Ukraine : ಉಕ್ರೇನ್ ನಲ್ಲಿ ಕದಮ ವಿರಾಮ ಘೋಷಿಸಿದ ರಷ್ಯಾ…!!!! ಮೋದಿ ಮಾತಿಗೆ ಮಾನ್ಯತೆ ನೀಡಿ , ನಿರ್ಧಾರ ಕೈಗೊಂಡರಾ ಪುಟಿನ್…??
ರಷ್ಯಾ ದಾಳಿಯಿಂದ ಕಾದ ಕೆಂಡದಂತಾಗಿದ್ದ ಉಕ್ರೇನ್ ನ ಪರಿಸ್ಥಿತಿ ಭೀಭತ್ಸವಾಗಿದೆ.. ಈ ನಡುವೆ ಇದೀಗ ರಷ್ಯಾ ಕದನ ವಿರಾಮ ಘೋಷಿಸಿದೆ . ಮಾನವೀಯ ಕಾರಿಡಾರ್ಗಳನ್ನು ತೆರೆಯುವ ಉದ್ದೇಶದಿಂದ ಕದಮ ವಿರಾಮ ಘೋಷಿಸಲಾಗಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
ಗ್ರೀನ್ ವಿಚ್ ಮೀನ್ ಟೈಮ್ ಸಮಯ 6ರಿಂದ ಕದನ ವಿರಾಮ ಘೋಷಿಸುವುದಾಗಿ ರಷ್ಯಾ ತಿಳಿಸಿದೆ. ಅಂದ್ರೆ ಭಾರತೀಯ ಕಾಲಮಾನಗಳ ಪ್ರಕಾರ ಸುಮಾರು 11 .30 ಬೆಳಿಗ್ಗೆ.. ಅಲ್ಲದೇ ಉಕ್ರೇನ್ ನ ಮರಿಯುಪೋಲ್, ವೊಲ್ನೋವಾಖಾ ನಿವಾಸಿಗಳಿಗೆ ಮಾನವೀಯ ಕಾರಿಡಾರ್ಗಳನ್ನು ತೆರೆಯಲಾಗುವುದು ಎಂದು ತಿಳಿಸಲಾಗಿದೆ..
ಆದ್ರೆ ಉಕ್ರೇನ್ ದೇಶವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ದಾಳಿ ಮಾಡಿರುವ ರಷ್ಯಾ ಕದನ ವಿರಾಮ ಘೋಷಣೆ ಮಾಡಿರೋದು ಸಾಕಷ್ಟು ಅನುಮಾನ ಚರ್ಚೆಗೆ ಗ್ರಸಾವಾಗಿದೆ… ಆದ್ರೆ ತಾತ್ಕಾಲಿಕವಾಗಂತೂ ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿರುವ ವಿದೇಶಿಯರ ರಕ್ಷಣೆಗಾಗಿ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ . ಈಗ ಭಾರತೀಯರ ರಕ್ಷಣೆಯೂ ಕೂಡ ಸುಲಭವಾಗಿದೆ..
ಅಂದ್ಹಾಗೆ ರಷ್ಯಾ ಭಾರತದ ಮಾತಿಗೆ ಮಾನ್ಯತೆ ನೀಡಿ ಈ ನಿರ್ಧಾರ ಕೈ ಗೊಂಡಿತಾ ಅನ್ನೋ ಪ್ರಶ್ನೆಯೂ ಕಾಡುತ್ತೆ… ಯಾಕಂದ್ರೆ ದೇಶ ಬಿಟ್ಟು ಹೋಗಲಿಕ್ಕೆ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲಿಕ್ಕೆ ಮೋದಿ ಅವರು ರಷ್ಯಾದ ಅಧ್ಯಕ್ಷರ ಜೊತೆಗೆ ಮಾತನಾಡಿದ್ದಾಗ ಕೋರಿದ್ದರು ಎನ್ನಲಾಗಿದೆ.. ಅದೇ ಮಾತಿಗೆ ಮಾನ್ಯತೆ ನೀಡಿ ರಷ್ಯಾ ಈ ನಿರ್ಧಾರ ಕೈಗೊಂಡಿದ್ಯಾ ಅನ್ನೋ ಚರ್ಚೆಯಾಗ್ತಿದೆ..