ಮಾದಪ್ಪನ ಬಗ್ಗೆ ಮಾಡ್ರನ್ ಆಗಿ ಹಾಡು ಮಾಡಿ ರಿಲೀಸ್ ಮಾಡಿದ್ದ ಚಂದನ್ ಶೆಟ್ಟಿ ಅವರ ಕೋಲುಮಂಡೆ ಹಾಡು ಭಾರೀ ವಿವಾದ ಸೃಷ್ಟಿಸಿತ್ತು. ಈ ಹಾಡಿನಿಂದಾಗಿ ಚಂದನ್ ಶೆಟ್ಟಿ ಮಾದಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ಧಾರ್ಮಿಕ ಸಂಘಟನೆಗಳು, ಮಹದೇಶ್ವರನ ಭಕ್ತರು ಹಾಗೂ ಚಾಮರಾಜನಗರದ ಜನರು ಚಂದನ್ ಶೆಟ್ಟಿಯ ಕೋಲುಮಂಡೆಯ ಹಾಡನ್ನು ವಿರೋಧಿಸಿದ್ದರು.
ಕೋಲುಮಂಡೆ ಜಂಗಮದೇವ ಎಂಬ ಜಾನಪದ ಹಾಡನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿರುವ ಚಂದನ್ ಶೆಟ್ಟಿ ಇತಿಹಾಸ ತಿರುಚಿ ಹಾಡು ಚಿತ್ರಿಕರಿಸಿದ್ದಾರೆ. ಈ ಹಾಡಿನಲ್ಲಿ ಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಮ್ಮರನ್ನು ಅವಮಾನಿಸಲಾಗಿದೆ ಎಂದು ಟೀಕಿಸಿ ಖಂಡಿಸಿದ್ದರು. ಇದರ ಪರಿಣಾಮ ಚಂದನ್ ಶೆಟ್ಟಿ ಅವರ ಮಾದಪ್ಪನ ಭಕ್ತರ ಬಳಿ ಕ್ಷಮೆಯಾಚಿಸಿ ಯೂಟ್ಯೂಬ್ನಿಂದ ಹಾಡು ಡಿಲೀಟ್ ಮಾಡಿದ್ದರು. ಇದೀಗ ಮತ್ತೆ ಹೊಸ ರೂಪದಲ್ಲಿ ಹಾಡನ್ನ ರಿಲೀಸ್ ಮಾಡಲು ಮಾಡಿದ್ದಾರೆ.
ಈ ಬಾರಿ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಕೇವಲ ಲಿರಿಕಲ್ ಸಾಂಗ್ ಅಪ್ಲೌಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೇವಲ ಚಂದನ್ ಶೆಟ್ಟಿಯ ಚಿತ್ರಗಳನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಸಾಹಿತ್ಯ ಹಾಗೂ ಸಂಗೀತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಈ ಬಾರಿಯ ವಿಡಿಯೋದಲ್ಲಿ ಸಂಕಮ್ಮನ ಪಾತ್ರದಲ್ಲಿ ನಟಿಸಿದ್ದ ನಟಿಯ ಫೋಟೋಗಳನ್ನು ಬಳಸಿಲ್ಲ.







