ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ಟೀಸರ್ ಬಿಡುಗಡೆ
ಮುಂಬೈ ದಾಳಿ ವೇಳೆ ವೀರ ಮರಣ ಹೊಂದಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ಟೀಸರ್ ಬಿಡುಗಡೆ ಆಗಿದೆ.
ಟೀಸರ್ ಅನ್ನು ಸೋಮವಾರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ನಟ ಸಲ್ಮಾನ್ ಖಾನ್ ಮತ್ತು ಮಲಯಾಳಂ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರು ಕ್ರಮವಾಗಿ ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಅನಾವರಣಗೊಳಿಸಿದ್ದಾರೆ. ಈ ಚಿತ್ರವನ್ನು ಮಹೇಶ್ ನಿರ್ಮಿಸಿದ್ದಾರೆ ಮತ್ತು ಅದಿವಿ ಶೇಷ್ ಅವರು ಧೈರ್ಯಶಾಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿದ್ದಾರೆ.

1.3 ನಿಮಿಷಗಳ ಟೀಸರ್ ಸೈನಿಕನಾಗಿರುವುದರ ಅರ್ಥವೇನು? ಎಂದು ವಿವರಿಸುತ್ತದೆ. ಚಲನಚಿತ್ರದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿರುವ ಅದಿವಿ ಶೇಷ್, ಎಲ್ಲರೂ ದೇಶಭಕ್ತರು ಮತ್ತು ಈ ದೇಶಭಕ್ತರನ್ನು ರಕ್ಷಿಸುವವನು ಸೈನಿಕ ಎಂದು ತಿಳಿಸುತ್ತಾರೆ.
ಮೇಜರ್ ಟೀಸರ್ 2008 ರಲ್ಲಿ ನಡೆದ ಭೀಕರ ಮುಂಬೈ ಭಯೋತ್ಪಾದಕ ದಾಳಿಯ ನೆನಪುಗಳನ್ನು ತೆರೆದಿಡುತ್ತದೆ.
2008ರ ನವೆಂಬರ್ 26ರಂದು ಒಂಭತ್ತು ಭಯೋತ್ಪಾದಕರು ಮುಂಬೈ ನಗರದೊಳಗೆ ನುಗ್ಗಿ 164 ಜನರ ಸಾವಿಗೆ ಕಾರಣರಾಗಿದ್ದರು. ದಾಳಿ ನಡೆದ ಸ್ಥಳಗಳಲ್ಲಿ ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಸಹ ಸೇರಿತ್ತು.
ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಸಿಲುಕಿದ್ದ ಜನರನ್ನು ಪಾರುಮಾಡುತ್ತಾ ನ್ಯಾಷನಲ್ ಸೆಕ್ಯೂರಿಟೀ ಗಾರ್ಡ್ ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಹುತಾತ್ಮರಾಗಿದ್ದರು.
ನಾಯಕನ ಪರಂಪರೆಯನ್ನು ಗೌರವಿಸುವ ಪ್ರಯತ್ನ… ಪ್ರಮುಖ ಪ್ರಯಾಣದ ಪ್ರಾರಂಭ !! ನೀವೆಲ್ಲರೂ ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ! ಎಂದು ಟೀಸರ್ ಹಂಚಿಕೊಳ್ಳುವಾಗ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಖಾನ್, “ಇಸ್ಸೆ ಕೆಹ್ಟೆ ಹೈನ್ ಧಮಕೇದರ್ ಟೀಸರ್! ಇದನ್ನು ಅನಾವರಣಗೊಳಿಸಲು ನಿಜವಾಗಿಯೂ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ತಂಡಕ್ಕೆ ಅಭಿನಂದನೆಗಳು .. ಮತ್ತು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಸೆಲ್ಯೂಟ್ #MajorTeaser ಎಂದು ಬರೆದಿದ್ದಾರೆ.
ಪೃಥ್ವಿರಾಜ್ ಅವರು, ಈ ಸೂಪರ್ ರೋಚಕ ಚಿತ್ರಕ್ಕಾಗಿ ಮಲಯಾಳಂ ಟೀಸರ್ ಅನ್ನು ಬಿಡುಗಡೆ ಮಾಡಲು ನಿಜವಾಗಿಯೂ ಸಂತೋಷವಾಗಿದೆ. ಇಡೀ ತಂಡಕ್ಕೆ ಕೀರ್ತಿ ಮತ್ತು #MajorSandeep! ಗೆ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.
ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನ ಜೊತೆಗೆ 2 ಲವಂಗ ಸೇವಿಸುವುದರ ಆರೋಗ್ಯ ಪ್ರಯೋಜನಗಳು#healthtips #Saakshatv #cloves https://t.co/zhOlMmGq64
— Saaksha TV (@SaakshaTv) April 8, 2021
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಏಕೆ ದೇವತೆಗಳಿಗೆ ಅರ್ಪಿಸುವುದಿಲ್ಲ ?#onion #garlic #god https://t.co/Gn1XSs80Eg
— Saaksha TV (@SaakshaTv) April 8, 2021
ಮಾವಿನಕಾಯಿಯ ಜ್ಯೂಸ್#Saakshatv #cookingrecipe #RawMango https://t.co/TjPjQ0fVzh
— Saaksha TV (@SaakshaTv) April 8, 2021
ಆವತೀಯತೆ:#Saakshatv #vishwasbharadwaj #ಆವತೀಯತೆ https://t.co/iYwrmxVGZg
— Saaksha TV (@SaakshaTv) April 11, 2021
#Salmankhan #Maheshbabu #Prithviraj #Majorteaser








