ಅಖಂಡ ಸಿನಿಮಾ ನೋಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ akhanda saaksha tv
ಅಖಂಡ ಸಿನಿಮಾ ನೋಡುತ್ತಿದ್ದ ವ್ಯಕ್ತಿಗೆ ಬ್ರೈನ್ ಸ್ಟ್ರೋಕ್
ಟಾಲಿವುಡ್ ನ ನಟ ಸಿಂಹ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ರೇಟಿಂಗ್ ಕಡಿಮೆ ಇದ್ದರೂ ಮಾಸ್ ಪ್ರೇಕ್ಷಕರು ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಬಾಲಯ್ಯ ಅಭಿಮಾನಿಗಳು ಅಖಂಡ ಸಿನಿಮಾವನ್ನು ತಲೆಮೇಲೆ ಹೊತ್ತಿಕೊಂಡು ಮೆರೆಸುತ್ತಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ಸಿನಿಮಾದಲ್ಲಿರುವ ಫೈಟ್ ಸೀನ್ ಗಳು. ಹೌದು..! ಅಖಂಡ ಸಿನಿಮಾದಲ್ಲಿ Never before ever after ಎನ್ನುವಂತಹ ಫೈಟ್ ಗಳಿವೆ. ಸಿನಿಮಾದಲ್ಲಿ ಬಾಲಯ್ಯ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಎರಡು ಪಾತ್ರದಲ್ಲಿ ಬಾಲಯ್ಯ ಧರಿಸುವ ಬಟ್ಟೆಯಲ್ಲಿ ವ್ಯತ್ಯಾಸ ಇರೋದು ಬಿಟ್ಟರೇ ಇನ್ನುಳಿದಂತೆ ಎಲ್ಲವೂ ಒಂದೇ ಆಗಿರುತ್ತದೆ. ಸಿನಿಮಾದಲ್ಲಿ ‘ಮಾಸ್’ ಅಂಶಗಳು ವಿಪರೀತ ಪ್ರಮಾಣದಲ್ಲಿದೆ. ಅಸಾಧ್ಯ ಎಂಬುದನ್ನೆಲ್ಲ ಸಿನಿಮಾದಲ್ಲಿ ಬಾಲಯ್ಯ ಮಾಡುತ್ತಾರೆ. ಲಾಜಿಕ್ ಇಲ್ಲದ.. ನ್ಯೂಟನ್ ಲಾ ಅನ್ನು ಸುಳ್ಳಾಗಿಸುವ ಫೈಟ್ಗಳು ಸಿನಿಮಾದಲ್ಲಿ ದಂಡಿಯಾಗಿವೆ.
ಈ ಫೈಟ್ ಸೀನ್ ಗಳನ್ನು ಎಂಜಾಯ್ ಮಾಡುತ್ತಿರುವ ನಂದಮೂರಿ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಆದರೆ ರಾಜಮಂಡ್ರಿಯಲ್ಲಿ ಬಾಲಯ್ಯ ಅಭಿಮಾನಿ ‘ಅಖಂಡ’ ಸಿನಿಮಾ ವೀಕ್ಷಿಸುವಾಗಲೇ ನಿಧನ ಹೊಂದಿದ್ದಾರೆ. ಜಸ್ತಿ ರಾಮಕೃಷ್ಣ ಮೃತ ವ್ಯಕ್ತಿಯಾಗಿದ್ದಾನೆ. ಅಖಂಡ ಸಿನಿಮಾ ವೀಕ್ಷಿಸುವಾಗ ರಾಮಕೃಷ್ಣಗೆ ಬ್ರೈನ್ ಸ್ಟ್ರೋಕ್ ಆಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಯಾಗಿದ್ದ ರಾಮಕೃಷ್ಣ, ಜನಪ್ರಿಯ ಸಿನಿಮಾ ವಿತರಕರೂ ಆಗಿದ್ದರು.
ಇನ್ನು ಅಖಂಡ’ ಸಿನಿಮಾವನ್ನು ಬೊಯಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿ ನಟ ಶ್ರೀಕಾಂತ್ ನಟಿಸಿದ್ದಾರೆ. ತಮನ್ ಸಂಗೀತ ಸಿನಿಮಾಗಿದೆ.