ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಸಿಬಿಐ ಅಧಿಕಾರಿಯೊಬ್ಬರು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಕಪಾಳಮೋಕ್ಷ ಮಾಡಿದ್ದಾರಂತೆ. ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿರುವುದು ಎಲ್ಲರಿಗೂ ಗೊತ್ತೆ ಇದೆ. ಏತನ್ಮಧ್ಯೆ ವಿಚಾರಣೆ ವೇಳೆ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ರಿಯಾ ಕೆನ್ನೆಗೆ ಅಧಿಕಾರಿ ನೂಪರ್ ಪ್ರಸಾದ್ ಅವರು ಬಾರಿಸಿದ್ದಾರೆ ಅನ್ನೋ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು..! ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ನೂಪರ್ ಪ್ರಸಾದ್ ರಿಯಾ ಚಕ್ರವರ್ತಿ ಅವರನ್ನು ಮುಂಬೈನಲ್ಲಿ ವಿಚಾರಣೆಗೆ ಒಳಪಡಿದ್ದರು. ಆದ್ರೆ ವಿಚಾರಣೆಯಲ್ಲಿ ರಿಯಾ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಆಕೆಯ ಕೆನ್ನೆಗೆ ನೂಪುರ್ ಪ್ರಸಾದ್ ಬಾರಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸುಶಾಂತ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಿಯಾ ಕಪಾಳಕ್ಕೆ ಅಧಿಕಾರಿಯೊಬ್ಬರು ಹೊಡೆದರು ಎಂಬ ವಿಷಯವನ್ನು ಕೇಳಿ ಸಂತೋಷದಿಂದ ಕುಣಿದಾಡುತ್ತಿದ್ದಾರೆ. ಕೆಲವರಂತೂ ರಿಯಾ ಅವರನ್ನು ಎರಡು ತಲೆಯ ಹಾವು ಎಂದು ಕರೆದಿದ್ದು, ಆಕೆಗೆ ಹೊಡೆದಿದ್ದು ಇಲ್ಲಿಯವರೆಗೂ ಕೇಳಿದರೆ ಎಷ್ಟು ಚೆನ್ನಾಗಿರುತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.