ಮ್ಯಾನ್ಮಾರ್: ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮಿಲಿಟರಿ ಆಡಳಿತ ಎಚ್ಚರಿಕೆ
ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ರಾಜಕೀಯ ಬಿಕ್ಕಟ್ಟು, ತುರ್ತು ಪರಿಸ್ಥಿತಿ ಘೋಷಣೆ ಸೇನಾ ಸರ್ಕಾರದ ಅಧಿಪತ್ಯತೆ, ಜನಾಕ್ರೋಶ , ಸೇನಾ ಸರ್ಕಾರದ ವಿರುದ್ಧ ಪ್ರತಿಭಟನೆಗಳ ಸುದ್ದಿ ಇಡೀ ವಿಶ್ವಾದ್ಯಂತ ಸಂಚಲನ ಸೃಷ್ಟಿ ಮಾಡಿದೆ.
ಇತ್ತ ರಾಜಕೀಯ ಕಾರ್ಯಕರ್ತರು ತಲೆಮರೆಸಿಕೊಂಡಿದ್ದು, ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮ್ಯಾನ್ಮಾರ್ ನ ನೂತನ ಮಿಲಿಟರಿ ಆಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಮ್ಯಾನ್ಮಾರ್ ನಲ್ಲಿ ಸೇನಾ ದಂಗೆಯ ವಿರುದ್ಧ ಧ್ವನಿಯೆತ್ತಿರುವ ಮತ್ತು ಪ್ರತಿಭಟನೆಗೆ ಮುಂದಾಗಿರುವ ಪ್ರಜಾಪ್ರಭುತ್ವ ಪ್ರಚಾರಕರ ಬಂಧನಕ್ಕೆ ಮಿಲಿಟರಿ ಆಡಳಿತ ಕ್ರಮ ಕೈಗೊಂಡಿದೆ.
ದೇಶದ ಪ್ರಮುಖ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಸಹಕಾರ ಚಳವಳಿಗೆ ಸೇರ್ಪಡೆಯಾಗುತ್ತಿರುವ ವೈದ್ಯರು ಮತ್ತು ಇತರರ ಬಂಧನಕ್ಕೆ ಭದ್ರತಾ ಪಡೆಗಳು ಮುಂದಾಗಿವೆ. ದೇಶದಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿರುವ ಪ್ರಜಾಪ್ರಭುತ್ವ ಪರ 7 ಮುಖಂಡರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಕೈಗೊಂಡಿದ್ದಾರೆ.
ಮ್ಯಾನ್ಮಾರ್ ನಲ್ಲಿ ಸೇನಾ ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ..!
ತಲೆಮರೆಸಿಕೊಂಡಿರುವ ಈ ಕಾರ್ಯಕರ್ತರು ಕಂಡ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಒಂದು ವೇಳೆ ಅವರಿಗೆ ಆಶ್ರಯ ನೀಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಮಿಲಿಟರಿ ಆಡಳಿತ ಮಾಧ್ಯಮದಲ್ಲಿ ನೋಟಿಸ್ ಪ್ರಕಟಿಸಿದೆ. ತಲೆಮರೆಸಿಕೊಂಡಿರುವ ನಾಯಕರ ಪಟ್ಟಿಯಲ್ಲಿ ಮಿನ್ ಕೋ ನಾಯಿಂಗ್ ಅವರೂ ಇದ್ದಾರೆ.
ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಬರಹಗಳನ್ನು ಪತ್ರಕರ್ತರು ಮತ್ತು ಸುದ್ದಿ ಮಾಧ್ಯಮ ಸಂಸ್ಥೆಗಳು ಬರೆಯಬಾರದು ಎಂದು ಮಾಹಿತಿ ಸಚಿವಾಲಯವು ದೇಶದ ವಿದೇಶಿ ವರದಿಗಾರರ ಕ್ಲಬ್ ಗೆ ಕಳುಹಿಸಿದ ಸೂಚನೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಮಾಜಿ ಅಧ್ಯಕ್ಷೆ ಆಂಗ್ ಸಾನ್ ಸೂಕಿ ಅವರ ರಾಜಕೀಯ ಮಿತ್ರರು ಸೇರಿದಂತೆ ಸುಮಾರು 400 ಜನರನ್ನು ಬಂಧಿಸಲಾಗಿದೆ.
40 ವೀರ ಯೋಧರನ್ನ ದೇಶ ಕಳೆದುಕೊಂಡ ಕರಾಳ ದಿನಕ್ಕೆ ಇಂದಿಗೆ 2 ವರ್ಷ..! ವೀರ ಯೋಧರಿಗೊಂದು ಸಲಾಂ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







