ಮಯಾಂಕ್ ಬ್ಯಾಟಿಂಗ್ ಹಿಂದೆ ರಾಹುಲ್, ಗವಾಸ್ಕರ್ ಮಹಿಮೆ mayank-agarwal saaksha tv
ಮುಂಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದ್ದಾರೆ.
ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಡಕೌಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದರು.
ಈ ಹಂತದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಈ ಆಘಾತದಿಂದ ತಂಡಕ್ಕೆ ಚೇತರಿಕೆ ನೀಡುವ ಜವಾಬ್ದಾರಿ ಕನ್ನಡಿಗ ಮಯಾಂಕ್ ಅಗರ್ವಾಲ್ ಮೇಲಿತ್ತು.
ಈ ಜವಾಬ್ದಾರಿಯನ್ನು ತುಂಬಾ ನೀಟಾಗಿ ನಿಭಾಯಿಸಿದ ಮಯಾಂಕ್ ಎಲ್ಲರು ಅಗರ್ ವ್ಹಾವ್ ಎಂಬಂತೆ ಬ್ಯಾಟ್ ಬೀಸಿದರು.
ಸಂಕಷ್ಟದ ಸಮಯದಲ್ಲಿ ಅಯ್ಯರ್ ಜೊತೆ ಕೂಡಿದ ಮಯಾಂಕ್ ಟೀಂ ಇಂಡಿಯಾವನ್ನು ಸುಸ್ಥಿತಿಗೆ ತಂದರು.
ನಾಲ್ಕನೇ ವಿಕೆಟ್ಗೆ ಮಯಾಂಕ್ ಮತ್ತು ಶ್ರೇಯಸ್ ಅಯ್ಯರ್ 80 ರನ್ಗಳನ್ನು ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು.
ಮಯಾಂಕ್ ಅರ್ಧಶತಕದ ಬಳಿಕ ಬೌಂಡರಿ, ಸಿಕ್ಸರ್ಗಳ ಮೂಲಕ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿದ್ದರು.
ಆದರೆ ಶ್ರೇಯಸ್ ಎಜಝ್ ಎಸೆತದಲ್ಲಿ 18 ರನ್ಗಳಿಸಿದ್ದಾಗ ಔಟ್ ಆದರು. ಮಯಾಂಕ್ ವೃದ್ಧಿಮಾನ್ ಸಾಹಾ ಜೊತೆ ಸೇರಿಕೊಂಡು ಇನ್ನಿಂಗ್ಸ್ ಕಟ್ಟಿದರು.
ಅಷ್ಟೇ ಅಲ್ಲ ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಶತಕದ ಸಂಭ್ರಮ ಆಚರಿಸಿಕೊಂಡರು. ಹಾಗೇ ಮೊದಲ ದಿನದಾಟದಲ್ಲಿ 125 ರನ್ ಗಳಿಸಿ ಅಜೇಯರಾಗಿ ಉಳಿದರು.
ಮಯಾಂಕ್ ಅವರ ಈ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ತಮ್ಮ ಬ್ಯಾಟಿಂಗ್ ಬಗ್ಗೆ ಅಗರ್ವಾಲ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಅವರು ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಮಯಾಂಕ್ ಹೇಳಿದ್ದಾರೆ.
ಮೊದಲ ದಿನದಾಟದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಗರ್ವಾಲ್, ಇನ್ನಿಂಗ್ಸ್ ಆರಂಭದಲ್ಲಿ ಬ್ಯಾಟ್ ಸ್ವಲ್ಪ ಕೆಳಗಿಟ್ಟು ಆಡುವಂತೆ ಗವಾಸ್ಕರ್ ಅವರು ಸಲಹೆ ನೀಡಿದ್ದರು.
ಅವರು ಹೇಳಿದಂತೆ ಬ್ಯಾಟಿಂಗ್ ಟೆಕ್ನಿನಿಕ್ ಬದಲಿಸಿಕೊಂಡೆ. ಅಲ್ಲದೇ ಸುನೀಲ್ ಗವಾಸ್ಕರ್ ವಿಡಿಯೋಗಳನ್ನು ನೋಡಿ ಅಭ್ಯಾಸ ಮಾಡಿಕೊಂಡೆ. ಇದು ನನಗೆ ಸಹಕಾರಿ ಆಯ್ತು ಎಂದಿದ್ದಾರೆ.
ಇನ್ನು ಇದೇ ವೇಳೆ ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿದ ಮಯಾಂಕ್, ರಾಹುಲ್ ಸರ್ ನನ್ನ ಬಳಿ ಬಂದು. ನಿನಗೆ ಸಿಕ್ಕ ಈ ಅವಕಾಶವನ್ನ ನೀನು ಸದುಪಯೋಗಪಡಿಸಿಕೊಳ್ಳಬೇಕು.
ಮೈದಾನದಲ್ಲಿ ನೀನು ಉತ್ತಮ ಪ್ರದರ್ಶನ ನೀಡಬೇಕು. ನೀನು ಕ್ರೀಸ್ ನಲ್ಲಿ ಸೆಟ್ ಆದ ಬಳಿಕ ದೊಡ್ಡ ಸ್ಕೋರ್ ಮಾಡುವತ್ತ ಗಮನಹರಿಸುವಂತೆ ಹೇಳಿದ್ದರು. ಅವರು ಹೇಳಿದಂತೆ, ನಾನು ಕ್ರೀಸ್ನಲ್ಲಿದ್ದಾಗ ದೊಡ್ಡ ಸ್ಕೋರ್ ಮಾಡಲು ಪ್ರಯತ್ನಿಸಿದೆ ಎಂದಿದ್ದಾರೆ.









