ಕೊಡಗು: ಅಕ್ಟೋಬರ್ ತಿಂಗಳ ಅಂತ್ಯ ಬಂದರೂ ಮಳೆ ಮಾತ್ರ ನಿಲ್ಲುತ್ತಿಲ್ಲ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪಶ್ಚಿಮಘಟ್ಟದ ಗಿರಿಶಿಖರಗಳು ಹಚ್ಚ-ಹಸುರಿನಿಂದ ಕೂಡಿದ್ದು ಕೋವಿಡ್ ಸಂರ್ಭದಲ್ಲಿ ಮನೆಯ ಗೂಡಿನಲ್ಲಿ ಬೆಚ್ಚಗೆ ಕುಳಿತಿದ್ದ ಮಂದಿಗೆ ಪ್ರಕೃತಿಯ ಸೌಂದರ್ಯ ಕೈಬೀಸಿ ಕರೆಯುತ್ತಿದೆ.
ಇಂತಹ ಅಪರೂಪದ ಸ್ಥಳ ಕೊಡಗು, ಹಾಸನ ಮತ್ತು ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಿರುವ ನಿಸರ್ಗ ರಮಣೀಯ ತಾಣ ಪಟ್ಲ ಬೆಟ್ಟ. ಈ ಪ್ರದೇಶ ಸಕಲೇಶಪುರ ತಾಲ್ಲೂಕಿಗೆ ಸೇರಿದೆಯಾದರು, ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಭೇಟಿ ನೀಡುವ ಪ್ರವಾಸಿಗರು ಪಟ್ಲ ಬೆಟ್ಟಕ್ಕೂ ಭೇಟಿ ನೀಡುತ್ತಾರೆ.
ವನಗೂರು ಮಾರ್ಗವಾಗಿ ಬಿಸಿಲೆ ಘಾಟ್ ಮೂಲಕ ಕೇವಲ 9 ಕಿಲೋಮೀಟರ್ ಬಂದರೆ ಸಾಕು ಪಟ್ಲಬೆಟ್ಟದ ತಪ್ಪಲಿಗೆ ತಲುಪಬಹುದು. ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿರುವ ಪ್ರದೇಶ ಚಾರಣಿಗರಿಗೆ ಹೇಳಿ ಮಾಡಿಹಿದಂತ ತಾಣ. ಆದರೆ, ಸೂಕ್ತ ರಸ್ತೆಯಿಲ್ಲದೆ ನಮ್ಮ ಮಾಂದಲ್ಪಟ್ಟಿಯಂತೆ ಜೀಪುಗಳನ್ನೇ ಅವಲಂಭಿಸಬೇಕಾದ ಅನಿವಾರ್ಯತೆಯಿದೆ.

ಬೆಟ್ಟದ ತುತ್ತ ತುದಿಗೆ ತಲುಪುತ್ತಿದ್ದಂತೆ ಮೂರು ಜಿಲ್ಲೆಗಳಿಗೆ ಸೇರುವ ಪಶ್ಚಿಮಘಟ್ಟದ ದೂರದಲ್ಲಿ ಕಾಣಸಿಗುವ ಜಲಧಾರೆಗಳು, ಮಂಜು ಮಳೆಯ ಚೆಲ್ಲಾಟ, ಚುಮುಚುಮು ಚಳಿ ಒಂದಷ್ಟು ರಿಲ್ಯಾಕ್ಷ್ ಮಾಡುವುದಂತೂ ಸತ್ಯ.
ಕಾಯುತ್ತಿರುತ್ತಾರೆ ಕಿಡಿಗೇಡಿಗಳು..!
ಇಲ್ಲಿಗೆ ನಮ್ಮ ಸ್ವಂತ ವಾಹನದಲ್ಲಿ ತೆರಳಿದರೆ ಪ್ರಕೃತಿ ವೀಕ್ಷಣೆ ಮಾಡಬೇಕು. ಅಂದರೆ ಜೀಪುಗಳನ್ನು ಅನಿವಾರ್ಯವಾಗಿ ಅವಲಂಭಿಸಬೇಕು. ಕೆಲವರು ತಮ್ಮದೇ ಜೀಪು, ಎಸ್ಯುವಿಗಳಲ್ಲಿ ಸಾಹಸ ಮಾಡಿದರೆ ಪುಟ್ಟ ಕಾರುಗಳಲ್ಲಿ ಬರುವವರು ಬಾಡಿಗೆ ಜೀಪು ಪಡೆದು ತೆರಳುತ್ತಾರೆ.

