ADVERTISEMENT
Tuesday, February 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಸಾರ್ವಭೌಮ ಭಾರತದ ನೆಲದಲ್ಲಿ ಲಷ್ಕರ್ ಎ ತೊಯ್ಬಾ, ಹಿಜ್ಬುಲ್ ಮುಜಾಹಿದ್ದೀನ್, ಜೈಷ್ ಎ ಮೊಹ್ಮದ್ ಎಂಬ ಪರಮ ಪಾಪಿ ಉಗ್ರ ಸಂಘಟನೆಗಳು ನಡೆಸಿದ ಭಯೋತ್ಪಾದಕ ಕೃತ್ಯಗಳಿಗೆ ಉತ್ತರ ಆಪರೇಷನ್ ಸಿಂಧೂರ್..

Operation Sindhoor is the answer to the heinous terrorist

Shwetha by Shwetha
May 7, 2025
in National, Newsbeat, Saaksha Special, ಎಸ್ ಸ್ಪೆಷಲ್, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಸಾರ್ವಭೌಮ ಭಾರತದ ನೆಲದಲ್ಲಿ ಲಷ್ಕರ್ ಎ ತೊಯ್ಬಾ, ಹಿಜ್ಬುಲ್ ಮುಜಾಹಿದ್ದೀನ್, ಜೈಷ್ ಎ ಮೊಹ್ಮದ್ ಎಂಬ ಪರಮ ಪಾಪಿ ಉಗ್ರ ಸಂಘಟನೆಗಳು ನಡೆಸಿದ ಭಯೋತ್ಪಾದಕ ಕೃತ್ಯಗಳಿಗೆ ಉತ್ತರ ಆಪರೇಷನ್ ಸಿಂಧೂರ್..

ಪಹಲ್ಗಾಮ್ ಪ್ರವಾಸಿಗರ ಮೇಲೆ ದಾಳಿ ಮಾಡಿದ 16 ದಿನಗಳೊಳಗೆ ಭಾರತದ ಮಿಲಿಟರಿಯ ಪ್ರತ್ಯುತ್ತರವೇ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ನ ಒಂಬತ್ತು ಭಯೋತ್ಪಾದನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿರುವ ಆಪರೇಷನ್ ಸಿಂಧೂರ್.

Related posts

ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ: ಹನೂರು ತಾಲ್ಲೂಕಿನಲ್ಲಿ ಆತಂಕ

ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ: ಹನೂರು ತಾಲ್ಲೂಕಿನಲ್ಲಿ ಆತಂಕ

February 3, 2026
ಅಜಿತ್ ಪವಾರ್ ಸಾವು ಅನುಮಾನಾಸ್ಪದ: ವಿಮಾನ ದುರಂತಕ್ಕೆ ತನಿಖೆ ಅಗತ್ಯ- ಸಂಜಯ್ ರಾವತ್ ಆಗ್ರಹ

ಅಜಿತ್ ಪವಾರ್ ಸಾವು ಅನುಮಾನಾಸ್ಪದ: ವಿಮಾನ ದುರಂತಕ್ಕೆ ತನಿಖೆ ಅಗತ್ಯ- ಸಂಜಯ್ ರಾವತ್ ಆಗ್ರಹ

February 3, 2026

ನಿನ್ನೆ ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಮುರಿಡ್ಕೆ, ಬರ್ನಾಲಾ ಮತ್ತು ಮುಜಫರಾಬಾದ್‌ನಲ್ಲಿರುವ ಪ್ರಮುಖ ಲಷ್ಕರ್ ಶಿಬಿರಗಳನ್ನು ಹೊಡೆದುರುಳಿಸಲಾಗಿದೆ.

