Rohit Sharma : ರೋಹಿತ್ ಕ್ಯಾಪ್ಟನ್ಸಿಗೆ ಬಗ್ಗೆ ಸಿರಾಜ್ ಹೇಳಿದ್ದು ಹೀಗೆ..
ಈ ಬಾರಿಯ ಐಪಿಎಲ್ ನಲ್ಲಿ ವೈಫಲ್ಯವಾದ್ರೂ ಮೊಹ್ಮದ್ ಸಿರಾಜ್ ಅವರನ್ನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಟೀಂಇಂಡಿಯಾಗೆ ಆಯ್ಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಸಿರಾಜ್, ಟಿ 20 ಮಾದರಿಯಿಂದ ಸಡನ್ ಆಗಿ ಟೆಸ್ಟ್ ಕ್ರಿಕೆಟ್ ಗೆ ಬದಲಾಗೋದು ಸವಾಲಿನ ಕೆಲಸವಾಗಿದೆ. ಆದ್ರೆ ಇದಕ್ಕಾಗಿ ನಾನು ಸಾಕಷ್ಟು ಪರಿಶ್ರಮಪಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ರೋಹಿತ್ ಶರ್ಮಾ ಬಗ್ಗೆ ಮಾತನಾಡಿ, ”ರೋಹಿತ್ ಪ್ರತಿಯೊಬ್ಬ ಆಟಗಾರನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ.
ಮೈದಾನದೊಳಗೆ ಕಠಿಣ ಪರಿಸ್ಥಿತಿಗಳು ಎದುರಾದಾಗ ಪ್ಲಾನ್ ಬೀ ಮಾಡುತ್ತಾರೆ. ಆಟಗಾರರಲ್ಲಿ ಧೈರ್ಯವನ್ನು ತುಂಬುತ್ತಾರೆ. ಧೈರ್ಯದಿಂದ ಹೋರಾಡಲು ಪ್ರೋತ್ಸಾಹಿಸುತ್ತಾರೆ ಎಂದಿದ್ದಾರೆ.
ಇಂತಹ ಪ್ರತಿಯೊಬ್ಬ ಆಟಗಾರನನ್ನು ಅರ್ಥಮಾಡಿಕೊಳ್ಳುವ ರೋಹಿತ್ ನಾಯಕತ್ವದಲ್ಲಿ ಆಡುವುದು ತುಂಬಾ ಖುಷಿತಂದಿದೆ ಎಂದಿದ್ದಾರೆ.