ಹೀಗೆ ಮೂದಲೇ ವರ್ಣಿಸಿದ ಎಲ್ಲಾ ಸಂತೋಷ ಸಿಕ್ಕಿ ವಾಪಸ್ಸಾಗುತ್ತಿದ್ದಂತೆ ಇದ್ದ ಸಂತೋಷವೆಲ್ಲ ಇಳಿದೆ ಹೋಗುವುದಂತೂ ಸತ್ಯ. ತಪ್ಪಲಿನಲ್ಲಿ ಸ್ವಂತ ವಾಹನ ನಿಲ್ಲಿಸಿ ಹೋದರೆ ಬರುವಷ್ಟರಲ್ಲಿ ಕಿಡಿಗೇಡಿಗಳು ತಮ್ಮ ವಿಕೃತಿ ಮೆರೆದಿರುತ್ತಾರೆ. ವಾಹನಗಳಿಗೆ ಹಾನಿ ಮಾಡುವುದು, ಪಂಚರ್ ಮಾಡುವುದು, ಸರ್ವೇ ಸಾಮಾನ್ಯವಾಗಿದೆ. ಕಚ್ಚಾ ರಸ್ತೆಯಿಂದ ಕೆಲವು ವೇಳೆ ಪಂಚರ್ ಆಗುವುದು ಸಹಜ. ಆದರೆ ಎಲ್ಲಾ ವಾಹನಗಳಿಗೂ ಇದೇ ಗತಿಯಾಗಿರುತ್ತದೆ.
ಕೊಡಗಿನ ಪಟ್ಲಬೆಟ್ಟದ ಪ್ರಕೃತಿ ವೈಭವ; ಪ್ರವಾಸಿಗರಿಗೆ ಕಿಡಿಗೇಡಿಗಳ ನಿತ್ಯ ಕಾಟ..!
ಕಾರುಗಳಿಗೆ ಬದಲಿ ಚಕ್ರಗಳಿರುತ್ತದೆ, ಒಂದು ವೇಳೆ ಎರಡು ಚಕ್ರಗಳೂ ಪಂಚರ್ ಆದರೆ ಗತಿಯೇನು. ಇನ್ನು ದ್ವಿಚಕ್ರವಾಹನದವರ ಪಾಡು ಹೇಳತೀರದು. ಹೀಗೆ ಪಂಚರ್ ಸರಿ ಪಡಿಸಲು 18 ಕಿಲೋಮೀಟರ್ ನಲ್ಲಿರುವ ಹೆತ್ತೂರು ಇಲ್ಲವೇ, 52 ಕಿಲೋ ಮೀಟರ್ ದೂರದ ಸಕಲೇಶಪುರಕ್ಕೆ ಬಾಡಿಗೆ ವಾಹನ ಹುಡುಕಿ ಹೋಗಿ ರಿಪೇರಿ ಮಾಡಿಸಿಕೊಂಡು ಬರಬೇಕಾಗುತ್ತದೆ.

ಸದಾ ಮಳೆಗಾಳಿ ಇರುವುದರಿಂದ ಈ ಪ್ರದೇಶದಲ್ಲಿ ರಿಪೇರಿ ಕೆಲಸ ಮುಗಿಸಿಕೊಂಡು ಬರುವವರೆಗೆ ಕುಟುಂಬದವರು ವಾಹನದಲ್ಲೇ ಕುಳಿತಿರಬೇಕಾಗುತ್ತದೆ. ಶೌಚಾಲಯವಾಗಲಿ, ಕುಡಿಯುವ ನೀರಾಗಲಿ, ಕನಿಷ್ಟ ಒಂದು ಅಂಗಡಿಯಾಗಲಿ ಇಲ್ಲ. ಇದರ ನಡುವೆ ಪಡ್ಡೆ ಹುಡುಗರ ಗುಂಡು ತುಂಡು ಪಾರ್ಟಿ, ಅವುಗಳ ಅವಶೇಷಗಳನ್ನು ನೋಡಿಯೇ ಹೆಂಗಸರು-ಮಕ್ಕಳು ಭಯಭೀತರಾಗುವುದಂತೂ ಸತ್ಯ.
ಸದ್ಯ ಪ್ರವಾಸಿಗರ ಸಂಖ್ಯೆ ಇತ್ತಕಡೆ ಭೇಟಿ ನೀಡುವುದು ಹೆಚ್ಚಾಗುತ್ತಿದೆ. ಕನಿಷ್ಟಪಕ್ಷ ಕಿಡಿಗೇಡಿಗಳ ಕಾಟ ತಪ್ಪಿಸಲು ಪೋಲಿಸರನ್ನು ಮತ್ತು ಮೂಲಭೂತ ಸೌಕರ್ಯ ಒದಗಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕಿದೆ.
ವರದಿ: ಗಿರಿಧರ್ ಕೊಂಪುಳೀರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel






