ನವರಾತ್ರಿಯ ಎರಡನೇ ದಿನದಂದು ದೇವಿ ದುರ್ಗೆಯ ಬ್ರಹ್ಮಚಾರಿಣಿ ರೂಪದ ವಿಶೇಷ
ನವರಾತ್ರಿಯ ಎರಡನೇ ದಿನದಂದು ದೇವಿ ದುರ್ಗೆಯ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುತ್ತದೆ.
ಬ್ರಹ್ಮ ಎಂದರೆ ತಪಸ್ಸು ಮಾಡುವ ತಾಯಿ ಎಂದು ತಾಯಿಯ ಹೆಸರಿನಿಂದ ತಿಳಿದುಬರುತ್ತದೆ. ಆಕೆಯನ್ನು ತಪಶ್ಚಾರಿಣಿ ಎಂದೂ ಕರೆಯುತ್ತಾರೆ.
ಅಂದರೆ ನಾಳೆ ಬ್ರಹ್ಮಚಾರಿಣಿ ಮಾತೆಯ ಪೂಜೆ ನಡೆಯಲಿದೆ. ಆರತಿ ಮತ್ತು ಮಂತ್ರಗಳ ಪಠಣವಿಲ್ಲದೆ ಯಾವುದೇ ದೇವತೆಯ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಎಂದು ನಂಬಲಾಗಿದೆ.
ನಾಳೆ, ತಾಯಿ ಬ್ರಹ್ಮಚಾರಿಣಿ ಪೂಜೆಯ ನಂತರ, ಅವಳ ಆರತಿಯನ್ನು ಮಾಡಿ ಮತ್ತು ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ಭಕ್ತರ ಇಷ್ಟಾರ್ಥಗಳು ಶೀಘ್ರವೇ ನೆರವೇರುತ್ತದೆ.

ಈ ದೇವಿಯ ಸ್ವರೂಪಕ್ಕೆ ಪ್ರಿಯವಾದ ಭಕ್ಷ್ಯ ಸ್ನಿಗ್ಧೌದನ ಸ್ನಿಗ್ಧ ಎಂದರೆ ನಯದ ಅಂಶವಿರುವುದು ಎಂದು ತಾತ್ಪರ್ಯ. ಓದನ ಅಂದರೆ ಅನ್ನ.
ಅರ್ಥಾತ್ ತುಪ್ಪದಿಂದ ಮಿಶ್ರಿತವಾದ ಸಿಹಿಯಾದ ಅನ್ನ ಎಂದು. ಈ ಎರಡನೇ ದಿನದಂದು ತುಪ್ಪದಿಂದಕೂಡಿದ ಸಿಹಿ ಅನ್ನವನ್ನು ದೇವ ಜಾತಾ ಅಥವಾ ಬ್ರಹಚಾರಿಣೀ ಎಂಬ ಶ್ರೀದೇವಿಯ ಕುರಿತಾಗಿ ನೈವೇದ್ಯ ಮಾಡಬೇಕು.
ಶುಚಿರ್ಭೂತರಾಗಿ ಗುರು ಮತ್ತು ಗಣಪತಿಯನ್ನು ಪ್ರಾರ್ಥಿಸಿಕೊಂಡು ಈ ಕೆಳಗಿನ ಶ್ಲೋಕದಿಂದ ತಾಯಿಯನ್ನು ಧ್ಯಾನಿಸಿ –
ಹಂಸಾರೂಢಾಂ ಶುಕ್ಲವರ್ಣಾಂ ಶುಕ್ಲಮಾಲ್ಯಾದಿ ಅಲಂಕೃತಾಮ್ |
ಚತುರ್ಭುಜಾಂ ಸೃಕ್ ಸ್ರುವೌ ಚ ಕಮಂಡಲ್ವಕ್ಷಮಾಲಿಕಾಮ್ |
ಬಿಭ್ರತೀಂ ಪೂಜಯೇದ್ದೇವೀಂ ದ್ವಿತೀಯಾಯಾಂ ಸದಾ ನೃಪ |
ಶುದ್ಧ ಮನಸ್ಸಿನಿಂದ ಷೋಡಶೋಪಚಾರಗಳನ್ನು ಮಾಡಿರಿ. ಪೂಜಾಕಾಲದಲ್ಲಿ ಬಿಳಿಯ ವಸ್ತ್ರವನ್ನು ಇಟ್ಟು ಮತ್ತು ಉಟ್ಟು ಪೂಜಿಸಿ. ಮನೆಯಲ್ಲಿ ಅನ್ಯೋನ್ಯವಾದ ಏಕತೆಯನ್ನು ಈ ಪೂಜಾಫಲವಾಗಿ ಹೊಂದಿ ಅಭಿವೃದ್ಧಿಯಾಗುವುದು.








