ಮೈಸೂರು :ನಾನು ಆರ್ ಎಸ್ ಎಸ್ ಅನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಎಂದುಕೊಂಡಿದ್ದೆ. ಆದರೆ, ಅದು ಸುಳ್ಳುಗಾರರನ್ನು ಸೃಷ್ಟಿಸುವ ಶಾಖೆ ಅಂತ ಗೊತ್ತಿರಲಿಲ್ಲ ಎಂದು ಕಾಂಗ್ರೆಸ್ ನ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಷಣ ತಮ್ಮ ಭಾಷಣದಲ್ಲಿ ಕೊಟ್ಟ ಕುದುರೆ ಏರದವನು ವೀರನು ಅಲ್ಲ ಶೂರನು ಅಲ್ಲ ಎಂಬ ಹೇಳಿಕೆಗೆ ತಿರುಗೇಟು ಕೊಟ್ಟರು.
“ಸದ್ಯ ಮೋದಿಗೆ ಈ ಮಾತು ಅನ್ವಯ ಆಗುತ್ತೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಿತಿ ಹೀನಾಯವಾಗಿದೆ. 117 ದೇಶಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ನೇಪಾಳ, ಬುರ್ಕಿನಾ ಫಾಸೋ ದೇಶಗಳೆ ನಮಗಿಂತ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಮೋದಿ ತೆಗೆದುಕೊಂಡ ನಿರ್ಧಾರಗಳೆ ಕಾರಣ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಮಕ್ಕಳ ಹಸಿವು ನೀಗಿಸಲು ಮೋದಿ ಕೈಯಲ್ಲಿ ಆಗಲಿಲ್ಲ, ಹಸಿವು ನಿಗಿಸುವಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಭಾರತದ ಸ್ಥಾನ 55ಕ್ಕೆ ಇಳಿದಿತ್ತು. ಕೊಟ್ಟ ಕುದುರೆ ಏರಲು ಆಗದವರು ಮೋದಿ ಹೊರೆತು ಕಾಂಗ್ರೆಸ್ ಅಲ್ಲ ಎಂದು ಗುಡುಗಿದರು.
ನಾನು ಆರ್ ಎಸ್ ಎಸ್ ಅನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಎಂದುಕೊಂಡಿದ್ದೆ. ಆದರೆ, ಅದು ಸುಳ್ಳುಗಾರರನ್ನು ಸೃಷ್ಟಿಸುವ ಶಾಖೆ ಅಂತ ಗೊತ್ತಿರಲಿಲ್ಲ. ಸಂತೋಷ್ ಅವರೇ ನೀವು ಇಷ್ಟು ಸುಳ್ಳಗಾರರು ಅಂತಾನೆ ಗೊತ್ತಿರಲಿಲ್ಲ” ಎಂದು ಆರ್. ಧ್ರುವನಾರಾಯಣ್, ಬಿ.ಎಲ್.ಸಂತೋಷ್ ಅವರನ್ನು ಕುಟುಕಿದ್ದಾರೆ.