ಕರ್ನಾಟಕ-ಜಮ್ಮು ಕಾಶ್ಮೀರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಮೇಲೆ ಸೂರ್ಯ ಕೃಪೆ ತೋರಿದ್ದು, ಎರಡು ದಿನಗಳ ಕಾಯುವಿಕೆ ನಂತರ ಪಂದ್ಯ ಆರಂಭವಾಗಿದೆ. ಇದರೊಂದಿಗೆ ಮ್ಯಾಚ್ ರದ್ದಾಗುವ ಭೀತಿ ಬಹುತೇಕ ದೂರವಾಗಿದೆ. ಜಮ್ಮು-ಕಾಶ್ಮೀರದ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಮೂರನೇ ದಿನದ ರಣಜಿ ಕ್ವಾರ್ಟಲ್ ಫೈನಲ್ ಪಂದ್ಯ ಆರಂಭವಾಗಿದೆ. ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಮೊದಲ ದಿನದ ಆಟದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿತ್ತು. ಮೊದಲ ದಿನದಲ್ಲಿ ಕೇವಲ ಆರು ಓವರ್ ಗಳ ಆಟ ನಡೆದಿತ್ತು. ಅದರಲ್ಲಿ ಕರ್ನಾಟಕ ಕೇವಲ 14 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿತ್ತು.
ಎರಡನೇ ದಿನ ಯಾವುದೇ ಆಟ ನಡೆದಿಲ್ಲ. ಇದೀಗ ಮೂರನೇ ದಿನದ ಆಟ ಆರಂಭವಾಗಿದ್ದು, ನಾಯಕ ಕರುಣ್ ನಾಯರ್ 4 ರನ್ ಗೆ ಔಟಾದರು. ಸದ್ಯ 21 ಓವರ್ ಗಳ ಆಟದಲ್ಲಿ 4 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ. ಮನೀಶ್ ಪಾಂಡೆ 37 ರನ್ ಗಳಿಸಿ ಔಟಾದರೆ, ಕೆ.ಸಿದ್ದಾರ್ಥ್ 34 ರನ್ ಮಾಡಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...








