ಮೂಗಿಗೆ ನಿಂಬೆ ರಸ ಹಾಕಿಸಿಕೊಂಡಿದ್ದ ಶಿಕ್ಷಕ ಸಾವು
ರಾಯಚೂರು : ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಸಿಕೊಂಡರೇ ಕೊರೊನಾ ಬರೋದಿಲ್ಲ ಅನ್ನೋ ವಿಚಾರ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಈ ಸುದ್ದಿಯನ್ನ ಕೇಳಿ ಓದಿ ಎಷ್ಟೋ ಮಂದಿ ಇದನ್ನ ಟ್ರೈ ಮಾಡಿದ್ದಾರೆ. ಅದೇ ರೀತಿ ರಾಯಚೂರಿನನ ಸಿಂಧನೂರಿನಲ್ಲಿ ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಸಿಕೊಂಡಿದ್ದ ಶಾಲಾ ಶಿಕ್ಷಕ ಮೃತಪಟ್ಟಿದ್ದಾರೆ.
ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯ ಶಾಲಾ ಶಿಕ್ಷಕ ಬಸವರಾಜ್ ಮೃತ ದುರ್ದೈವಿ. ಬಸವರಾಜ್ ಅವರು ಬೆಳಗ್ಗೆ ಮೂಗಿಗೆ ನಿಂಬೆಹಣ್ಣಿನ ಹನಿ ಬಿಟ್ಟು ಕೊಂಡಿದ್ದರು.
ನಂತರ ಕೆಲಸಮಯಗಳ ಬಳಿಕ ಬಸವರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ದಾರಿ ಮಧ್ಯೆಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಆದ್ರೆ ಬಸವರಾಜ್ ಅವರು ನಿಂಬೆ ಹಣ್ಣಿನ ರಸದಿಂದಲೇ ಮೃತಪಟ್ಟಿದ್ದಾರೆ ಅನ್ನೋದಕ್ಕೆ ಯಾವುದೇ ಪುರಾವೆ ಇಲ್ಲ. ಬಸವರಾಜ್ ಮೃತಪಡಲು ನಿಜವಾದ ಕಾರಣ ಏನು ಎನ್ನುವುದು ಇನ್ನೂ ದೃಢಪಟ್ಟಿಲ್ಲ.










