ADVERTISEMENT
Monday, April 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಜಯ ಹಜಾರೆ ಟ್ರೋಫಿ- ಪೃಥ್ವಿ ಶಾ ರನ್ ಮಳೆ ಹಿಂದಿದೆ ಕ್ರಿಕೆಟ್ ದೇವ್ರ ಮಿಂಚು…!

admin by admin
March 13, 2021
in Newsbeat, Sports, ಕ್ರೀಡೆ
pruthvi saakshatv team india
Share on FacebookShare on TwitterShare on WhatsappShare on Telegram

ವಿಜಯ ಹಜಾರೆ ಟ್ರೋಫಿ- ಪೃಥ್ವಿ ಶಾ ರನ್ ಮಳೆ ಹಿಂದಿದೆ ಕ್ರಿಕೆಟ್ ದೇವ್ರ ಮಿಂಚು…!  

pruthivi sha team india saakshatv#ಪೃಥ್ವಿ ಶಾ… ಎರಡು ವರ್ಷಗಳ ಹಿಂದೆ ಟೀಮ್ ಇಂಡಿಯಾಗೆ ಎಂಟ್ರಿಯಾಗಿದ್ದಾಗ ಶಾ ಮೇಲಿದ್ದ ನಿರೀಕ್ಷೆಗಳು, ಭರವಸೆಗಳು ಅಷ್ಟಿಷ್ಟಲ್ಲ. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಅಂತ ಬಿಂಬಿಸಲಾಗಿದ್ದ ಶಾ ಕೂಡ ಆರಂಭದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು.
ಆನಂತರ ಏನಾಯ್ತೋ ಗೊತ್ತಿಲ್ಲ. ಸಡನ್ ಆಗಿ ಕುಸಿದು ಬಿದ್ದ ಪೃಥ್ವಿ ಶಾ ಮೇಲೆ ನಾನಾ ಟೀಕೆಗಳು, ಆರೋಪಗಳು ಕೇಳಿಬಂದವು. ಉದ್ದೀಪನಾ ದ್ರವ್ಯ ಸೇವನೆಯ ಆರೋಪಕ್ಕೆ ಬಲಿಯಾಗಿ ಕೆಲವು ತಿಂಗಳು ನಿಷೇಧಕ್ಕೂ ಗುರಿಯಾಗಿದ್ದರು.
ಅಷ್ಟರಲ್ಲೇ ಫಾರ್ಮ್ ಕೂಡ ಕಳೆದುಕೊಂಡ ಪೃಥ್ವಿ ಶಾ ಎದುರಾಳಿ ಬೌಲರ್ ಗಳಿಗೆ ಸುಲಭವಾಗಿ ವಿಕೆಟ್ ಒಪ್ಪಿಸುತ್ತಿದ್ದರು. ಕಳೆದ ಐಪಿಎಲ್ ನಲ್ಲೂ ನೀರಸ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಆನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಪೃಥ್ವಿ ಶಾ ಟೀಮ್ ಇಂಡಿಯಾದಿಂದ ಹೊರನಡೆಯಬೇಕಾಯ್ತು.
ಹಾಗೇ ಬಂದ ಪೃಥ್ವಿ ಶಾ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಕಳಪೆ ಫಾರ್ಮ್, ಟೀಕೆಗಳು 21ರ ಹರೆಯದ ಪೃಥ್ವಿ ಶಾ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಆದ್ರೆ ಮಾನಸಿಕವಾಗಿ ಕುಂದಲಿಲ್ಲ.
ತನ್ನ ಭವಿಷ್ಯದ ಬಗ್ಗೆ ಅಪಾರವಾದ ನಂಬಿಕೆಯನ್ನಿಟ್ಟುಕೊಂಡಿರುವ ಪೃಥ್ವಿ ಶಾ ತಾನು ಎಡವುತ್ತಿರುವುದು ಎಲ್ಲಿ ? ಯಾಕೆ ಎಡವುತ್ತಿದ್ದೇನೆ.? ಬ್ಯಾಟಿಂಗ್ ಟೆಕ್ನಿಕ್ ನಲ್ಲಿರುವ ಸಮಸ್ಯೆ ಏನು ಎಂಬುದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು.
ಆಗ ಪೃಥ್ವಿ ಶಾ ಗೆ ನೆನಪಾಗಿದ್ದು ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್. ತನ್ನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗೋದು ಕ್ರಿಕೆಟ್ ದೇವ್ರ ಬಳಿಯೇ. ಹಾಗೇ ಪೃಥ್ವಿ ಶಾ ಸಚಿನ್ ತೆಂಡುಲ್ಕರ್ ಅವರ ಮೊರೆ ಹೋಗಿದ್ದರು.
ಸಚಿನ್ ತೆಂಡುಲ್ಕರ್ ಪೃಥ್ವಿ ಶಾ ಮಾಡಿರುವ ಎಡವಟ್ಟುಗಳು, ಬ್ಯಾಟಿಂಗ್ ತಾಂತ್ರಿಕ ಸಮಸ್ಯೆಗಳನ್ನು ಬೊಟ್ಟು ಮಾಡಿ ತೋರಿಸಿದ್ದರು. ಅಲ್ಲದೆ ಯಾವ ರೀತಿ ಆಡಬೇಕು, ಯಾವ ರೀತಿಯ ಕೌಶಲ್ಯಗಳನ್ನು ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸಚಿನ್ ತೆಂಡುಲ್ಕರ್ ಪೃಥ್ವಿ ಶಾಗೆ ಮನವರಿಕೆ ಮಾಡಿಕೊಟ್ಟಿದ್ದರು.

