ತಂಡಕ್ಕೆ `ಅಯ್ಯರ್ ಬಂದ್ರೂ ಪಂತ್ ಗೆ ಪಟ್ಟ’
ದುಬೈ : ಐಪಿಎಲ್ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಇದೆ. ಭಾನುವಾರದಿಂದ ಐಪಿಎಲ್ ಪಂದ್ಯಾವಳಿಗಳು ಶುರುವಾಗಲಿವೆ.
ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶ್ರೇಯಸ್ ಅಯ್ಯರ್ ವಾಪಸ್ ಆಗಿದ್ದರೂ. ರಿಷಭ್ ಪಂತ್ ತಂಡದ ನಾಯಕರಾಗಿ ಮುಂದುವರಿಯಲ್ಲಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿ ಸಹ ಮಾಲೀಕ ಪಾರ್ಥ್ ಜಿಂದಲ್ ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನಾ ಶ್ರೇಯಸ್ ಅಯ್ಯರ್ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ಹೀಗಾಗಿ ಅವರು ವಿಶ್ರಾಂತಿ ಪಡೆದುಕೊಂಡಿದ್ದರು. ಈ ಪರಿಸ್ಥಿತಿಯಲ್ಲಿ ಡಿಸಿ ತಂಡದ ಮ್ಯಾನೆಜ್ ಮೆಂಟ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯನಾಗಿ ರಿಷಭ್ ಪಂತ್ ಆಯ್ಕೆಯಾಗಿದ್ದರು.
ಐಪಿಎಲ್ ನ ಮೊದಲಾರ್ಧದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಪಂತ್, ಅಂಕಪಟ್ಟಿಯಲ್ಲಿ ತಂಡ ಅಗ್ರಸ್ಥಾನದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ.
ಹೀಗಾಗಿ ದ್ವಿತೀಯಾರ್ಧದ ಐಪಿಎಲ್ ನಲ್ಲಿ ಪಂತ್ ಅವರೇ ತಂಡದ ನಾಯಕರಾಗಿ ಮುಂದುವರೆಲಿದ್ದಾರೆ.
ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಅಯ್ಯರ್ ತಂಡಕ್ಕೆ ಮರಳಿದ್ದು, ತಂಡದ ಆಟಗಾರರಾಗಿ ಆಡಬೇಕಿದೆ.