ಕೊರೊನಾ ಲಾಕ್ ಡೌನ್ ಅಂತ್ಯಗೊಂಡ ಬಳಿಕ ನಮ್ಮ ಕುಡ್ಲಾ ವಾಸಿಸಲು ಸೂಕ್ತ ನಗರವನ್ನಾಗಿ ಮಾಡಲು ನಿಮ್ಮಲ್ಲಿ ಕೆಲವು ಅಂಶಗಳನ್ನು ಪಾಲಿಸುವಂತೆ ವಿನಂತಿಸುತ್ತೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಮಂಗಳೂರಿನ ಜನತೆಗೆ ಟ್ವೀಟ್ ಮಾಡಿದ್ದಾರೆ.
ಶಾಸಕ ವೇದವ್ಯಾಸ್ ಕಾಮತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ
‘ ನಮಸ್ಕಾರ ಕುಡ್ಲಾ,
ನಾವು ಲಾಕ್ಡೌನ್ನಿಂದ ಹೊರಬಂದಾಗ ನಾನು ನಿಮ್ಮೆಲ್ಲರನ್ನು ಕೆಲವು ವಿಷಯಗಳನ್ನು ಪಾಲಿಸುವಂತೆ ವಿನಂತಿಸುತ್ತೇನೆ.
1. ನಾವು ಪ್ರಕೃತಿಯನ್ನು ಗೌರವಿಸೋಣ.
2. ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳೋಣ.
3. ನಾವು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸೋಣ.
4. ನಾವು ಯಾವಾಗ ಬೇಕಾದರೂ ಜನರಿಗೆ ಸಹಾಯ ಮಾಡೋಣ.
5. ನಾವು ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸೋಣ
6. ನಾವು ಸ್ಥಳೀಯ ವ್ಯವಹಾರವನ್ನು ಮಾತ್ರ ಬೆಂಬಲಿಸೋಣ
7. ನಾವು ಎಲ್ಲಾ ಟ್ರಾಫಿಕ್ ನಿಯಮಗಳನ್ನು ಅನುಸರಿಸೋಣ.
8. ನಾವು ಅನಗತ್ಯವಾಗಿ ಕರ್ಕಶ ಶಬ್ದ ಮಾಡದೆ, ಕುಡ್ಲಾವನ್ನು ಶಬ್ದ ಮಾಲಿನ್ಯದಿಂದ ಮುಕ್ತಗೊಳಿಸೋಣ.
9. ನಾವು ಎಲೆಕ್ಟ್ರಿಕ್ ಅನ್ನು ಉಳಿಸೋಣ.
10. ಮಂಗಳೂರು ವಾಯುಮಾಲಿನ್ಯ ಮುಕ್ತವಾಗಿಸಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸೋಣ. (ಸಂಪೂರ್ಣ ಕರೋನಾ ಬಿಕ್ಕಟ್ಟು ಮುಗಿದ ನಂತರ)
11. ತುಳು ಲಿಪಿ ಕಲಿಯಲು ಮತ್ತು ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಪಾಕಪದ್ಧತಿಯನ್ನು ಉತ್ತೇಜಿಸಲು ಹೆಚ್ಚಿನ ಆಸಕ್ತಿ ತೋರಿಸಿ.
ಪ್ರಕೃತಿಯ ಕಡೆಗೆ ನಮ್ಮ ಎಸಗಿರುವ ತಪ್ಪುಗಳನ್ನು ಯೋಚಿಸಲು ಮತ್ತು ಸರಿಪಡಿಸಲು ನಮಗೆ ಸಮಯ ಸಿಕ್ಕಿದೆ, ಈ ಸಮಯದಲ್ಲಿ ನಗರವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಯೋಚಿಸೋಣ. ನಮ್ಮ ಕುಡ್ಲಾ ವಾಸಿಸಲು ಸೂಕ್ತ ನಗರವನ್ನಾಗಿ ಮಾಡೋಣ’ ಎಂದು ಬರೆದಿದ್ದಾರೆ.
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
• ಆಕಾಶ್ ಅಂಬಾನಿ ಅವರು ಜಿಯೋದ ಎಐ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು • ಜಿಯೋ ಇಂಟೆಲಿಜೆನ್ಸ್ ನಿಂದ ಜಿಯೋ ಆರೋಗ್ಯ ಎಐ ವರೆಗಿನ ಅನೇಕ...








