ಬೆಂಗಳೂರು: ಅತ್ಯಾಚಾರಿ ಆರೋಪಿ ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ (People’s Representative Court) ಆದೇಶ ನೀಡಿದೆ.
ನ್ಯಾಯಾಧೀಶರಾದ ಕೆಎನ್ ಶಿವಕುಮಾರ್ (judge KN Shivakumar) ಅವರು, ಹಲವಾರು ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ (Prajwal Revanna)ಗೆ ಜುಲೈ 8ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಆರೋಪಿಯನ್ನು ಕರೆ ತರಲಾಯಿತು. ಜರ್ಮನಿಯಿಂದ ಮರಳಿ ಬಂದು ಅರೆಸ್ಟ್ ಆದ ನಂತರ ಬಳಿಕ ಅರೆಸ್ಟ್ ಆದ ಪ್ರಜ್ವಲ್ ರನ್ನು ಮೂರನೇ ಬಾರಿಗೆ ಸೆಂಟ್ರಲ್ ಜೈಲಿಗೆ ಕರೆತರಲಾಗಿದೆ. ಪ್ರಜ್ವಲ್ ಗ್ಯಾಸ್ಟ್ರಿಕ್ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಅವರ ಪರ ವಕೀಲ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸುವಂತೆ ನ್ಯಾಯಾಧೀಶರು ವಕೀಲರಿಗೆ ಸೂಚಿಸಿದ್ದಾರೆ. ಜೈಲು ಅಧಿಕಾರಿಗಳು ಚಿಕಿತ್ಸೆ ಒದಗಿಸಲು ನಿರಾಕರಿಸಿದರೆ, ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಹೇಳಿದ್ದಾರೆ ಎನ್ನಲಾಗಿದೆ.