ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಬೇಕೆಂದು ಬಯಸುವವರಿಗೆ ಸುವರ್ಣಾವಕಾಶ
ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಬೇಕೆಂದು ಬಯಸುವವರಿಗೆ ಇಲ್ಲಿದೆ ಉತ್ತಮ ಅವಕಾಶ. ಇದಕ್ಕಾಗಿ ಭಾರತೀಯ ಸೇವಾ ನೌಕಾಪಡೆಯು ಅಧಿಕಾರಿಗಳ (ಭಾರತೀಯ ನೌಕಾಪಡೆಯ ನೇಮಕಾತಿ 2021) ಹುದ್ದೆಗಳಿಗೆ ಅರ್ಜಿ ಕೋರಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ joinindiannavy.gov.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 26, 2021 ಆಗಿದೆ.

ಇದಲ್ಲದೆ, ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://www.joinindiannavy.gov.in/en/account/account/state
ಈ ಕೆಳಗಿನ ಲಿಂಕ್ ಮೂಲಕ https://www.joinindiannavy.gov.in/en/event/naseem-al-bahr-2016-visit-of-royal-navy-of-oman-ships.html
ಭಾರತೀಯ ನೌಕಾಪಡೆಯ ನೇಮಕಾತಿ 2021 ಅಧಿಕೃತ ಅಧಿಸೂಚನೆ ಸಹ ನೋಡಬಹುದು.
ಈ ನೇಮಕಾತಿ ಪ್ರಕ್ರಿಯೆಯಡಿ 50 ಎಸ್ಎಸ್ಸಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಯ್ದ ಅಭ್ಯರ್ಥಿಗಳು ಜನರಲ್ ಸರ್ವಿಸ್ (ಎಕ್ಸಿಕ್ಯುಟಿವ್) ಮತ್ತು ಹೈಡ್ರೋಗ್ರಫಿ ಎಂಬ ಎರಡು ವಿಭಿನ್ನ ಕೋರ್ಸ್ಗಳ ತರಬೇತಿ ಪಡೆಯಲಿದ್ದಾರೆ.
ಭಾರತೀಯ ನೌಕಾಪಡೆಯ ನೇಮಕಾತಿ – ಪ್ರಮುಖ ದಿನಾಂಕಗಳು 2021
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 11
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಜೂನ್
ಭಾರತೀಯ ನೌಕಾಪಡೆಯ ನೇಮಕಾತಿಗೆ ಅರ್ಹತಾ ಮಾನದಂಡ 2021
ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಬಿಇ / ಬಿಟೆಕ್ ಹೊಂದಿರಬೇಕು.
ಭಾರತೀಯ ನೌಕಾಪಡೆಯ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆ 2021
ಐದನೇ ಸೆಮಿಸ್ಟರ್ನಲ್ಲಿ ಪಡೆದ ಅಂಕಗಳ ಆದ್ಯತೆಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಇರುತ್ತದೆ. ಎಸ್ಎಸ್ಸಿ ಸಂದರ್ಶನಗಳನ್ನು ಜುಲೈ 21 ರಿಂದ ತಾತ್ಕಾಲಿಕವಾಗಿ ಬೆಂಗಳೂರು / ಭೋಪಾಲ್ / ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾದಲ್ಲಿ ನಿಗದಿಪಡಿಸಲಾಗುವುದು. ಎಸ್ಎಸ್ಬಿ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು. ಮೆರಿಟ್ ಪಟ್ಟಿ ಮತ್ತು ಆಯಾ ಪ್ರವೇಶದಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯನ್ನು ಆಧರಿಸಿ ಎಸ್ಎಸ್ಬಿ ಶಿಫಾರಸು ಮಾಡಿದ ಮತ್ತು ವೈದ್ಯಕೀಯವಾಗಿ ಫಿಟ್ ಎಂದು ಘೋಷಿಸಿದ ಅಭ್ಯರ್ಥಿಗಳನ್ನು ತರಬೇತಿಗಾಗಿ ನೇಮಕ ಮಾಡಲಾಗುತ್ತದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ತಪ್ಪಾದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದರೆ ಹಿಂಪಡೆಯುವುದು ಹೇಗೆ?#bankaccount https://t.co/TJ0loQb3cQ
— Saaksha TV (@SaakshaTv) June 12, 2021
ಸೋಯಾ ಚಂಕ್ಸ್ ಮಂಚೂರಿ#soyaChuck #Manchurian https://t.co/Hhd2pyUlPt
— Saaksha TV (@SaakshaTv) June 11, 2021
ಕೊರೋನಾ ಸಮಯದಲ್ಲಿ ಅಮೃತ ಬಳ್ಳಿ ಕಷಾಯದ ಆರೋಗ್ಯ ಪ್ರಯೋಜನಗಳು#Saakshatv #healthtips #Giloy https://t.co/z4DsWOV94S
— Saaksha TV (@SaakshaTv) June 11, 2021
ಮೂತ್ರಪಿಂಡದ ಕಲ್ಲು/ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಅಂಶಗಳು#Saakshatv #healthtips #kidney #stone https://t.co/myw8kCsv0i
— Saaksha TV (@SaakshaTv) June 12, 2021
ಕೇರಳ – ಒಂದೇ ತಿಂಗಳಿನಲ್ಲಿ 28000 ಬೆಕ್ಕು ಕಚ್ಚಿದ ಪ್ರಕರಣ ವರದಿ#catbites https://t.co/fd0OH45LQA
— Saaksha TV (@SaakshaTv) June 12, 2021
#Saakshatv #jobs #IndianNavy #Recruitment








