ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಅತಿಥಿಗಳ ಪಟ್ಟಿ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ನೀವು ದೇವಾಲಯವನ್ನು ತೆರೆದಿದ್ದೀರಿ. ಬುಡಕಟ್ಟು ಜನಾಂಗದವರಾಗಿರುವುದರಿಂದ ನಿಮಗೆ ದೇವಾಲಯದ ಒಳಗೆ ಬರಲು ಸಾಧ್ಯವಿಲ್ಲ. ನಿಮಗೆ ಅವಕಾಶವಿಲ್ಲ ಎಂದು ರಾಷ್ಟ್ರಪತಿಗಳಿಗೆ ಹೇಳಿದ್ದೀರಿ. ಅದರ ನಂತರ ಅಮಿತಾಬ್ ಬಚ್ಚನ್, ಅದಾನಿ, ಅಂಬಾನಿಯರನ್ನು ಆಹ್ವಾನಿಸಲಾಗಿತ್ತು. ಆದರೆ ಕಾರ್ಮಿಕರಿಗೆ ಅವಕಾಶ ನೀಡಲಿಲ್ಲ. ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯಲ್ಲಿ ನೀವು ಕೆಲಸಗಾರನನ್ನು ಅಥವಾ ರೈತನನ್ನು ನೋಡಿದ್ದೀರಾ? ಅಲ್ಲಿ ಹಾಡು ಮತ್ತು ನೃತ್ಯ ಇತ್ತು. ಇದು ನಿಮ್ಮ ವಾಸ್ತವತೆ ಎಂದು ರಾಹುಲ್ ಹೇಳಿದ್ದರು.
ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ರಾಮನ ಮಂದಿರ ಮತ್ತು ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಹಾಡು-ನೃತ್ಯದ ಕಾರ್ಯಕ್ರಮ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಕಾಂಗ್ರೆಸ್ ಪಕ್ಷವು ಏಕೆ ರಾಮ ವಿರೋಧಿಯಾಗಿದೆ? ಕಾಂಗ್ರೆಸ್ ಪಕ್ಷದ ಹಿರಿಯರು ಯಾರೂ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಾಗಲಿಲ್ಲ” ಎಂದು ಬಿಜೆಪಿ ನಾಯಕ ನಳಿನ್ ಕೊಹ್ಲಿ ಆರೋಪಿಸಿದ್ದಾರೆ.
ಬಿಜೆಪಿ ನಾಯಕ ತಿರತ್ ಸಿಂಗ್ ರಾವತ್, ಬಹುಶಃ ರಾಹುಲ್ ಗಾಂಧಿಗೆ ಇನ್ನೂ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಗುಡುಗಿದ್ದಾರೆ.