Nalin Kumar Kateel – ಅಂತ್ಯೋದಯವೇ ಬಿಜೆಪಿ ಗುರಿ

Nalin Kumar Kateel – ಅಂತ್ಯೋದಯವೇ ಬಿಜೆಪಿ ಗುರಿ

ಮೈಸೂರು : ಅಂತ್ಯೋದಯವೇ ಬಿಜೆಪಿ ಗುರಿಯಾಗಿದ್ದು, ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ  ಶ್ರಮಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Related posts

ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಸಂವಾದ ನಡೆಸಿದರು.

ಈ ವೇಳೆ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಬೇಕು.

ಅಂತ್ಯೋದಯವೇ ಬಿಜೆಪಿ ಗುರಿಯಾಗಿದ್ದು, ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ  ಶ್ರಮಿಸುತ್ತಿದೆ  ಎಂದರು.

Nalin Kumar Kateel - Antyodaya is BJP's goal
Nalin Kumar Kateel – Antyodaya is BJP’s goal

ಬಳಿಕ ಮಾತನಾಡಿದ ರಾಮದಾಸ್‌, ಜಿಲ್ಲಾ ಮಟ್ಟದಲ್ಲಿ ವಿವಿಧ ಹಂತಗಳ ಕಾರ್ಯಕರ್ತರು ಕೇಂದ್ರದ ಯೋಜನೆಗಳ ಬಗ್ಗೆ  ಜನರಿಗೆ  ಮಾಹಿತಿ ನೀಡಬೇಕು. 

ಜನ ಕಲ್ಯಾಣಕ್ಕಾಗಿ  ಕೇಂದ್ರ ಸರ್ಕಾರವು ವಿವಿಧ  ಯೋಜನೆಗಳನ್ನು  ಹಮ್ಮಿಕೊಂಡಿದೆ. ಈ  ಯೋಜನೆಗಳ ಫಲ  ಜನಸಾಮಾನ್ಯರಿಗೆ  ದೊರೆಯುವಂತಾಗಬೇಕು ಎಂದು ಹೇಳಿದರು.

ಈ ವೇಳೆ ಶಾಸಕ ಎ.ಎಸ್.  ರಾಮದಾಸ್‌, ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Join us on: