ಮುಂಬಯಿ: ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಸುಮಾರು 50ಕ್ಕೂ ಅಧಿಕ ವಾಹನಗಳ ಏಕಕಾಲದಲ್ಲಿ ಪಂಕ್ಚರ್ ಆಗಿ ನಿಂತಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಮುಂಬಯಿ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ (Mumbai Nagpur Highway) 50ಕ್ಕೂ ಅಧಿಕ ವಾಹನಗಳು ಪಂಕ್ಚರ್ ಆಗಿ ನಿಂತ ಘಟನೆ ನಡೆದಿದೆ. ಡಿ. 29ರಂದು ವಾಶಿಮ್ ಜಿಲ್ಲೆಯ ಮಲೆಗಾಂವ್ ಮತ್ತು ವನೋಜಾ ಟೋಲ್ ಪ್ಲಾಜಾ ಮಧ್ಯೆ ರಾತ್ರಿ ವೇಳೆ ಈ ಘನಟೆ ನಡೆದಿದೆ.
ರಸ್ತೆಯಲ್ಲಿ ಬಿದ್ದಿದ್ದ ಕಬ್ಬಿಣದ ಬೋರ್ಡ್ ಮೇಲೆ ಹಾದುಹೋದ ಕಾರುಗಳು ಮತ್ತು ಸರಕು ಸಾಗಾಣಿಕೆ ಟ್ರಕ್ ಗಳು ಪಂಕ್ಚರ್ ಆಗಿವೆ ಎನ್ನಾಲಗಿದೆ. ಇದರಿಂದ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ, ರಾತ್ರಿ ವೇಳೆ ನೆರವು ಸಿಗದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದ ಘಟನೆ ಕೂಡ ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಸ್ಮಿಕವಾಗಿ ಬೋರ್ಡ್ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಎಸೆದಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಅಜಿತ್ ಪವಾರ್ ಸಾವು ಅನುಮಾನಾಸ್ಪದ: ವಿಮಾನ ದುರಂತಕ್ಕೆ ತನಿಖೆ ಅಗತ್ಯ- ಸಂಜಯ್ ರಾವತ್ ಆಗ್ರಹ
ಮಹಾರಾಷ್ಟ್ರದ ದಿವಂಗತ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು ಬಗ್ಗೆ ಅನುಮಾನವಿದೆ ಎಂದು ಶಿವಸೇನೆ ಸಂಸದೆ ಸಂಜಯ್ ರಾವತ್ ಗಂಭೀರ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊರಬಂದ...








