Pratap Simha | ಬಯ್ಯುವುದನ್ನ ನಿಲ್ಲಿಸಿ, ಇದು ಮೋದಿ ಕಾಲ ಅಭಿವೃದ್ಧಿಗೆ ಆದ್ಯತೆ
ಮಂಡ್ಯ : ವೈಯಕ್ತಿಕವಾಗಿ ಬಯ್ಯುವುದನ್ನ ಎಲ್ಲರು ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಿಂದ ಪೇ ಸಿಎಂ ಪೋಸ್ಟರ್ ಅಂಟಿಸಿದ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರ ಇಟ್ಟಿಕೊಂಡು ಹೊಡೆದಾಡಬೇಕು. ನಾನು ಜಾಸ್ತಿ ಮಾಡ್ತಿನಿ, ನಾನು ಜಾಸ್ತಿ ಮಾಡ್ತಿನಿ ಅನ್ನೊ ಹಠ ಇರಬೇಕು.
ಜಾತಿ – ಜಾತಿ ಎತ್ತಿಕಟ್ಟುವುದು, ಇನ್ನೊಬರನ್ನ ಅವಾಚ್ಯ ಶಬ್ದದಿಂದ ನಿಂದಿಸೋದು. ಪರಸ್ಪರ ವೈಯಕ್ತಿಕ ನಿಂದನೆ ಮಾಡಿಕೊಳ್ಳೊದು ಇದೆಲ್ಲಾ ಹಳೆ ಕಾಲದಿಂದ ನಡೆದುಕೊಂಡು ಬಂದಿರೋ ರಾಜಕಾರಣ.
ಈಗ ಕೂಡ ಕೆಲವರು ಅದನ್ನೆ ಮುಂದುವರಿಸುತ್ತಿದ್ದಾರೆ. ಜನರು ದಡ್ಡರಲ್ಲ, ಬುದ್ದಿವಂತರಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಬೇಕು ಅಷ್ಟೆ.

ರೈತನು ಕೂಡ ತನ್ನ ಮಗ ವಿದ್ಯಾವಂತನಾಗಿ ಕೆಲಸಕ್ಕೆ ಸೇರಬೇಕು ಅಂತ ಬಯಸುತ್ತಾರೆ. ಮಕ್ಕಳು ಬಗ್ಗೆ ಯೋಚನೆ ಮಾಡಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿ.
ಅದನ್ನ ಬಿಟ್ಟು ಜಾತಿ ಜಾತಿ ಎತ್ತಿಕಟ್ಟಿ ಹೊಡೆದಾಡುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಇದು ಮೋದಿ ಜೀ ಕಾಲ ಅಭಿವೃದ್ಧಿಗಷ್ಟೆ ಮೊದಲ ಆದ್ಯತೆ, ಕಾಂಗ್ರೆಸ್ ನವರು 5 ವರ್ಷ ಅಧಿಕಾರದಲ್ಲಿದ್ದರು.
ಯಾವ ಘನ ಕಾರ್ಯ ಮಾಡಿದ್ದಾರೆ ತೋರಲಿ. ಘನ ಕಾರ್ಯ ಮಾಡಿದ್ರೆ ಕೇಳಿ. ಕಾಂಗ್ರೆಸ್ ನವರು ಪೇ ಸಿಎಂ ಅಂತಾ ಮಾಡಿದ್ದಾರೆ.
ಆ ಮೂಲಕ ಪೇ ಸಿಎಂ ಅಂದ್ರೆ ಪೇ ಕಾಂಗ್ರೆಸ್ ಮೇಡಂ ಅಂತ ಕಾಂಗ್ರೆಸ್ ನವರೆ ಪ್ರೂ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.








