ಮಧುಮೇಹ ರೋಗಿಗಳಿಗೆ ಮೆಂತ್ಯ ಹೇಗೆ ಪ್ರಯೋಜನಕಾರಿ ಗೊತ್ತಾ?
ಮಧುಮೇಹ ರೋಗಿಗಳು ಚಳಿಗಾಲದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಋತುವಿನಲ್ಲಿ ರಕ್ತದಲ್ಲಿ ಸಕ್ಕರೆಯ ಹಠಾತ್ ಏರಿಕೆಯ ಅಪಾಯ ತುಂಬಾ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ, ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿರ್ವಹಿಸಬಹುದು. ಇದಕ್ಕಾಗಿ ನೀವು ಮೆಂತ್ಯವನ್ನು ಸೇವಿಸಬಹುದು.

ಮೆಂತ್ಯವು ಸೋಡಿಯಂ, ಸತು, ರಂಜಕ, ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಎ, ಬಿ ಹಾಗೂ ಸಿ ಯಂತಹ ಖನಿಜಗಳನ್ನು ಹೊಂದಿದೆ. ಇದರ ಹೊರತಾಗಿ, ಫೈಬರ್, ಪ್ರೋಟೀನ್, ಪಿಷ್ಟ, ಸಕ್ಕರೆ, ಫಾಸ್ಪರಿಕ್ ಆಮ್ಲಗಳು ಹೇರಳವಾಗಿ ಕಂಡುಬರುತ್ತವೆ.
ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದಲ್ಲದೆ, ತೂಕವನ್ನು ಕಡಿಮೆ ಮಾಡುತ್ತದೆ. ಬಿಪಿಯನ್ನು ನಿಯಂತ್ರಿಸುತ್ತದೆ ಮತ್ತು ಅನೇಕ ರೋಗಗಳನ್ನು ತಡೆಯುತ್ತದೆ.
ಮೆಂತ್ಯವನ್ನು ಹೇಗೆ ಸೇವಿಸುವುದು
ಮಧುಮೇಹ ರೋಗಿಗಳು ಮೆಂತ್ಯವನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ನೀವು ಇದನ್ನು ತರಕಾರಿಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಸೇರಿಸಬಹುದು.
ಮೊಳಕೆಯೊಡೆದ ಮೆಂತ್ಯೆ
ನಾವು ಕಡ್ಲೆ ಅಥವಾ ಬೇಳೆಕಾಳುಗಳನ್ನು ಮೊಳಕೆ ಬರಿಸಿ ಸೇವಿಸುತ್ತೇವೆ. ಅದೇ ರೀತಿ, ಮೆಂತ್ಯವನ್ನು ಮೊಳಕೆ ಬರಿಸಿ ತಿನ್ನುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. ರಾತ್ರಿ ಮಲಗುವ ಮುನ್ನ ಮೆಂತ್ಯವನ್ನು ನೀರಿನಲ್ಲಿ ನೆನೆಸಿ. ಮರುದಿನ, ನೀರನ್ನು ಬಸಿದು ಹತ್ತಿ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಮೆಂತ್ಯವು 1 ರಿಂದ 2 ದಿನದಲ್ಲಿ ಮೊಳಕೆಯೊಡೆದಿರುವುದನ್ನು ನೀವು ಕಾಣುತ್ತೀರಿ. ಆದರೆ ಇದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿ.
ಮೆಂತ್ಯ ನೀರು
ಮೆಂತ್ಯದ ನೀರು ಕೂಡ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಪ್ರಯೋಜನಕಾರಿ. ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಂತ್ಯವನ್ನು ಹಾಕಿ ಮತ್ತು ರಾತ್ರಿಯಿಡಿ ಬಿಡಿ. ಎರಡನೇ ದಿನ, ಅದನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಮೆಂತ್ಯ ಸೊಪ್ಪು
ಮೆಂತ್ಯದಲ್ಲಿ ಹೈಡ್ರಾಕ್ಸಿಲಿಸಿನ್ ಎಂಬ ಅಮೈನೋ ಅಂಶವಿದೆ. ಇದು ಮಧುಮೇಹದ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಮೆಂತ್ಯ ಸೊಪ್ಪನ್ನು ತರಕಾರಿಗಳು, ಪರಾಠಗಳು, ಅನ್ನ, ಓಟ್ಸ್ ಇತ್ಯಾದಿಗಳೊಂದಿಗೆ ಸೇವಿಸಬಹುದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ವೆಜ್ ಪನೀರ್ ಫ್ರೈಡ್ ರೈಸ್ https://t.co/bpvIFfVtRu
— Saaksha TV (@SaakshaTv) August 16, 2021
ಬೇಸಿಗೆಯಲ್ಲಿ ಈರುಳ್ಳಿಯನ್ನು ಏಕೆ ಹೆಚ್ಚು ಬಳಸಬೇಕು?#Saakshatv #healthtips #summer #onion https://t.co/lB7oABRZJx
— Saaksha TV (@SaakshaTv) August 16, 2021
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ – ಎಸ್ಬಿಐನಿಂದ ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ#StateBank #Homeloans https://t.co/W0TBsvT9cV
— Saaksha TV (@SaakshaTv) August 15, 2021
ನಿಂಬೆಯ ಅತಿಯಾದ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು#Saakshatv #healthtips #lemon https://t.co/5YGdDNcKq3
— Saaksha TV (@SaakshaTv) August 15, 2021
#Saakshatv #healthtips #Diabetespatients #Fenugreek







