Ranaji Trophy : ರಾಜಸ್ತಾನ ವಿರುದ್ಧ ಮೊದಲ ದಿನ ಕರ್ನಾಟಕ ಮೇಲುಗೈ
ವಾಸುಕಿ ಕೌಶಿಕ್ ಹಾಗೂ ವಿಜಯ ಕುಮಾರ್ ವೈಶಾಕ್ ದಾಳಿಯ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ರಾಜಸ್ತಾನ ವಿರುದ್ಧ ಮೊದಲ ದಿನವೇ ಮೇಲಗೈ ಸಾಧಿಸಿದೆ.
ಆಲೂರಿನಲ್ಲಿ ಆರಂಭವಾಗಿರುವ ಸಿ ಗುಂಪಿನ ರಣಜಿ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು. ರಾಜಸ್ತಾನ ತಂಡಕ್ಕೆ ಕರ್ನಾಟಕದ ತ್ರಿವಳಿ ವೇಗಿಗಳು ಆರಂಭಿಕ ಆಘಾತ ನೀಡಿದರು.
ಓಪನರ್ ಯಶ್ ಕೊಠಾರಿ 0, ಮಹಿಪಾಲ್ ಲೊಮರೊರ್ 0, ಆದಿತ್ಯ ಘಾರವಾಲ್ 19, ನಾಯಕ ಅಶೋಕ್ ಮನೇರಿಯಾ 12, ಕುನಾಲ್ ಸಿಂಗ್ ರಾಥೋರ್ 33, ಕರಣ್ ಲಂಬಾ 31, ಸಂಪ್ರೀತ್ ಜೋಶಿ 5, ಮನವ್ ಸುಥಾರ್ 0, ಅರಾಫಾತ್ ಖಾನ್ 6, ಋತುರಾಜ್ ಸಿಂಗ್ ಅಜೇಯ 10 ರನ್ ಗಳಿಸಿದರು.
ರಾಜಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ 129 ರನ್ ಗಳಿಗೆ ಆಲೌಟ್ ಆಯಿತು.
ಕರ್ನಾಟಕ ಪರ ವಾಸುಕಿ ಕೌಶಿಕ್ 37ಕ್ಕೆ 4, ವಿಜಯ ಕುಮಾರ್ ವೈಶಾಕ್ 50ಕ್ಕೆ 4, ವಿದ್ವತ್ ಕಾವೇರಪ್ಪ 12ಕ್ಕೆ 2 ವಿಕೆಟ್ ಪಡೆದರು.
ದಿನದಾಟದ ಅಂತ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ.
ಆರ್.ಸಮರ್ಥ್ 8, ನಾಯಕ ಮಯಾಂಕ್ ಅಗರ್ವಾಲ್ ಅಜೇಯ 49, ದೇವದತ್ ಪಡೀಕಲ್ 32, ನಿಕಿನ್ ಜೋಸ್ ಅಜೇಯ 10 ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ರಾಜಸ್ತಾನ ಪರ ಅಂಕೀತ್ ಚೌಧರಿ 40ಕ್ಕೆ 2 ವಿಕೆಟ್ ಪಡೆದರು.
Ranaji Trophy , karnataka win’s against rajasthan