ಮರ್ಕಜ್ ತೈಬಾ, ಮುರಿಯ್ಕೆ, ಮರ್ಕಜ್ ಅಹ್ಲೆ ಹದೀಸ್, ಬರ್ನಾಲಾ ಮತ್ತು ಶವಾಯಿ ನಲ್ಲ ಕ್ಯಾಂಪ್, ಮುಜಫರಾಬಾದ್‌ನಲ್ಲಿರುವ ಲಷ್ಕರ್ ನ ಉಗ್ರರ ನೆಲೆ ಹಾಗೂ ತರಬೇತಿ ಶಿಬಿರಗಳ ಮೇಲೆ ಭಾರತೀಯ ಪಡೆಗಳ ನಿಖರ ದಾಳಿ. ಪಾಕ್ ಸೇನಾ ನೆಲೆಯಾಗಲೀ ಅಥವಾ ನಾಗರೀಕ ವಸಾಹತು ಪ್ರದೇಶಗಳಾಗಲೀ ದಾಳಿಯ ಟಾರ್ಗೆಟ್ ಆಗದಂತೆ ಕೇವಲ ಉಗ್ರರ ನೆಲೆಗಳನ್ನೇ ಗುರಿಯಾಗಿಸಿ ನಡೆಸಿದ ನಿರ್ದಿಷ್ಟ ಆಕ್ರಮಣ.
***

ಲಷ್ಕರ್-ಎ-ತೈಬಾ ಎಂಬ ರಕ್ಕಸ ಸಂತಾನವನ್ನು 1985 ರಲ್ಲಿ ಹುಟ್ಟು ಹಾಕಿದವನು ಹಫೀಜ್ ಸಯೀದ್ ಎಂಬ ನರರಾಕ್ಷಸ. ಒಸಾಮಾ ಬಿನ್ ಲಾಡೆನ್ ಎಂಬ ಜಾಗತಿಕ ಭಯೋತ್ಪಾದಕನ ಕೊಡುಗೆಯೂ ಎಲ್‌ಇಟಿ ಸ್ಥಾಪನೆಗೆ ಗಮನಾರ್ಹ. ಈ ಭಯೋತ್ಪಾದಕ ಸಂಘಟನೆಯ ಸ್ಥಾಪನೆಗೆ ಹಣಕಾಸು ಒದಗಿಸಿದವನೇ ಒಸಾಮ.

ಭಾರತದಲ್ಲಿ ಎಲ್‌ಇಟಿ ನಡೆಸಿದ ಪ್ರಮುಖ ಭಯೋತ್ಪಾದಕ ದಾಳಿಗಳು:

1980 ರ ದಶಕದಿಂದ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಮತ್ತು ನಾಗರಿಕರ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ ಪಾಪಿ ಲಷ್ಕರ್. ಸೋವಿಯತ್-ಆಫ್ಘನ್ ಯುದ್ಧದ ಹಿನ್ನೆಲೆಯಲ್ಲಿ ರೂಪುಗೊಂಡ ಎಲ್‌ಇಟಿ, ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಮತ್ತು ನಾಗರಿಕರ ವಿರುದ್ಧ ನಡೆಸಿದ್ದ ಘಾತಕ ದಾಳಿಗಳ ಪಟ್ಟಿ ದೊಡ್ಡದಿದೆ.

ಡಿಸೆಂಬರ್ 2000 ರ ಕೆಂಪು ಕೋಟೆ ದಾಳಿ: ದೆಹಲಿಯ ಕೆಂಪು ಕೋಟೆಯಲ್ಲಿ ಎಲ್‌ಇಟಿ ಭಯೋತ್ಪಾದಕರು ಎರಡು ಭಾರತೀಯ ಸೇನಾ ಜವಾನರು ಮತ್ತು ಒಬ್ಬ ನಾಗರಿಕನನ್ನು ಗುಂಡಿಕ್ಕಿ ಹತ್ಯೆ.

