ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣ ಖಂಡಿಸಿ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಇದೀಗ ಪೋಸ್ಟ್ ಹಾಕಿದ್ದಕ್ಕೆ ವಾಟ್ಸಾಪ್ ಮತ್ತು ಫೋನ್ ಕಾಲ್ ಮೂಲಕ ಪ್ರಥಮ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸ್ವತಃ ಅವರೇ ಸೋಷಿಯಲ್ ಮೀಡಿಯಾದ ಮೂಲಕ ಬಹಿರಂಗಪಡಿಸಿದ್ದಾರೆ.
ಹೌದು ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಥಮ್ ಇದು ಹೀಗೇ ಮುಂದುವರೆದಲ್ಲಿ ಕಮಿಷನರ್ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಸುತ್ತೇನೆ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ. ಇನ್ನೂ ಅವರ ಪೋಸ್ಟ್ ನಿಂದಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಾದ ವಿವಾದ ತಾರಕ್ಕೇರುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿದ್ದರು ಪ್ರಥಮ್. ಅಲ್ಲದೇ ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ಪೋಸ್ಟ್ ಡಿಲೀಟ್ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಈ ವಿಚಾರವಾಗಿ ಪೋಸ್ಟ್ ಮಾಡಿದ್ದ ಪ್ರಥಮ್ ಶ್ರೀನಿವಾಸ್ ಅವರೊಂದಿಗೆ ಫೋಟೋ ಶೇರ್ ಮಾಡಿಕೊಂಡಿದ್ದು, “ನನಗೆ ತುಂಬಾ ನೋವಾಗಿದ್ದು ಇವ್ರ ಹೆಂಡ್ತಿ ಕಣ್ಣೀರು ಹಾಕೋದು ನೋಡಿ…ರಾಜಕೀಯ ಅಂದಮೇಲೆ ಪರ-ವಿರೋಧ common…ಆದ್ರೆ ಮನೆ ಸುಟ್ಟುಹೋದಾಗ ಇವ್ರ ಹೆಂಡ್ತಿ ಕಣ್ಣೀರು ಹಾಕಿದ್ರಲ್ಲಾ…ಆ ಶಾಪ ದೇವ್ರಾಣೆ ಯಾರೂ ಉಳಿಯಲ್ಲ..!
ಯಾವಾಗ್ಲೂ ಹೆಣ್ಣುಮಕ್ಕಳು ತಮ್ಮ ಮನೆ,ಅಲ್ಲಿನ ಪ್ರತಿ ವಸ್ತುಗಳ ಜೊತೆ ತುಂಬಾ ಭಾವನಾತ್ಮಕವಾದ attachment ಬೆಳೆಸಿಕೊಂಡಿರ್ತಾರೆ….!ಅಂತಾದ್ರಲ್ಲಿ ಬದುಕಿ ಬಾಳಿದ ಮನೆ ಯಾವನದೋ Facebook post ಗೆ ಉರಿದುಹೋದ್ರೆ…. ಅವ್ರ ಶಾಪ ಬಿಡುತ್ತಾ? #ಅಖಂಡಶ್ರೀನಿವಾಸಮೂರ್ತಿಗಳು ವೈಯುಕ್ತಿಕವಾಗಿ ಚೆನ್ನಾಗಿ ಗೊತ್ತು…! ಅತೀಹೆಚ್ಚು lead ಇಂದ ಗೆದ್ದ leader…ಬಹಳಷ್ಟು ಕೆಲಸ ಮಾಡಿದ್ದಾರೆ…. #SDPI and #PFI ನ ಬೆಂಬಲಿಸಿ,ದಲಿತ ನಾಯಕರನ್ನ ತುಳಿದರೆ ಕಾಂಗ್ರೆಸ್ ಗೆ loss….. SDPI ಬಲವಾದಷ್ಟು congress vote ಗೆ ಕತ್ತರಿ…! ಶ್ರೀನಿವಾಸಮೂರ್ತಿಗಳ ಹೆಂಡ್ತಿ ಶಾಪ ನಿಜ್ವಾಗ್ಲೂ ನಿಮ್ಮನ್ನ ಬಿಡಲ್ಲ….!” ಎಂದು ಆಕ್ರೋಶ ಹೊರಹಾಕಿದ್ದರು.
