ತೈಲ ಬೆಲೆಯೇರಿಕೆ : ಜನಾಕ್ರೋಶ, ದರ ಇಳಿಕೆ ಹೊರತು ಬೇರೆ ಉತ್ತರವಿಲ್ಲ ಎಂದ ನಿರ್ಮಲಾ ಸೀತಾರಾಮನ್
ನವದೆಹಲಿ: ತೈಲ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದ್ದು, 1 ಲೀಟರ್ ಗೆ ಶತಕದತ್ತ ಬೆಂಗಳೂರು ದಾಪುಗಾಲಿಡುತ್ತಿದೆ. ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲ ಈರಿಕೆಯಿಂದಾಗಿ ಸರ್ಕಾರದ ವಿರುದ್ಧ ಜನಾಕ್ರೀಶ ಭುಗಿಲೆದ್ದಿದೆ. ಇನ್ನೂ ಇದೊಂದು ಸಮಸ್ಯೆಯ ವಿಚಾರವಾಗಿದ್ದು, ದರ ಇಳಿಕೆ ಹೊರತು ಬೇರೆ ಯಾವುದೇ ಉತ್ತರವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿರುವುದಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
10ನೇ ತರಗತಿ ಪರೀಕ್ಷೆ ಬರೆಯುವ ಸಮಯದಲ್ಲಿಯೇ ಮಗುವಿಗೆ ಜನ್ಮ, ಮಗಿವಿಗೆ ಇಟ್ಟ ಹೆಸರು ನೋಡಿ..!
ವಿಷಯಕ್ಕೆ ದರ ಇಳಿಕೆ ಹೊರತು ಬೇರೆ ಉತ್ತರವಿಲ್ಲ. ತೈಲ ಮಾರಾಟ ಸಂಸ್ಥೆಗಳು ತೈಲ ದರವನ್ನು ನಿಗದಿಗೊಳಿಸುತ್ತವೆ. ಕಚ್ಚಾತೈಲದ ಆಮದು ವೆಚ್ಚ , ಅದರ ಸಂಸ್ಕರಣೆ ವೆಚ್ಚ, ಸಾಗಣೆ, ಪೂರೈಕೆ ವೆಚ್ಚ ಇದನ್ನೆಲ್ಲ ಲೆಕ್ಕಹಾಕಿ ತೈಲ ದರ ಏರಿಸಬೇಕೇ ಅಥವಾ ಇಳಿಸಬೇಕೇ ಎಂಬುದನ್ನು ತೈಲ ಮಾರಾಟ ಸಂಸ್ಥೆಗಳು ನಿರ್ಧರಿಸುತ್ತವೆ . ನವೆಂಬರ್ನಿಂದ ಬ್ರೆಂಟ್ ದರ ನಿರಂತರ ಏರಿಕೆಯಾಗಿರುವುದು ಮತ್ತು ತೈಲ ಉತ್ಪಾದನೆ ಮತ್ತು ರಫ್ತು ಮಾಡುವ ರಾಷ್ಟ್ರಗಳು ಉತ್ಪಾದನೆ ಮೊಟಕುಗೊಳಿಸಿರುವುದು ತೈಲ ಬೆಲೆಯೇರಿಕೆಗೆ ಕಾರಣವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ತಿಳಿದುಬಂದಿದೆ. ಇನ್ನೂ ವಾಸ್ತವಾಂಶ ತಿಳಿಸಲು ನಾನೇನು ಹೇಳಿದರೂ, ನಾನು ಉತ್ತರಿಸುವುದರಿಂದ ಜಾರಿಕೊಳ್ಳುತ್ತಿದ್ದೇನೆ ಎಂದೇ ಭಾವಿಸಲಾಗುತ್ತೆ ಎಂದು ಹೇಳಿಕೊಂಡಿದ್ದಾರೆ.