Related posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

April 13, 2026
ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

April 13, 2026

 
pruthivi sha team india saakshatvಅದರ ಫಲವನ್ನು ಈಗ ಪೃಥ್ವಿ ಶಾ ಅನುಭವಿಸುತ್ತಿದ್ದಾರೆ. ವಿಜಯ ಹಜಾರೆ ಟ್ರೋಫಿಯಲ್ಲಿ ಪೃಥ್ವಿ ಶಾ ಬ್ಯಾಟಿಂಗ್ ವೈಭವವನ್ನು ನೋಡಿದಾಗ ಗೊತ್ತಾಗುತ್ತೆ. ಪೃಥ್ವಿ ಶಾ ಎಷ್ಟೊಂದು ಬದಲಾಗಿಬಿಟ್ಟಿದ್ದಾರೆ ಅಂತ. ಒಂದು ದ್ವಿ ಶತಕ, ಮೂರು ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ 754 ರನ್ ಪೇರಿಸಿ ಮಯಾಂಕ್ ಅಗರ್ ವಾಲ್ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. 2017-18ರಲ್ಲಿ ಮಯಾಂಕ್ ಅಗರ್ ವಾಲ್ 723 ರನ್ ಸಿಡಿಸಿದ್ದರು. ಇದೀಗ ಮತ್ತೆ ಪೃಥ್ವಿ ಶಾ ಟೀಮ್ ಇಂಡಿಯಾದ ಕದ ತಟ್ಟುತ್ತಿದ್ದಾರೆ. ಫೈನಲ್ ಮ್ಯಾಚ್ ನಲ್ಲೂ ಪೃಥ್ವಿ ಶಾ ರನ್ ಮಳೆಯನ್ನು ಸುರಿಸುತ್ತಾರೆ ಅನ್ನೋ ನಂಬಿಕೆ ಇದೆ.
ಆದ್ರೆ ಪೃಥ್ವಿ ಶಾ ಈಗ ಪಾಠ ಕಲಿತಿದ್ದಾರೆ. ಅದ್ಭುತ ಪ್ರತಿಭಾವಂತ ಆಟಗಾರನಾಗಿದ್ರೂ ಎಲ್ಲೋ ಒಂದು ಕಡೆ ಯಶಸ್ಸಿನ ಆಮಲಿನಿಂದ ತೇಲಾಡುತ್ತಿದ್ದರು. ಇದೀಗ ಬುದ್ದಿ ಬಂದಿದೆ.
ಹಾಗೇ ನೋಡಿದ್ರೆ ಪೃಥ್ವಿ ಶಾ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದೇ ದೊಡ್ಡ ವಿಚಾರ. ಯಾಕಂದ್ರೆ ಕಳೆದ ಐಪಿಎಲ್ ನಲ್ಲಿ ಶಾ ಬ್ಯಾಟ್ ಝಳಪಿಸಿರಲಿಲ್ಲ.
ಆದ್ರೂ ಶಾ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನ ಕಳಪೆ ಆಟದಿಂದ ಅವರು ತನ್ನ ಸ್ಥಾನವನ್ನು ಶುಬ್ಮನ್ ಗಿಲ್ ಅವರಿಗೆ ಬಿಟ್ಟುಕೊಡಬೇಕಾಯ್ತು.
ತಂಡದಿಂದ ಕೈಬಿಟ್ಟಾಗ ಪೃಥ್ವಿ ಶಾ ಕಣ್ಣೀರು ಹಾಕಿದ್ದರು. ಆದ್ರೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳದೇ ಇದ್ರೆ ತಂಡದಲ್ಲಿ ತನಗೆ ಸ್ಥಾನ ಸಿಗುವುದಿಲ್ಲ ಎಂಬುದು ಅವರಿಗೆ ಮನವರಿಕೆ ಆಗಿತ್ತು. ಅದೇ ವೇಳೆ ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದರು. ಸಚಿನ್ ತೆಂಡುಲ್ಕರ್ ದೇವರಂತೆ ಪೃಥ್ವಿ ಶಾಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೆರವಾದ್ರು.
ಒಟ್ಟಿನಲ್ಲಿ ಪೃಥ್ವಿ ಶಾಗೆ ಮನವರಿಕೆಯಾಗಿದೆ. ಪ್ರತಿಭೆ ಇದ್ರೂ ಕಠಿಣ ಪರಿಶ್ರಮಪಟ್ಟರೇ ಮಾತ್ರ ಫಲ ಸಿಗುತ್ತೆ ಅಂತ.

#PrithviShaw #vijayahajaretrophi #sachintendulkar #ravishastri #vikramrathod #teamindia #kannadanews #sportsnews #kannadasportsnews

Tags: #saakshatvkannad newskannadasports newspruthvi shaRavishastriSachin Tendulkarsportsnewsteam indiavikram rathod
ShareTweetSendShare
Join us on:

Related Posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

by Shwetha
April 13, 2026
0

ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಇಂದು ಪ್ರತಿಯೊಬ್ಬರೂ ಎಸಿ ಮೊರೆ ಹೋಗುತ್ತಿದ್ದಾರೆ. ಮನೆ, ಕಚೇರಿ ಮಾತ್ರವಲ್ಲದೆ ಪ್ರಯಾಣದ ವೇಳೆಯೂ ಎಸಿ ಅನಿವಾರ್ಯವಾಗಿದೆ. ಆದರೆ ಈ ತಂಪಾದ...

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

by Shwetha
April 13, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ...

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

by Shwetha
April 13, 2026
0

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಫ್ರೀಡಂ ಪಾರ್ಕ್ ಇಂದು ಮೂಕ ಪ್ರಾಣಿಗಳ ಪರವಾಗಿ ಮೊಳಗಿದ ಆಕ್ರೋಶದ ಧ್ವನಿಗೆ ಸಾಕ್ಷಿಯಾಯಿತು. ಕಗ್ಗದಾಸಪುರದ ಡಿಆರ್ ಡಿಒ ಸಂಕೀರ್ಣದಲ್ಲಿ ನಡೆದ ಬೀದಿ ನಾಯಿಗಳ...

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

by Shwetha
April 13, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚುನಾವಣಾ ಕಣದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯಕ್ಕೆ ಕುಮ್ಮಕ್ಕು ನೀಡಿದ...

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

by Shwetha
April 13, 2026
0

ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನದ ಸ್ಫೋಟ ಸಂಭವಿಸಿದೆ. ಟಿಕೆಟ್ ವಂಚಿತರಾದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram