ದೇಶಕ್ಕೆ ಟೊಳ್ಳು ಭಾಷಣ ಬೇಕಿಲ್ಲ, ಪರಿಹಾರ ಬೇಕು : ರಾಹುಲ್ ಗಾಂಧಿ
ನವದೆಹಲಿ : ದೇಶದಲ್ಲಿ ಕೊರೊನಾ ಸ್ಫೋಟವಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ದೇಶಕ್ಕೆ ಪರಿಹಾರದ ಅವಶ್ಯಕತೆ ಇದೆ.
ಟೊಳ್ಳು ಭಾಷಣಗಳು ಮತ್ತು ಅನುಪಯುಕ್ತ ಹಬ್ಬಗಳಲ್ಲ. ಎಂದು ಈ ತಿಂಗಳ ಆರಂಭದಲ್ಲಿ ಪಿಎಂ ಮೋದಿ ಕರೆ ನೀಡಿದ್ದ ನಾಲ್ಕು 4 ದಿನಗಳ ಟೀಕಾ ಉತ್ಸವ ಹಾಗೂ ಮಂಗಳವಾರ ಮಾಡಿದ್ದ ಭಾಷಣ ವ್ಯರ್ಥವೆಂದು ಟೀಕಿಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಾನು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದೇನೆ.
ಆದ್ರೆ ದೇಶಾದ್ಯಂತ ದುರಂತ ಕಥೆಗಳು ವರದಿಯಾಗುತ್ತಿರುವುದನ್ನು ನೋಡುತ್ತಿದ್ದೇನೆ. ಭಾರತವು ಕೇವಲ ಕೋವಿಡ್ ಬಿಕ್ಕಟ್ಟಿನಿಂದ ಬಳಲುತ್ತಿಲ್ಲ, ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತಿದೆ.
ಈಗ ದೇಶಕ್ಕೆ ಟೊಳ್ಳಾದ (ಅರ್ಥಹೀನ) ಭಾಷಣಗಳು ಮತ್ತು ಅನುಪಯುಕ್ತ ಹಬ್ಬಗಳು ಅಗತ್ಯವಿಲ್ಲ, ಪರಿಹಾರದ ಅವಶ್ಯಕತೆಯಿದೆ” ಎಂದು ಬರೆದುಕೊಂಡಿದ್ದಾರೆ.