ಹೊಸದಿಲ್ಲಿ, ಮೇ19 : ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದೆ ಮತ್ತು ಈ ವಿಚಾರದಲ್ಲಿ ನಾವು ತಲೆ ಹಾಕುವುದಿಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಇದೇ ಸಂದರ್ಭದಲ್ಲಿ ದೆಹಲಿಯನ್ನು ಗುರಿಯಾಗಿಸುವ ಯೋಜನೆಯನ್ನು ನಿರಾಕರಿಸಿದೆ. ಕಾಶ್ಮೀರ ವಿವಾದ ಬಗೆಹರಿಯದ ಹೊರತು ಭಾರತದೊಂದಿಗೆ ಸ್ನೇಹ ಬೆಳೆಸುವುದು ಅಸಾಧ್ಯ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾದ ಬೆನ್ನಲ್ಲೇ ತಾಲಿಬಾನ್ ನಿಂದ ಈ ಹೇಳಿಕೆ ಬಂದಿದೆ.
ಸಾಮಾಜಿಕ ತಾಣಗಳಲ್ಲಿ ಪ್ರಕಟವಾಗಿದ್ದ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿ ಅದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಸೇರಬಹುದೆಂದು ಹೇಳಿಕೆಯನ್ನು ನಿರಾಕರಿಸಿರುವ ತಾಲಿಬಾನ್ ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಒತ್ತಿ ಹೇಳಿದೆ.
ತಾಲಿಬಾನ್ ಕಾಶ್ಮೀರದಲ್ಲಿ ಜಿಹಾದ್ ಸೇರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಹೇಳಿಕೆ ತಪ್ಪಾಗಿದೆ…. ಇಸ್ಲಾಮಿಕ್ ಎಮಿರೇಟ್ನ ನೀತಿಯು ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ಸ್ಪಷ್ಟ ಎಂದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ವಕ್ತಾರ ಸುಹೇಲ್ ಶಾಹೀನ್ ಸೋಮವಾರ ಸಂಜೆ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕಾಶ್ಮೀರ ವಿವಾದ ಬಗೆಹರಿಯದ ಹೊರತು ಭಾರತದೊಂದಿಗೆ ಸ್ನೇಹ ಬೆಳೆಸುವುದು ಅಸಾಧ್ಯ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾದ ವರದಿಗಳು ಹರಿದಾಡುತ್ತಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಅಫ್ಘಾನಿಸ್ತಾನದ ರಾಷ್ಟ್ರೀಯ ಆಂದೋಲನವಾದ ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಡೆಯನ್ನು ನಾವು ಬೆಂಬಲಿಸುವುದಿಲ್ಲ. ಈ ಕುರಿತು ನಕಲಿ ಟ್ವೀಟ್ ಹರಿಬಿಡಲಾಗಿದೆ. ಇಂತಹ ಸುಳ್ಳು ಪ್ರಚಾರ ಸರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಭಾರತಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವರದಿಗಳನ್ನು ದೃಢೀಕರಿಸಲು ಭಾರತವು ಪರೋಕ್ಷವಾಗಿ ಕೆಲಸ ಮಾಡಿದ ನಂತರ ತಾಲಿಬಾನ್ ವಕ್ತಾರರು ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ ಎಂದು ಕಾಬೂಲ್ ಮತ್ತು ದೆಹಲಿ ಮೂಲದ ರಾಜತಾಂತ್ರಿಕರು ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಆದರೆ ತಾಲಿಬಾನ್ ಒಂದೇ ಮನಸ್ಥಿತಿಯ ಜನರ ಗುಂಪನ್ನು ಒಳಗೊಂಡಿಲ್ಲ, ಬದಲಾಗಿ ವಿಭಿನ್ನ ನಂಬಿಕೆಗಳನ್ನು ಹೊಂದಿರುವ ಜನರನ್ನು ಒಳಗೊಂಡಿದೆ. ತಾಲಿಬಾನ್ ನ ಒಂದು ಗುಂಪಿನ ಜನ ಪಾಕಿಸ್ತಾನದೊಂದಿಗೆ ಸಂಪರ್ಕವನ್ನು ಹೊಂದಿದ್ದರೆ, ಕೆಲವರು ತಮ್ಮದೇ ಆದ ಅಭಿಪ್ರಾಯವನ್ನು ಬೆಂಬಲಿಸುತ್ತಾರೆ. ಅಫ್ಘಾನ್ ತಾಲಿಬಾನ್ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಶುರಾ ಕ್ವೆಟ್ಟಾ ಅದರ ಮೂಲ ಪಾಕಿಸ್ತಾನದಲ್ಲಿ ನೆಲೆಗೊಂಡಿರುವುದರಿಂದ, ಪಾಕಿಸ್ತಾನದ ಒತ್ತಡದಿಂದಾಗಿ ಅವರ ನಿಲುವಿನಲ್ಲಿ ಬದಲಾವಣೆಗಳಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಪಾಕ್ – ಅಫ್ಘಾನ್ ವೀಕ್ಷಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಅಫ್ಘಾನಿಸ್ತಾನದಲ್ಲಿ ರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಯುಎಸ್ ಕಾಬೂಲ್ ನಿಂದ ಹಿಂದೆ ಸರಿಯಲು ಸಜ್ಜಾಗಿದೆ.
ಸೋವಿಯತ್-ಅಫಘಾನ್ ಯುದ್ಧದ ಸಮಯದಲ್ಲಿ ಇಸ್ಲಾಮಾಬಾದ್ ಯುಎಸ್ ಗೆ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಹಿಂದಿನ ಕಾಲಕ್ಕಿಂತ ಭಿನ್ನವಾಗಿ, ಈ ಬಾರಿ ಪಾಕಿಸ್ತಾನವು ಚೀನಾದ ಮೇಲೆ ಸವಾರಿ ಮಾಡುತ್ತಿದೆ. ಅವರು ರಷ್ಯಾ ಮತ್ತು ಇರಾನ್ ನಲ್ಲಿ ನಿಕಟ ಪಾಲುದಾರರನ್ನು ಹೊಂದಿದ್ದಾರೆ. ಯುಎಸ್, ಅಶ್ರಫ್ ಗನಿ ಮತ್ತು ಅಬ್ದುಲ್ಲಾ ಅಬ್ದುಲ್ಲಾ ಅವರು ಅಧಿಕಾರ ಹಂಚಿಕೆಯಲ್ಲಿ ಕೈಜೋಡಿಸಿದ್ದಾರೆ ಎಂದು ದೃಢಪಡಿಸಿದರೆ, ತಾಜಿಕ್-ಪಶ್ತೂನ್ ನಾಯಕ ತಾಲಿಬಾನ್ ಜೊತೆ ಒಪ್ಪಂದಕ್ಕೆ ಸಹಿ ಮಾಡಲು ಬಯಸುತ್ತಾರೆ.ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ತಾಲಿಬಾನ್ ಆಳ್ವಿಕೆಯ ಕಾಬೂಲ್ ಅನ್ನು ಯಾವುದೇ ಬಾಲಾಕೋಟ್ ದಾಳಿಗೆ ಕಡಿಮೆ ಇಲ್ಲದಂತೆ ಭಾರತವನ್ನು ಗುರಿಯಾಗಿಸಲು ಬಳಸುವುದರಿಂದ ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ವಿಭಿನ್ನ ನಿಲುವುಗಳು ಇವೆ. ಅಷ್ಟೇ ಅಲ್ಲ ಪಾಕಿಸ್ತಾನದ ತಾಳಕ್ಕೆ ತಕ್ಕಂತೆ ಅಫ್ಘಾನಿಸ್ತಾನ ಕುಣಿಯುತ್ತದೆ.








