ಮಲೆನಾಡಿಗೆ ಶಾಪವಾಗಿ ಪರಿಣಮಿಸುತ್ತಿರುವ ಗೇರು ನೆಡುತೋಪುಗಳ – ಹೊಸನಗರಕ್ಕೆ ಹೊಸ ತಲೆನೋವು: Saakshatv Naavu kelada charitre episode2
ಎಂಭತ್ತರ ದಶಕದಲ್ಲಿ ಮಲೆನಾಡಿನ ಸಾವಿರಾರು ಎಕರೆ ಅರಣ್ಯವನ್ನು ಮೈಸೂರು ಕಾಗದ ಕಾರ್ಖಾನೆಗೆ (MPM) ಗುತ್ತಿಗೆ ನೀಡಿದ ಪರಿಣಾಮವಾಗಿ ನಮ್ಮ ಪಶ್ಚಿಮ ಘಟ್ಟದ ಸಹಜ ಮಳೆಕಾಡುಗಳು ಹಂತ ಹಂತವಾಗಿ ಮಾಯವಾಗಿ ಅವುಗಳ ಜಾಗದಲ್ಲಿ ಅಕೇಶಿಯ ಮತ್ತು ನೀಲಗಿರಿ ನೆಡತೋಪುಗಳು ಪ್ರತ್ಯಕ್ಷವಾದವು. ನೀರಿನ ತೊಟ್ಟಿಲು ಎಂದು ಬಿಂಬಿತವಾಗಿರುವ ಮಲೆನಾಡಿನ ಪರಿಸರವನ್ನು ಹಾಳುಗೆಡುವಲು ಪ್ರಮುಖ ಪಾತ್ರವಹಿಸಿದ ಈ ನೆಡುತೋಪುಗಳು ಅಕ್ಷರಶಃ ನಮ್ಮ ಮಲೆನಾಡನ್ನು ಕ್ಷಯರೋಗ ಪೀಡಿತ ಮಾಡಿತು. ಇಲ್ಲಿಗೆ ನಿಲ್ಲದ ಅರಣ್ಯ ಇಲಾಖೆಯ ದಾಹ ಈಗ ಇನ್ನೊಂದು ಆವಾಂತರಕ್ಕೆ ಎಡೆಮಾಡಿಕೊಟ್ಟಿದೆ. Saakshatv Naavu kelada charitre episode2

ಮಲೆನಾಡಿನಲ್ಲಿ ಅಳಿದುಳಿದ ಅರಣ್ಯವನ್ನು ಸಾಮಾಜಿಕ ಅರಣ್ಯಕ್ಕೆ ಒಪ್ಪಿಸಿ ಅವರ ಮೂಲಕ ಘಟ್ಟದ ಕೆಳಗೆ ಅಂದರೆ ಕರಾವಳಿಯಲ್ಲಿ ಸ್ಥಾಪಿಸಿರುವ “ಕರ್ನಾಟಕ ಗೇರು ಅಭಿವೃದ್ಧಿ ನಿಗಮ” ಕ್ಕೆ (Karnataka Cashew Development Corporation Ltd) ಮಲೆನಾಡಿನ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಿ ಅದರಲ್ಲಿ ಇರುವ ಸಹಜ ಕಾಡನ್ನು ಬೃಹತ್ ಯಂತ್ರದ ಮುಖಾಂತರ ತೆಗೆದು ಅಲ್ಲಿ ಗೇರು ನೆಡತೋಪುಗಳನ್ನು ನಿರ್ಮಿಸುವ ಹೊಸ ಪರ್ವ ಶುರು ಆಗಿದೆ. ಮೈಸೂರು ಕಾಗದ ಕಾರ್ಖಾನೆಗೆ ನೀಡಿದ ಅರಣ್ಯದ ಗುತ್ತಿಗೆ ಮುಗಿದ್ದಿದ್ದು ಆ ಅರಣ್ಯದಲ್ಲಿ ಮತ್ತೆ ಹೇಗೆ ಸಹಜ ಕಾಡನ್ನು ನಿರ್ಮಿಸೋಣ ಎಂದು ಯೋಚಿಸುವಾಗ ಇನ್ನೊಂದು ಸಮಸ್ಯೆ ಮಲೆನಾಡಿಗರ ನಿದ್ದೆ ಕೆಡಿಸಿದೆ.
ಕೆಲವು ತಿಂಗಳ ಹಿಂದೆ ತೀರ್ಥಹಳ್ಳಿ ಭಾಗದಲ್ಲಿ ಸಹಜ ಕಾಡನ್ನು ಗೇರು ನೆಡತೋಪುಗಳಾಗಿ ಮಾಡಲು ಹೋದಾಗ ಸ್ಥಳೀಯರು ನಡೆಸಿದ ಉಗ್ರ ಹೋರಾಟದ ಫಲವಾಗಿ ಸ್ಥಳೀಯ ಶಾಸಕರು, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಈಗ ತೀರ್ಥಹಳ್ಳಿಯಲ್ಲಿ ಅವರ ಕಾಳು ಬೇಯಲ್ಲಿಲ್ಲ ಎಂದು ಹೊಸನಗರದ ಕಡೆ ಮುಖ ಮಾಡಿದ್ದಾರೆ.
