ಬೆಂಗಳೂರು: ಇತ್ತೀಚೆಗಷ್ಟೇ ಸಿನಿಮಾ ಸ್ಟೈಲ್ ನಲ್ಲಿ ವ್ಯಕ್ತಿಯೊಬ್ಬನನ್ನು ಶಾಸಕರು ಹಾಗೂ ಸಂಸದರು ಹೆಸರೇಳಿ ಅಪಹರಿಸಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ನಡೆದ ಕಿಡ್ನಾಪ್ (Kidnap) ಕೇಸ್ ಸಂಬಂಧ ಹಲಸೂರು ಠಾಣೆ ಪೊಲೀಸರು (Halasuru Police Station) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಜೂನ್ 16 ರಂದು ಯುವಕನನ್ನು ಕಿಡ್ನಾಪ್ ಮಾಡಿದ್ದರು. ಅಪಹರಣದ ನಂತರ ಯುವಕನ ಕತ್ತಿನ ಮೇಲೆ ಚಾಕು ಇಟ್ಟು ಐದು ಕೋಟಿ ಹಣ, ಬಿಟ್ ಕಾಯಿನ್ ಗಳಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐಷಾರಾಮಿ ಜೀವನ ನಡೆಸುತ್ತಿದ್ದ ರಾಜು ಎಂಬ ಯುವಕನನ್ನು ಆಂಧ್ರ ಮೂಲದ ಆರೋಪಿಗಳ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ಈತ ದುಬೈ ಲೈಫ್, ಐಷಾರಾಮಿ ಕಾರು, ಹಿಂದೆ ಹುಡುಗರು, ಪಾರ್ಶ್ ಲೈಫ್ (ವಿಲಾಸಿ ಜೀವನ) ನಡೆಸುತ್ತಿದ್ದ. ಅಲ್ಲದೇ, ಹಲವು ಸೆಲೆಬ್ರಿಟಿಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದ. ಈತನನ್ನು ಶ್ರೀಮಂತನೆಂದು ಭಾವಿಸಿ ಆರೋಪಿಗಳು ಆತನನ್ನು ಕಿಡ್ನಾಪ್ ಮಾಡಿದ್ದರು. ನಂತರ ತೆಲಂಗಾಣಕ್ಕೆ ಕರೆದೊಯ್ದು ಫಾರ್ಮ್ ಹೌಸ್ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು.
ರಾಜು ಸ್ನೇಹಿತ ಕಿಡ್ನಾಪ್ ಬಗ್ಗೆ ಹಲಸೂರು ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಿದ್ದಾರೆ. ಇನ್ನೂ ಬಂಧನವಾಗಿದ್ದ ರಾಜು ಹೆಸರಿನಲ್ಲಿ ಕೂಡ ತೆಲಂಗಾಣದಲ್ಲಿ ಎಫ್ ಐಆರ್ ದಾಖಲಾಗಿತ್ತು. ಆತ ಕೂಡ ವಂಚನೆ ಕೇಸ್ ನಲ್ಲಿ ಜಾಮೀನು ಪಡೆದು ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದ. ಕಳೆದ ಆರು ತಿಂಗಳಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಹೋಟೆಲ್ ನಲ್ಲಿ ವಾಸವಾಗಿತ್ತು. ಕಿಡ್ನಾಪ್ ಆಗಿದ್ದ ರಾಜು ತೆಲಂಗಾಣ ಸಿಎಂ ಆಗಿದ್ದ ಜಗನ್ ಹಾಗೂ ಅವರ ಸಹೋದರ ಅನಿಲ್ ಹೆಸರು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸಿದ್ದ. ಈ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.