಿಯೊಬ್ಬರು ಹಕ್ಕು. ನಿಮ್ಮ ನಾಯಕರನ್ನು ನೀವೇ ಆಯ್ಕೆ ಮಾಡಬೇಕಾಗಿದೆ. ನಮ್ಮ ಮತಕ್ಕೆ ಅಮೂಲ್ಯವಾದ ಬೆಲೆ ಇದೆ. ಕೊರೊನಾ ಕಾರಣದಿಂದ ಭಯಗೊಂಡು ಕೆಲವರು ವೋಟ್ ಮಾಡಲು ಬರುವುದಿಲ್ಲ. ಆ ರೀತಿ ಮಾಡಬೇಡಿ. ಕೊವಿಡ್ ಹಿನ್ನೆಲೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ವ್ಯವಸ್ಥೆಯೂ ಚೆನ್ನಾಗಿ ಆಗಿದೆ. ಕೊರೊನಾ ಪರಿಸ್ಥಿತಿಯಲ್ಲಿ ಮಾತ್ರ ಕಟ್ಟುನಿಟ್ಟಾಗಿ ಮತದಾನ ಸಾಗುತ್ತಿದೆ. ಇದು ಇಲ್ಲಿಗೆ ಸೀಮಿತವಾಗಬಾರದು. ಮುಂದಿನ ಚುನಾವಣೆ ಸಮಯದಲ್ಲೂ ಇಂತಹದ್ದೇ ವ್ಯವಸ್ಥೆ ಇರಬೇಕು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನೆನಪಿರಲಿ ಪ್ರೇಮ್, ನಟಿ ಅಮೂಲ್ಯ ಸೇರಿದಂತೆ ಅನೇಕ ತಾರೆಯರು ಹಾಗೂ ರಾಜಕಾರಳಿಗಳು ಇಂದು ಮುಂಜಾನೆಯಿಂದಲೇ ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದ್ದಾರೆ.
Karunya
ಒಂದೇ ಸಿನಿಮಾ , ಐವರು ಸ್ಟಾರ್ ನಿರ್ದೇಶಕರು : ಚಂದನವನದಲ್ಲಿ ವಿಭಿನ್ನ ಪ್ರಯತ್ನ..!
ಕೋಮಲ್ ಅವರ ಮುಂದಿನ ಚಿತ್ರದ ಟೈಟಲ್ ಗೂ ‘ಕೊರೊನಾ’ಗೂ ಏನ್ ಸಂಬಂಧ..!
RR ನಗರ ‘ಉಪಸಮರ’: ಹಕ್ಕು ಚಲಾಯಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಹಿಂದೂ ಭಾವನೆಗಳಿಗೆ ಧಕ್ಕೆ ಆರೋಪ : ಬಿಗ್ ಬಿ ವಿರುದ್ಧ ಎಫ್ ಐಆರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel