ವಿಚಿತ್ರ ವೀರ್ಯನ ಮೊದಲ ಪತ್ನಿ ಅಂಬಿಕೆಯ ಪುತ್ರ, ಹಸ್ತಿನಾಪುರದ ಮಹಾರಾಜ, ಶತ ಕೌರವರ ಪಿತೃ, ಗಾಂಧಾರಿಯ ಪತಿ ಮಾಭಾರರತದ ಮಹಾಕಾವ್ಯದಲ್ಲಿ ಬರುವ ಬಹುಮುಖ್ಯಪಾತ್ರ ಧೃತರಾಷ್ಟ್ರ. ಅಂತಹ ಬಲಾಡ್ಯ ಧೃತರಾಷ್ಟ್ರನ ಪಾತ್ರವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರವಾಹಿಯಲ್ಲಿ ನಿಭಾಯಿಸಿರುವ ಇವರ ನಿಜವಾದ ಹೆಸರು ಠಾಕುರ್ ಅನೂಪ್ ಸಿಂಗ್. ಅಂಧನಾದರು ತಾನೂ ಅಶಕ್ತನಲ್ಲ ಎಂಬ ಗಟ್ಟಿ ಮನೋಭಾವವಿದ್ದ ಧೃತರಾಷ್ಟ್ರನ ಪಾತ್ರಕ್ಕೆ ಜೀವ ತುಂಬಿ ಜನಮನ್ನಣೆ ಪಡೆದಿರುವ ಅನೂಪ್ ಅವರ ರಿಯಲ್ ಲೈಫ್ ಜರ್ನಿ ಸಹ ತುಂಬಾನೇ ರೋಚಕ…!
ಅನೂಪ್ ಸಿಂಗ್ ಅವರು ಮೂಲತಃ ಮಹಾರಾಷ್ಟ್ರದ ಮುಂಬೈನವರಾಗಿದ್ದು, ಮಾರ್ಚ್ 23 – 1989ರಲ್ಲಿ ಜನಿಸಿದ್ರು. ಇವರು ಪ್ರೊಫೆಷನಲ್ ಬಾಡಿಬಿಲ್ಡರ್ ಹಾಗೂ ನಟ ಕೂಡ ಹೌದು.! ಅನೂಪ್ ಅವರು ಕೇವಲ ನಟನೆಗಷ್ಟೇ ಅಲ್ಲ ತಮ್ಮ ಹ್ಯಾಂಡ್ಸಮ್ನೆಸ್ , ಲುಕ್ಸ್ ಅಂಡ್ ಬಾಡಿಬಿಲ್ಡಿಂಗ್ ಗೂ ಸಿಕ್ಕಾಪಟ್ಟೆ ಫೇಮಸ್. ತಾನೊಬ್ಬ ಪೈಲಟ್ ಆಗ್ಬೇಕು ಎಂದು ಬಾಲ್ಯದಿಂದಲೇ ಕನಸು ಕಂಡಿದ್ದ ಅನೂಪ್ ಅವರು ತಮ್ಮ ಪ್ಯಾಷನ್ ನಿಂದ ಕನಸನ್ನು ನನಸು ಮಾಡಿಕೊಂಡಿದ್ರು. ಅರ್ಥಾತ್ ಅನೂಪ್ ಅವರಿಗೆ 19 ವರ್ಷವಿರುವಾಗ ಅವರಿಗೆ ಪೈಲಟ್ ಲೈಸೆನ್ಸ್ ಸಿಕ್ಕಿತ್ತು. ಅಲ್ಲಿಂದ ಭಾರತದ ಪೈಲಟ್ ಆಗಿಯೂ ಕೆಲ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆದ್ರೆ 2008 ರಲ್ಲಿ ಕೆಲ ಏರ್ ಲೈನಲ್ಲಿನ ಸಮಸ್ಯೆಗಳಿಂದಾಗಿ ಅನೂಪ್ ಅವರು ಪೈಲಟ್ ಕೆರಿಯರ್ ಗೆ ವಿದಾಯ ಹೇಳಿದ್ರು. ಇದಾದ ಬಳಿಕ ಆಕ್ಟಿಂಗ್ ನಲ್ಲೂ ಇಂಟ್ರೆಸ್ಟ್ ಇದ್ದ ಅನೂಪ್ ಅನೇಕ ಆಡಿಷನ್ ಗಳಲ್ಲಿ ಭಾಗಿಯಾಗಿದ್ರೂ, ಸಾಕಷ್ಟು ಕಡೆಗಳಲ್ಲಿ ಸೋಲೇ ಕಾಣ್ತಾರೆ. ಆದ್ರೆ ಅನೂಪ್ ಅವರು ಇದಕ್ಕೆಲ್ಲ ಜಗ್ಗದೆ ತಮ್ಮ ಪ್ರಯತ್ನಗಳನ್ನ ಮುಂದುವರೆಸಿದರು. ಅದರ ಫಲವಾಗಿಯೇ 2013ರಲ್ಲಿ ಅನೂಪ್ ಅವರು ಮಹಾಭಾರತದ ಧೃತರಾಷ್ಟ್ರನಾಗಿ ಆಯ್ಕೆಯಾಗಿ ಸಕ್ಸಸ್ ಕಂಡರು. ಇದಾದ ಬಳಿಕ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ರು. ಅದ್ರಲ್ಲೂ ಅಕ್ಬರ್ ಬೀರ್ಬಲ್ , ಸಿಐಡಿ, ರಾಮಾಯಣ, ಚಂದ್ರಗುಪ್ತ ಮೌರ್ಯ, ದ್ವಾರಕಾದೀಶ್ ಭಗವಾನ್ ಶ್ರೀ ಕೃಷ್ಣ, ಕಹಾನಿ ಚಂದ್ರಕಾಂತಾ ಕಿ, ಜೈ ಭಜರಂಗಬಲಿ, ಹೀಗೆ ಹೆಚ್ಚಾಗಿ ಮೈಥಾಲಾಜಿಕ್ ಪಾತ್ರಗಳಲ್ಲೇ ಕಾಣಿಸಿಕೊಂಡ್ರು.
ಆದ್ರೆ ಮಹಾಭಾರತದ ಬಳಿಕ ಬಾಡಿ ಬಿಲ್ಡ್ ಮಾಡ್ಬೇಕು ಎಂಬ ಆಸಕ್ತಿ ಹೊಂದಿದ್ದ ಅನೂಪ್ ಅವರ ಫಿಟ್ ನೆಸ್ ಕೆರಿಯರ್ ನಲ್ಲೂ ಸಕ್ಸಸ್ ಕಂಡರು. ಅವರ ಶ್ರಮದ ಫಲವಾಗಿ 3 ಬಾರಿ ಇಂಟರ್ ನ್ಯಾಷನಲ್ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಕೇವಲ ಬಾಡಿ ಬಿಲ್ಡ್ ಮಾಡ್ಬೇಕು ಅನ್ಕೊಂಡಿದ್ದ ಅನೂಪ್ ಅವರು ಅದನ್ನ ತಮ್ಮ ಕೆರಿಯರ್ ಆಗಿಸಿಕೊಂಡಿದ್ದು ನಿಜಕ್ಕೂ ಇಂಟ್ರೆಸ್ಟಿಂಗ್.. ಕಿರುತೆರೆಯ ಹೊರತಾಗಿ ಕಮಾಂಡರ್ 2 ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲಿ ಮೂಡಿ ಬಂದ ರೋಗ್ ಚಿತ್ರದಲ್ಲಿ ವಿಭಿನ್ನವಾಗಿ ಸೈಕೋ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಅಮಿಗೋ ಅಮಿಗೋ ಅಂದ್ಕೊಂಡೇ ಜನರನ್ನ ತಮ್ಮ ನಟನೆಗೆ ಫಿದಾ ಆಗುವಂತೆ ಮಾಡಿದ್ರು. ಇದರ ಹೊರತಾಗಿ ತಮಿಳಿನ ಎಸ್ ಐ 3, ತೆಲುಗಿನ ವಿನ್ನರ್, ಆಚಾರಿ ಅಮೆರಿಕಾ ಯಾತ್ರಾ, ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ, , ಕನ್ನಡದ ಯಜಮಾನ, ಉದ್ಘರ್ಷ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಫಿಟ್ ನೆಸ್ ಇಂಡಸ್ಟ್ರಿಯಲ್ಲಿ ಇವರ ಹಾರ್ಡ್ ವರ್ಕ್ ಹಾಗೂ ಡೆಡಿಕೇಶನ್ ನಿಜಕ್ಕೂ ಸ್ಪೂರ್ತಿದಾಯಕ. 2015ರಲ್ಲಿ ವರ್ಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ಥೈಲ್ಯಾಂಡ್ ನಲ್ಲಿ ಗೋಲ್ಡ್ ಮೆಡಲ್, 49ನೇ ಸಾಲಿನ ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಕಂಚು, 2015ರ ಫಿಟ್ ಫ್ಯಾಕ್ಟರ್ ಮಿ.ಇಂಡಿಯಾದಲ್ಲಿ ಸಿಲ್ವರ್ ಮೆಡಲ್ ಗೆದ್ದಿದ್ದಾರೆ.