ನಿನ್ನೆ ಸಂಭವಿಸಿದ ಅಕಾಲಿಕ ಮಳೆಗೆ ಹೊಸನಗರದ ಜನರ ಜೀವನ ತ್ತತರಿಸಿ ಹೋದರೆ ಈ ಕರ್ನಾಟಕ ಗೇರು ಅಭಿವೃದ್ಧಿ ನಿಗಮದವರು ಬೃಹತ್ ಹಿಟಾಚಿಯ ಮೂಲಕ ಆ ಮಳೆಯಲ್ಲಿ ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಕಾರ್ಗಡಿಯ (ಕಾರಣಗಿರಿ) ಸುತ್ತಲೂ ಗುಡ್ಡ ಮತ್ತು ಬೆಟ್ಟಗಳಲ್ಲಿ ಬೆಳೆದಿರುವ ಮರಗಳನ್ನು ಉರುಳಿಸಿ ಗೇರು ನೆಡಲು ಜಾಗವನ್ನು ಸಮತಟ್ಟು ಮಾಡುತ್ತಿದ್ದರು. ಇಂದು ಬೆಳಗ್ಗೆ ಮಳೆ ಕಡಿಮೆ ಆಗುತ್ತಿದ್ದಂತೆ ಸ್ಥಳೀಯರು ಹೋಗಿ ಹಿಟಾಚಿಯನ್ನು ತಡೆ ಹಿಡಿದು ಅಲ್ಲಿಂದ ಹೊರದಬ್ಬಿದ್ದಾರೆ. ಈ ಕ್ಷೇತ್ರವು ತೀರ್ಥಹಳ್ಳಿ ಶಾಸಕರಿಗೆ ಸೇರಿದ್ದು ಅರಣ್ಯ ಇಲಾಖೆ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧಿಕಾರಿಗಳು ಮಾಡಿದ ಈ ಘಟನೆ ಜನರಿಂದ ಆಯ್ಕೆಯಾದ ನಾಯಕರಿಗೆ ಈ ಅಧಿಕಾರಿಗಳು ಎಷ್ಟು ಮರ್ಯಾದೆ ಕೊಡುತ್ತಾರೆ ಎಂದು ತೋರಿಸುತ್ತದೆ.

ಇನ್ನೂ ಈ ಗುತ್ತಿಗೆದಾರರು ಮತ್ತು ಕೆಲಸದವರು ದೂರದ ಉತ್ತರ ಕರ್ನಾಟಕದವರಾಗಿದ್ದು ಇವರಿಗೆ ಇಲ್ಲಿಯ ಸೂಕ್ಷ್ಮ ಪರಿಸರದ ಅರಿವೇ ಇಲ್ಲ ಮೇಲಾಗಿ ಅರಣ್ಯದ ಬಗ್ಗೆ ಮರಗಳ ಬಗ್ಗೆ ಗಂಧಗಾಳಿಯೇ ಗೊತ್ತಿಲ್ಲ ಅಂತಹವರನ್ನು ಕರೆದುಕೊಂಡು ಬಂದರೆ ಅವರು ನೋಡು ನೋಡುತ್ತಲೇ ನಮ್ಮ ಮಲೆನಾಡನ್ನು ಬಯಲು ಮಾಡಿ ಹೋಗುತ್ತಾರೆ.
ನಮ್ಮ ಮಲೆನಾಡನ್ನು ಉಳಿಸ ಬೇಕಾದರೆ ಈ ಕರಾವಳಿಯ “ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ” ಒಂದಿಂಚು ಅರಣ್ಯವನ್ನು, ಗುಡ್ಡ ಮತ್ತು ಬೆಟ್ಟವನ್ನು ನೀಡ ಬಾರದು. ಅರಣ್ಯ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ವಹಿಸದ್ದಿದ್ದರೆ ನಾವುಗಳು ಉಗ್ರ ಹೋರಾಟಕ್ಕೆ ತಯಾರಿ ಮಾಡಿಕೊಳ್ಳ ಬೇಕಾಗಬಹುದು. ಬಲ್ಲಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಈ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಗುತ್ತಿಗೆದಾರ ಹುಂಚದ ಕಡೆ ಹೋಗಲು ತಯಾರಿ ನಡೆಸುತ್ತಿದ್ದು ಅಲ್ಲಿಯ ಸ್ಥಳೀಯರು ಇದರ ಬಗ್ಗೆ ಜಾಗೃತರಾಗ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಮಲೆನಾಡು ಮಲೆನಾಡಿಗಿ ಉಳಿಯಬೇಕಿದ್ದರೇ ಸ್ವಾಭಾವಿಕ ಕಾಡುಗಳು ಬೆಳಯಬೇಕೇ ವಿನಃ ಸರ್ಕಾರ ಅಥವಾ ಅರಣ್ಯ ಇಲಾಖೆಯ ನೆಡುತೋಪಾಗಲೀ ಗೇರು ಪ್ಲಾಂಟೇಷನ್ ಆಗಲೀ ಅಗತ್ಯವಿಲ್ಲ.
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
-ಅಜಯ್ ಕುಮಾರ್ ಶರ್ಮ
ಪರಿಸರ ಹೋರಾಟಗಾರರು
ಶಿವಮೊಗ್ಗ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








