ಧೋನಿ ನಿವೃತ್ತಿಯ ಬಗ್ಗೆ ಸಾಕ್ಷಿ ಸಿಂಗ್ ಧೋನಿ ಭಾವನಾತ್ಮಕ ಪತ್ರ..!
ಕೋಟಿ ಕಂಗಳಲ್ಲಿ ಎರಡು ಕ್ರಿಕೆಟ್ ವಿಶ್ವಕಪ್ ಟ್ರೋಫಿಗಳನ್ನು ಮಿನುಗುವಂತೆ ಮಾಡಿರುವ ಮಹಾ ನಾಯಕ. ಆದ್ರೆ ತನ್ನ ನಿರ್ಧಾರ ನಿರೀಕ್ಷಿತವಾಗಿದ್ರೂ ಅನಿರೀಕ್ಷಿತವಾಗಿ ಹೇಳುವ ಮೂಲಕ ಅದೇ ಕೋಟಿ ಕಂಗಳಲ್ಲಿ ಕಣ್ಣೀರು ಭರಿಸುವಂತೆ ಮಾಡಿದ ಟೀಮ್ ಇಂಡಿಯಾದ ಮಾಜಿ ನಾಯಕ.
ಹೌದು, ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುತ್ತಾರೆ ಅನ್ನೋದು ನಿರೀಕ್ಷಿತವಾಗಿತ್ತು. ಆದ್ರೆ ಆಗಸ್ಟ್ 15 5 ಗಂಟೆ 29 ನಿಮಿಷಕ್ಕೆ ತನ್ನ ನಿವೃತ್ತಿಯ ಸುದ್ದಿಯನ್ನು ಹೇಳ್ತಾರೆ ಅನ್ನೋದು ಅನಿರೀಕ್ಷಿತವಾಗಿತ್ತು. ಧೋನಿ ಅಭಿಮಾನಿಗಳಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾದ್ರೂ ಚಾಣಕ್ಯ ನಾಯಕನ ಸಾಧನೆ ಮತ್ತು ಯಶಸ್ಸಿನ ಬಗ್ಗೆ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ. ಮಾಜಿ ಕ್ರಿಕೆಟಿಗರು, ರಾಜಕಾರಣಿಗಳು, ಸಿನಿ ತಾರೆಯರು ಧೋನಿಯ ಸಾಧನೆಗೆ ಹ್ಯಾಟ್ಸ್ ಅಪ್ ಹೇಳುವ ಮೂಲಕ ಕೂಲ್ ಕ್ಯಾಪ್ಟನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಧೋನಿ ನಿವೃತ್ತಿಯ ಬಗ್ಗೆ ಅವರ ಪತ್ನಿ ಸಾಕ್ಷಿ ಸಿಂಗ್ ಅವರ ಭಾವನಾತ್ಮಕ ಪತ್ರ…
ಧೋನಿಯ ಈ ನಿರ್ಧಾರ ಅವರ ಪತ್ನಿ ಸಾಕ್ಷಿ ಸಿಂಗ್ ಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಸಾಕ್ಷಿ ಸಿಂಗ್ ಗೆ ಹೇಳಿಯೇ ಧೋನಿ ಈ ನಿರ್ಧಾರವನ್ನು ಹೇಳಿರುತ್ತಾರೆ. ಧೋನಿಗೆ ಸಾಕ್ಷಿ ಸಿಂಗ್ ಪರಿಚಯವಾಗುವುದಕ್ಕಿಂತ ಮುನ್ನ ಧೋನಿ ಯಾರು ಎಂಬುದೇ ಗೊತ್ತಿರಲಿಲ್ಲ. ಆದ್ರೆ ಪರಿಚಯ ಮತ್ತು ಮದುವೆಯಾದ ನಂತರ ಧೋನಿಯ ಪ್ರತಿ ಹೆಜ್ಜೆಯಲ್ಲೂ ಸಾಕ್ಷಿ ಸಿಂಗ್ ನೆರಳಿತ್ತು.
ಧೋನಿ ಅವರು ತನ್ನ ವೃತ್ತಿ ಜೀವನದಲ್ಲಿ ಏನು ಸಾಧಿಸಿದ್ದಾರೆ ಮತ್ತು ಆಟಕ್ಕೆ ಯಾವಾಗಲೂ ಅತ್ಯುತ್ತಮವಾಗಿರುವುದನ್ನು ನೀಡಿದ್ದಾರೆ. ನೀವು ಏನನ್ನು ಸಾಧಿಸಿದ್ದಿರೋ ಅದಕ್ಕೆ ಹೆಮ್ಮೆ ಪಡಬೇಕು. ನಿಮ್ಮ ಸಾಧನೆಯ ಬಗ್ಗೆ ನಾನೂ ಹೆಮ್ಮೆ ಪಡುತ್ತೆನೆ. ಅಭಿನಂದನೆಗಳು. ಕ್ರಿಕೆಟ್ ಆಟಕ್ಕೆ ಶ್ರೇಷ್ಠವಾದ
ಕೊಡುಗೆಯನ್ನು ನೀಡಿದ್ದಿರಿ. ನಿವೃತ್ತಿ ಹೇಳುವಾಗ ನೀವು ಕಣ್ಣೀರನ್ನು ಹಿಡಿದಿಟ್ಟುಕೊಂಡಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಆರೋಗ್ಯ ಮತ್ತು ಸಂತೋಷವಾಗಿರಿ ಎಂದು ಹಾರೈಸುತ್ತೇನೆ ಎಂದು ಸಾಕ್ಷಿ ಸಿಂಗ್ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಸಾಕ್ಷಿ ಸಿಂಗ್ ಅವರು ಅಪ್ರತಿಮ ಕವಿ ಮಾಯಾ ಏಂಜೆಲೊ ಅವರ ಕೆಲವು ಮಾತುಗಳನ್ನು ಬರೆದುಕೊಂಡಿದ್ದಾರೆ. ನೀವು ಹೇಳಿದ್ದನ್ನು ಜನ ಮರೆತು ಬಿಡುತ್ತಾರೆ. ನೀವು ಏನು ಮಾಡಿದ್ದೀರೋ ಅದನ್ನು ಮರೆತುಬಿಡುತ್ತಾರೆ. ಆದ್ರೆ ನೀವು ಜನರಿಗೆ ನೀಡಿರುವ ಭಾವನೆಗಳನ್ನು ಎಂದೂ ಮರೆಯುವುದಿಲ್ಲ ಎಂದು ಸಾಕ್ಷಿ ಸಿಂಗ್ ತನ್ನ ಇನ್ ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.