2005 ರ ದೆಹಲಿ ಸ್ಫೋಟ: ದೆಹಲಿಯ ಸರೋಜಿನಿ ನಗರ ಮಾರುಕಟ್ಟೆ, ಗೋವಿಂದಪುರಿ ಮತ್ತು ಪಹರ್‌ಗಂಜ್‌ನಲ್ಲಿ ನಡೆದ ಮೂರು ಸ್ಫೋಟಗಳಲ್ಲಿ 62 ಜನರ ಸಾವು ಮತ್ತು 210 ಜನರಿಗೆ ಗಾಯ.

26/11 ಮುಂಬೈ ದಾಳಿಗಳು: 2008 ರ ಮುಂಬೈ ದಾಳಿಯಲ್ಲಿ 166 ಜನರ ಸಾವು ಮತ್ತು 300 ಜನರಿಗೆ ಗಾಯ.

7/11 ಮುಂಬೈ ಲೋಕಲ್ ರೈಲು ಸ್ಫೋಟಗಳು: ಮುಂಬೈ ಲೋಕಲ್ ರೈಲುಗಳಲ್ಲಿ 10 ನಿಮಿಷಗಳ ಅವಧಿಯಲ್ಲಿ ಏಳು ಸ್ಫೋಟಗಳು ಸಂಭವಿಸಿ 189 ಜನರ ದಾರುಣ ಹತ್ಯೆ.

ಪುಣೆ ಜರ್ಮನ್ ಬೇಕರಿ ಸ್ಫೋಟ: ಫೆಬ್ರವರಿ 13, 2010 ರಂದು ಪುಣೆ ಜರ್ಮನ್ ಬೇಕರಿ ಸ್ಫೋಟಕ್ಕೆ ಇದೇ ಎಲ್‌ಇಟಿಯಿಂದ ಕಣ್ಗಾವಲು ಮತ್ತು ದಾಳಿಯ ಯೋಜನೆ.
***

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಯಶಸ್ವಿಯಾಗಿ ತಟಸ್ಥಗೊಳಿಸಿದ ಒಂಬತ್ತು ಭಯೋತ್ಪಾದಕ ಶಿಬಿರಗಳ ಪಟ್ಟಿ ಇಲ್ಲಿದೆ:

1. ಮರ್ಕಝ್ ಸುಭಾನ್ ಅಲ್ಲಾ, ಬಹವಾಲ್ಪುರ್ – ಜೈಷ್ ಎ ಮೊಹ್ಮದ್ ನೆಲೆ
2. ಮರ್ಕಝ್ ತೈಬಾ, ಮುರಿಡ್ಕೆ – ಲಷ್ಕರ್ ಉಗ್ರ ನೆಲೆ
3. ಸರ್ಜಾಲ್, ತೆಹ್ರಾ ಕಲಾನ್ – ಜೈಷ್
4. ಮೆಹಮೂನಾ ಜೋಯಾ, ಸಿಯಾಲ್ಕೋಟ್ – ಹಿಜ್ಬುಲ್ ಮುಜಾಹಿದ್ದೀನ್.
5. ಮರ್ಕಝ್ ಅಹ್ಲೆ ಹದೀಸ್, ಬರ್ನಾಲಾ – ಲಷ್ಕರ್ ಎ ತೊಯ್ಬಾ.
6. ಮರ್ಕಜ್ ಅಬ್ಬಾಸ್, ಕೋಟ್ಲಿ – ಜೈಷ್
7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ – ಹಿಜ್ಬುಲ್
8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ – ಲಷ್ಕರ್
9. ಸೈಯದ್ನಾ ಬಿಲಾಲ್ ಕ್ಯಾಂಪ್, ಮುಜಫರಾಬಾದ್ – ಜೈಷ್ ಎ ಮೊಹ್ಮದ್.
***

ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಎಂಬ ಮೂರೂ ಉಗ್ರ ಸಂಘಟನೆಗಳ ಬೇರು ಕಿತ್ತು ಸುಣ್ಣದ ನೀರು ಹುಯ್ದು ಬರಲು ಇದೆ ಸುವರ್ಣವಕಾಶ. ಸಾವಿರಾರು ಅಮಾಯಕ ಭಾರತೀಯರ ಮಾರಣ ಹೋಮಕ್ಕೆ ಇದು ಪ್ರತಿಕಾರ..

