Congress ನಲ್ಲಿ ಸಿಎಂ ಸ್ಥಾನಕ್ಕೆ ಅರ್ಹವಾಗಿರುವ ವ್ಯಕ್ತಿಯೆಂದರೆ ಅದು ಖರ್ಗೆ
ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹವಾಗಿರುವ ವ್ಯಕ್ತಿಯೆಂದರೆ ಅದು ಖರ್ಗೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂಬ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಬಿಜೆಪಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ…
ಸೋನಿಯಾ ಗಾಂಧಿಯವರು ಸಂಕಟದಲ್ಲಿದ್ದಾರೆಂಬ ಕಾರಣಕ್ಕಾಗಿ ರಾಜ್ಯಸಭಾ ವಿಪಕ್ಷ ನಾಯಕ @kharge ಅವರು ಹುಟ್ಟುಹಬ್ಬವನ್ನೇ ನಿರಾಕರಿಸಿದ್ದಾರೆ. ಈ ಬಗ್ಗೆ ಖರ್ಗೆ ಬರೆದಿರುವುದು ತ್ಯಾಗ ಪತ್ರವೋ ಅಥವಾ ಉತ್ಸವದ ಭರಾಟೆಯಲ್ಲಿರುವವರಿಗೆ ನೀಡಿದ ಗುದ್ದೋ?.
ಮೂಲ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಲಸೆ ನಾಯಕ ಸಿದ್ದರಾಮಯ್ಯ ಬಣ “ಪಾಪಾ ಪಾಂಡು” ವಾಗಿಸಿದೆ. ತಮ್ಮ ತಾಳಕ್ಕೆ ತಕ್ಕ ಹಾಗೆ ಖರ್ಗೆಯವರನ್ನು ಸಿದ್ದರಾಮಯ್ಯ ಈ ಬಣ ಕುಣಿಸುತ್ತಿದೆ. ಅನಿವಾರ್ಯತೆ ಹೇಗಿದೆಯಂದರೆ ಖರ್ಗೆಯವರ “ಚಿರಂಜೀವಿ”ಯೇ ಈಗ ಸಿದ್ದರಾಮೋತ್ಸವದ ಸಿದ್ಧತಾ ಸಭೆಯಲ್ಲಿ ಭಾಗಿಯಾಗುವಂತಾಗಿದೆ.
https://twitter.com/BJP4Karnataka/status/1549704934131519488?s=20&t=ZnR0x1y4UyecqRNEkvbCvQ
ದಲಿತ ನಾಯಕರನ್ನು ಕಾಂಗ್ರೆಸ್ ಕೇವಲವಾಗಿ ನೋಡುತ್ತಿದೆ ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಅಸಹಾಯಕ ಸ್ಥಿತಿಯೇ ಸಾಕ್ಷಿ.ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹವಾಗಿರುವ ವ್ಯಕ್ತಿಯೆಂದರೆ ಅದು ಖರ್ಗೆ. ಖರ್ಗೆ ಅವರು ದಲಿತರೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಹಣಿಯುತ್ತಿರುವುದೇ?
ಒಂದು ಕಡೆ ಸಿದ್ದು ಬಣ, ಮತ್ತೊಂದೆಡೆ ಡಿಕೆಶಿ ಬಣ. 2 ಬಣಗಳ ಲೆಕ್ಕಾಚಾರ, ಸತ್ಯಕ್ಕೆ ದೂರವಿದೆ ಎಂದು ಬೇನಾಮಿ ಅಧ್ಯಕ್ಷೆಗೆ ತಿಳಿದಿದೆ. ಹೀಗಾಗಿಯೇ ಇಂತಹ ಹೇಳಿಕೆ ಹೊರಬರುತ್ತಿದೆ.
ಈ ಹೇಳಿಕೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುರ್ಚಿಗಾಗಿ ಕಿತ್ತಾಡುತ್ತಿರುವ ಸಿದ್ದು ಹಾಗೂ ಡಿಕೆಶಿ ಅವರಿಗೆ ನೀಡಿದ ಗುದ್ದು ಎಂದು ಪರಿಗಣಿಸಬಹುದೇ?#ಕಾಂಗ್ರೆಸ್ಕಲಹ
— BJP Karnataka (@BJP4Karnataka) July 20, 2022
ಒಂದು ಕಡೆ ಸಿದ್ದು ಬಣ, ಮತ್ತೊಂದೆಡೆ ಡಿಕೆಶಿ ಬಣ. 2 ಬಣಗಳ ಲೆಕ್ಕಾಚಾರ, ಸತ್ಯಕ್ಕೆ ದೂರವಿದೆ ಎಂದು ಬೇನಾಮಿ ಅಧ್ಯಕ್ಷೆಗೆ ತಿಳಿದಿದೆ. ಹೀಗಾಗಿಯೇ ಇಂತಹ ಹೇಳಿಕೆ ಹೊರಬರುತ್ತಿದೆ.ಈ ಹೇಳಿಕೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುರ್ಚಿಗಾಗಿ ಕಿತ್ತಾಡುತ್ತಿರುವ ಸಿದ್ದು ಹಾಗೂ ಡಿಕೆಶಿ ಅವರಿಗೆ ನೀಡಿದ ಗುದ್ದು ಎಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದೆ.