ಪ್ರಥಮ್ ಅವರು ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ್ದು, “200 ಜನwhat’s app warnings(screenshots) ಫೋನ್ ಮಾಡಿ ನಮ್ office ಗೆ ತೀರ ವಿಕೃತ ಧಮಕಿ ಲೆಕ್ಕವಿಲ್ಲ.it all comes under cyber crime.home minister ಅವ್ರ special officer ಹತ್ತಿರ ಮಾತಾಡಿದ್ದೀನಿ.ಮಾಧ್ಯಮಗಳು ಧೈರ್ಯ ಹೇಳಿವೆ.ಇವ್ರು warn ಮಾಡೋದು ನಿಲ್ಲಿಸ್ತಾ ಇಲ್ಲ.ನಾನು ಸಂಯಮ ಕಳೆದುಕೊಂಡ್ರೆ ಇದರ ಪರಿಣಾಮ ಚೆನ್ನಾಗಿರಲ್ಲ.home minister sir ಸಿಕ್ಕಿದ ಮೇಲೆ ಮುಂದಿನ ಕ್ರಮದ ನಿರ್ಧಾರ ಮಾಡ್ತೀನಿ… ಧೈರ್ಯ ಹೇಳಿದ ಎಲ್ಲಾ ಸ್ನೇಹಿತರಿಗೂ ಧನ್ಯವಾದ…. ನಾನು ಒಂದುಸಲ complaint ಕೊಟ್ಟರೆ ಇನ್ನಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಾರೆ….ನಮ್ಮ office ನವರಿಗೆ ಜೀವಭಯ ಕೊಡೋ ಮುಂಚೆ ಯೋಚನೆ ಮಾಡಿ…. ನಾನು ಸಂಯಮದಲ್ಲಿಇರೋವರೆಗೂ ಅಷ್ಟೇ! ಕೆರಳಿಸಬೇಡಿ…ಕೆರಳಿಸಬೇಡಿ….” ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಮುಂದುವರೆದು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಒಳ್ಳೆ ಹುಡುಗ ಪ್ರಥಮ್ “ಇದು ಮನವಿ ಅಥವಾ warning…ಏನಾದ್ರೂ ಅಂದುಕೊಳ್ಳಿ…ನನಗೆ ಕನ್ನಡದ ಜ್ಞಾನ ಬಹಳ ಚೆನ್ನಾಗಿದೆ.ನಾನು ಬಳಸಿರೋ ಪದಗಳ ಬಗ್ಗೆ ಅರಿವೂ ಇದೆ. ತುಂಬಾ ಜನ #ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ನನ್ನ ಪೋಸ್ಟ್ delete ಮಾಡಿದ್ದೇನೆ. ಆದರೂ ಸಹಾ… ಬಹಳಷ್ಟು ವಿಕೃತ #whatsapp messages ಗಳು ನಮ್ಮ office number ಗೆ ಬರ್ತಾನೇ ಇದ್ಯಂತೆ….
ನಾನು ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು delete ಮಾಡಿದ್ದು,ಯಾವುದೇ ಭಯದಿಂದಾಗಲಿ ಅಲ್ಲ. ಹೆಚ್ಚುಕಮ್ಮಿ 200 ಜನರ ಅಸಭ್ಯ screenshots, audio messages ನಮ್ಮ office ನಂಬರ್ ತುಂಬಿಹೋಗಿದೆ… ನೀವು ಹೀಗೇ ನನಗೆ ಹಾಗೂ ನನ್ನ ಸಿನಿಮಾ ಗೆ ತೊಂದರೆ ಕೊಡೋದು ಮುಂದುವರೆಸಿದರೆ ನಾಳೆ ಬೆಳಿಗ್ಗೆ home minister ನ ಭೇಟಿ ಮಾಡ್ತೀನಿ…. Police commissioner ಗೆ ಎಲ್ಲಾ what’s screenshot ಗಳೂ ಕೊಟ್ಟು complaint ಕೊಟ್ರೆ ಬಹಳಷ್ಟು ಜನರಿಗೆ ಕಾನೂನಿನ ಪಾಠ ಕಲಿಸಬೇಕಾಗುತ್ತದೆ….#MLA ಶ್ರೀನಿವಾಸಮೂರ್ತಿಗಳ ಮನೆಗೆ ಬೆಂಕಿ ಹಚ್ಚಿರೋ ನೋವು ನಮಗೂ ಇದೆ….ಹಾಗಂತ ನೀವು ರಾತ್ರಿ ಹಗಲೂ ಎನ್ನದೇ ನಮ್ಮ office number ಗೆ cal ಮಾಡಿ ಬೆದರಿಕೆ ಒಡ್ಡಿದ್ರೆ ಸುಮ್ಮನೆ ಕೂರೋಕಾಗಲ್ಲ….ನನ್ನ ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಸುಮ್ಮನಿದ್ದೇನೆ…ನೀವು ಕೆರಳಿಸುತ್ತಲೇ ಇದ್ರೆ… ನಾಳೆ home minister and commissioner ಗೆ ಲಿಖಿತ ದೂರು ನೀಡಬೇಕಾಗುತ್ತದೆ….Request….or straight warning… ಏನಾದ್ರೂ ಅಂದುಕೊಳ್ಳಿ…! ನೆನಪಿರಲಿ….Remember :- social media and what’s app ಲಿ ಬೆದರಿಕೆಗಳು its all comes under cyber crime….! ನಾನು complaint ಕೊಟ್ರೆ ನಿಮ್ಮ ಕುಟುಂಬದವರಿಗೆ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ…! ನೀವು ಪ್ರಾಣ ತಗೀತೀನಿ ಅಂತ ಕಳಿಸಿರೋ message ಗಳಿಗೆ ಏನ್ ರಾಷ್ಟಪ್ರಶಸ್ತಿ ಕೊಡ್ತಾರೆ ಅಂದುಕೊಂಡಿದ್ದೀರಾ?ನಿಮ್ಮ ಹೆತ್ತ ಅಪ್ಪಾಮ್ಮನಿಗೆ ಕಷ್ಟ ಆಗುತ್ತೆ ನಾನೇನಾದ್ರೂ case ಹಾಕಿದ್ರೆ ಅಂತ ಸುಮ್ಮನಿದ್ದೀನಿ…! ನಮ್ಮ office number ಗೆ ಅಸಭ್ಯ ಸಂದೇಶ,warn ಮಾಡೋದು, ನಮ್ಮ ಸಿನಿಮಾಗೆ ತೊಂದರೆ ಕೊಡೋದು ನಿಲ್ಲಿಸಿ…!ನಿಮಗೂ ಒಳ್ಳೇದಾಗ್ಲಿ…! ಶುಭರಾತ್ರಿ!” ಎಂದು ಬೆದರಿಕೆ ಹಾಕುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.