ಜೈ ಇಂಡಿಯನ್ ಆರ್ಮಿ..
ವಿಶ್ವಾಸ್ ಭಾರಧ್ವಜ್

ShareTweetSendShare
Join us on:

Related Posts

ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ: ಹನೂರು ತಾಲ್ಲೂಕಿನಲ್ಲಿ ಆತಂಕ

ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ: ಹನೂರು ತಾಲ್ಲೂಕಿನಲ್ಲಿ ಆತಂಕ

by Shwetha
February 3, 2026
0

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಮತ್ತು ಸುಳ್ಳಾಡಿ ಗ್ರಾಮಗಳಲ್ಲಿ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆ ಬಹಿರಂಗವಾಗಿದೆ. ಗ್ರಾಮ ಪಂಚಾಯತ್ ಮೂಲಕ ಸರಬರಾಜಾಗುತ್ತಿರುವ ಫ್ಲೋರೈಡ್‌ ಮಿಶ್ರಿತ ಕುಡಿಯುವ...

ಅಜಿತ್ ಪವಾರ್ ಸಾವು ಅನುಮಾನಾಸ್ಪದ: ವಿಮಾನ ದುರಂತಕ್ಕೆ ತನಿಖೆ ಅಗತ್ಯ- ಸಂಜಯ್ ರಾವತ್ ಆಗ್ರಹ

ಅಜಿತ್ ಪವಾರ್ ಸಾವು ಅನುಮಾನಾಸ್ಪದ: ವಿಮಾನ ದುರಂತಕ್ಕೆ ತನಿಖೆ ಅಗತ್ಯ- ಸಂಜಯ್ ರಾವತ್ ಆಗ್ರಹ

by Shwetha
February 3, 2026
0

ಮಹಾರಾಷ್ಟ್ರದ ದಿವಂಗತ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು ಬಗ್ಗೆ ಅನುಮಾನವಿದೆ ಎಂದು ಶಿವಸೇನೆ ಸಂಸದೆ ಸಂಜಯ್ ರಾವತ್ ಗಂಭೀರ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊರಬಂದ...

ಕುರುಬ ಸಮುದಾಯಕ್ಕೆ ST ಸ್ಥಾನಮಾನ: ಕೇಂದ್ರಕ್ಕೆ ಶಿಫಾರಸು ಸಲ್ಲಿಸಿದ್ದೇವೆ – ಸಿಎಂ ಸಿದ್ದರಾಮಯ್ಯ

ಕುರುಬ ಸಮುದಾಯಕ್ಕೆ ST ಸ್ಥಾನಮಾನ: ಕೇಂದ್ರಕ್ಕೆ ಶಿಫಾರಸು ಸಲ್ಲಿಸಿದ್ದೇವೆ – ಸಿಎಂ ಸಿದ್ದರಾಮಯ್ಯ

by Shwetha
February 3, 2026
0

ಕುರುಬ ಸಮುದಾಯವನ್ನು ST ಪಟ್ಟಿಗೆ ಸೇರಿಸುವ ಕುರಿತು ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಂಬಂಧ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜ್ಯ ಸರ್ಕಾರ...

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

by Shwetha
February 3, 2026
0

ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಜಗತ್ತೇ ಎದುರು ನೋಡುತ್ತಿರುವ ಈ ಮೆಗಾ ಟೂರ್ನಿಯು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7...

ದಿನ ಭವಿಷ್ಯ (26-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-02-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 3, 2026
0

ದಿನ ಭವಿಷ್ಯ: 03-02-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದ್ದು ತಾಳ್ಮೆ ಅವಶ್ಯಕ. ಆರ್ಥಿಕವಾಗಿ ಸಾಧಾರಣ ದಿನ. ಕುಟುಂಬದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram