ಇತ್ತೀಚೆಗೆ ಟಿವಿ ಶೋಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸೋರಿಗಿಂತ ನೆಗೆಟಿವ್ ರೋಲ್ಸ್ ಅಂದ್ರೆ ವಿಲನ್ ಆಗಿ ಆಕ್ಟಿಂಗ್ ಮಾಡೋರ್ನೆ ಜನ ಲೈ ಕ್ ಮಾಡೋದು ಹೆಚ್ಚು. ವಿಲನ್ ಗಳ ಖಡಕ್ ಆಕ್ಟಿಂಗ್ ಸೆನ್ಷೇನಲ್ ಡೈಲಾಗ್ ಜೊತೆಗೆ ಅವರ ಡೇರ್ ನೆಸ್ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಹೀಗೆ ಹೆಚ್ಚಾಗಿ ನೆಗೆಟಿವ್ ರೋಲ್ಸ್ ನಲ್ಲೇ ಕಾಣಿಸಿಕೊಂಡು ಸಿಕ್ಕಾಪಟ್ಟೆ ಫೇಮಸ್ ಆಗಿ ವಿಭಿನ್ನ ನಟನೆಯಿಂದಲೇ ಜನರ ಮನಗೆದ್ದ ಸೂಪರ್ ವಿಲನ್ ಅಂದ್ರೆ ಅದು ಮಹಾಭಾರತದ ಶಕುನಿ. ರಣಭೂಮಿಯಲ್ಲಿ ಯುದ್ಧ ಮಾಡುವುದಕ್ಕೂ ಮೊದಲು ಮನೋಭೂಮಿಯಲ್ಲಿ ಹೇಗೆ ಆಟ ಆಡಬೇಕು ಎಂಬುದನ್ನ ಕೌರವರಿಗೆ ತಿಳಿಸಿಕೊಟ್ಟ ಕುರುಕ್ಷೇತ್ರದ ಸೂತ್ರಧಾರಿ ಈ ಶಕುನಿ. 
ನನ್ನ ಮಕ್ಕಳೇ, ನನ್ನ ಮಗುವೇ ಅಂತಲೇ ದುರ್ಯೋಧನನ ಜೊತೆಗೆ ಜನರ ಮನೆಗೆದ್ದಿರುವ ಮಹಾಭಾರತದ ಶಕುನಿಮಾಮ ಯಾರಿಗೆ ತಾನೆ ಗೊತ್ತಿಲ್ಲ. ತನ್ನ ವಿಭಿನ್ನ ಮ್ಯಾನರಿಸಮ್, ಕನ್ನಿಂಗ್ ಆಕ್ಟಿಂಗ್ ನಿಂದಲೇ ತನ್ನ ಪಾತ್ರಕ್ಕೆ ಜೀವ ತುಂಬಿರುವ ಶಕುನಿಯ ಲೈಫ್ ಜರ್ನಿ ಹೇಗಿದೆ ಗೊತ್ತಾ..?
ಬಾಲ್ಯ
ಶಕ್ತಿಗಿಂತ ಯುಕ್ತಿಯಿಂದಲೇ ಮಹಾಭಾರತದ ಕಥೆಯನ್ನ ನಡೆಸುತ್ತಿರುವ ಶಕುನಿಯ ನಿಜವಾದ ಹೆಸರು (39)ಪ್ರಣೀತ್ ಭಟ್. ಇವರು ಮೂಲತಹ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೆಪ್ಟಂಬರ್ 26 1980 ರಲ್ಲಿ ಜನಿಸಿದ್ರು.

ವೈವಾಹಿಕ ಜೀವನ
ಪ್ರಣೀತ್ ನವಂಬರ್ 2015ರಲ್ಲಿ ತಮ್ಮ ಪ್ರಿಯತಮೆಯಾಗಿದ್ದ ಕಂಚನ್ ಶರ್ಮಾ ಅವರೊಂದಿಗೆ ದಾಂಪನ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಪ್ರಣೀತ್ ಪತ್ನಿ ಹಾಗೂ ಪರಿವಾರದೊಂದಿಗೆ ಮುಂಬೈನ ತಮ್ಮ ನಿವಾಸದಲ್ಲೇ ನೆಲೆಸಿದ್ದಾರೆ.
ವಿದ್ಯಾಭ್ಯಾಸ
ಪ್ರಣೀತ್ ಭಟ್ ನಾಶಿಕ್ ನ ಕೆಕೆ ವಾಘ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿಕೊಂಡಿದ್ದಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಪ್ರಣೀತ್ ಸಾಫ್ಟ್ ವೇರ್ ಕಂಪನಿ ವಿಪ್ರೋದಲ್ಲಿ ಕೆಲ ಕಾಲ ಕೆಲಸ ಮಾಡಿದ್ದಾರೆ.

ಆಕ್ಟಿಂಗ್ ಕೆರಿಯರ್
ಮೊದಲಿಗೆ 2002ರಲ್ಲಿ ಮೋಹಕ ಜಗತ್ತು ಅಂದ್ರೆ ಮಾಡಲಿಂಗ್ ಫೀಲ್ಡ್ ಗೆ ಎಂಟ್ರಿಕೊಟ್ಟ ಪ್ರಣೀತ್ ಬಳಿಕ 2004ರಲ್ಲಿ ಮೊದಲ ಬಾರಿಗೆ ಟಿವಿ ಸೀರಿಯಲ್ ಕಿತ್ನೀ ಮಸ್ತ್ ಹೇ ಜಿಂದಗಿಯಲ್ಲಿ ತಮ್ಮ ಆಕ್ಟಿಂಗ್ ಕೆರಿಯರ್ ಆರಂಭಿಸುತ್ತಾರೆ. ಬಳಿಕ ಕಾಜಲ್, ಅರ್ಸ್ಲಾನ್, ಗೀತ್, ಸುವ್ರೀನ್ ಗುಗ್ಗಲ್ ಸೀರಿಯಲ್ ಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಳ್ತಾರೆ. ಇದಾದ ಬಳಿಕವೇ ಪ್ರಣೀತ್ ಗೆ 2013ರಲ್ಲಿ ಮಹಾಭಾರತದಲ್ಲಿ ಶಕುನಿ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಗುತ್ತೆ. ಹಿಂದೆಯೂ ಅನೇಕ ಶೋಗಳಲ್ಲಿ ನಟನೆ ಮಾಡಿದ್ದರು ಅಷ್ಟರ ಮಟ್ಟಿಗೆ ಜನರಿಗೆ ಪರಿಚಯವಾಗದ ಪ್ರಣೀತ್ ತಮ್ಮ ಶಕುನಿ ಪಾತ್ರದಿಂದಲೇ ಮನೆಮಾತಗುತ್ತಾರೆ. ಶಕುನಿ ಪಾತ್ರವು ಪ್ರಣೀತ್ ಗೆ ಹೇಳಿ ಮಾಡಿಸಿದ ಪಾತ್ರ ಎಂದ್ರೂ ತಾಪ್ಪಾಗೋದಿಲ್ಲ. ಒಂದು ಲೆಕ್ಕಾಚಾರದಲ್ಲಿ ಪ್ರಣೀತ್ ಅವರನ್ನ ಬಿಟ್ರೆ ಶಕುನಿ ಪಾತ್ರಕ್ಕೆ ಯಾರೂ ಮ್ಯಾಚ್ ಆಗೋದೆ ಇಲ್ಲ ಎನ್ನುವಂತಾಗಿದೆ. ಪ್ರಣೀತ್ ಅವರ ನಟನೆಯೂ ಅಷ್ಟೇ ಅದ್ಭುತವಾಗಿದ್ದು, ಜನರ ಮನಸಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಅವರ ಒಂದೊಂದು ಡೈಲಾಗ್ ಗಳಿಗೂ ಜನರೂ ಫಿದಾ ಆಗಿದ್ದಾರೆ.
ಮಹಾಭಾರತದಲ್ಲಿ ಪ್ರಖ್ಯಾತಿ ಪಡೆದ ಪ್ರಣೀತ್ ಗೆ ಇದಾದ ನಂತರ ಅನೇಕ ಆಪರ್ಚುನಿಟಿಗಳು ಹುಡುಕಿಕೊಂಡು ಬರುತ್ತೆ. 2014 ರಲ್ಲಿ ಹಿಂದಿಯ ಖಾಸಗಿ ವಾಹಿಸಿಯಲ್ಲಿ ಪ್ರಸಾರವಾದ ಹಾಗೂ ಸಿಕ್ಕಾಪಟ್ಟೆ ಫೇಮಸ್ ಆಗಿರುವ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರಲ್ಲಿ ಪ್ರಣೀತ್ ಅವರು ಸಹ ಪ್ರತಿಸ್ಪರ್ಧಿಯಾಗಿ 91 ದಿನಗಳ ವರೆಗೂ ಜನರನ್ನ ಎಂಟರ್ ಟೈನ್ ಮಾಡಿದ್ರು. ಬಳಿಕ ಡಿಸೆಂಬರ್ 21 ರಂದು ಬಿಗ್ ಬಾಸ್ ಮನೆಯಿಂದ ಹೊರಬಂದು ಮತ್ತೆ 2015ರಲ್ಲಿ ರಝಿಯಾ ಸಸುಲ್ತಾನಾದಲ್ಲಿ ನಟಿಸುವ ಮೂಲಕ ತಮ್ಮ ಆಕ್ಟಿಂಗ್ ಕೆರಿಯರ್ ಮುಂದುವರೆಸಿದ್ರು. ಹಾಗೆ ಬಾಲ ಕೃಷ್ಣ, ತ್ರಿವೇದಿಯಾ, ಚಕ್ರವ್ಯೂಹ್, ಪೋರಸ್, ಮೇರಿ ಹಾನಿಕಾರಕ್ ಬೀವಿ, ಅಲ್ಲಾದ್ದೀನ್ ಧಾರಾವಾಹಿಗಳಲ್ಲಿ ನೆಗೆಟಿವ್ ರೋಲ್ ಗಳ ಮೂಲಕವೇ ಹಿಟ್ ಆದ್ರು.








