ಗಡಿ ವಿವಾದದ ನಡುವೆ ನಡೆದ ಭಾರತ-ಚೀನಾ ಡಬ್ಲ್ಯುಎಂಸಿಸಿ ಯ ಹದಿನೇಳನೇ ಸಭೆ
ಹೊಸದಿಲ್ಲಿ, ಜುಲೈ 25: ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತಾದ ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ & ಕೋಆರ್ಡಿನೇಷನ್ (ಡಬ್ಲ್ಯುಎಂಸಿಸಿ) ಯ ಹದಿನೇಳನೇ ಸಭೆ ಶುಕ್ರವಾರ ಪೂರ್ವ ಲಡಾಕ್ನ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ವಿಗ್ನತೆಯ ನಡುವೆ ನಡೆಯಿತು.
ಭಾರತ ಪರವಾಗಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಅವರ ನೇತೃತ್ವದ ತಂಡವು ಚೀನಾದ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವಿಭಾಗದ ಮಹಾನಿರ್ದೇಶಕರ ನೇತೃತ್ವದ ನಿಯೋಗವನ್ನು ಭೇಟಿ ಮಾಡಿತು. ಈ ಸಭೆಯಲ್ಲಿ ಪ್ರಸ್ತುತ ಪರಿಸ್ಥಿತಿ ಮತ್ತು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆಯನ್ನು ಎರಡೂ ಕಡೆಯವರು ಪರಿಶೀಲಿಸಿದರು.

ಪೂರ್ವ ಲಡಾಖ್ನ ಘರ್ಷಣೆಯ ಸ್ಥಳಗಳಲ್ಲಿ ಚೀನಿಯರು ಹಿಂದೆ ಸರಿಯಲು ಹಿಂಜರಿಯುತ್ತಿದ್ದಾರೆ ಎಂಬ ವರದಿಗಳ ಹೊರತಾಗಿಯೂ ಸಭೆ ನಡೆಯಿತು. ಇತ್ತೀಚೆಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಯ 40,000 ಸೈನಿಕರು ಎಲ್ಎಸಿ ಉದ್ದಕ್ಕೂ ಜಮಾವಣೆಗೊಂಡಿದ್ದರು.
ಇತ್ತೀಚಿನ ವರದಿಗಳ ಪ್ರಕಾರ, ಉಭಯ ದೇಶದ ವಿದೇಶಾಂಗ ಮಂತ್ರಿಗಳು ಮತ್ತು ವಿಶೇಷ ಪ್ರತಿನಿಧಿಗಳು ಒಪ್ಪಂದಕ್ಕೆ ಅನುಗುಣವಾಗಿ ಮಿಲಿಟರಿ ಮತ್ತು ರಾಜತಾಂತ್ರಿಕ ಸಂವಾದವನ್ನು ಮುಂದುವರಿಸಲು ಒಪ್ಪಿದ್ದಾರೆ. ಇಲ್ಲಿಯವರೆಗೆ ಹಿರಿಯ ಕಮಾಂಡರ್ಗಳ ನಡುವೆ ಆಗಿರುವ ಒಪ್ಪಂದವನ್ನು ಎರಡೂ ಕಡೆಯವರು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸುವುದು ಅಗತ್ಯವಾಗಿದೆ ಎಂದು ಭಾರತ ಗಮನಸೆಳೆದಿದೆ.
ಶುಕ್ರವಾರ ನಡೆದ ಡಬ್ಲ್ಯುಎಂಸಿಸಿ ಸಭೆಯ ನಂತರ ನೀಡಿದ ಎಲ್ಲಾ ಆಶ್ವಾಸನೆಗಳು ಮತ್ತು ಹೇಳಿಕೆಗಳ ಹೊರತಾಗಿಯೂ, ಪೂರ್ವ ಲಡಾಖ್ ನ ಎಲ್ಎಸಿ ಉದ್ದಕ್ಕೂ ಸೈನ್ಯವನ್ನು ಸಂಪೂರ್ಣವಾಗಿ ನಿಯೋಜಿಸುವುದು ಇನ್ನೂ ದೂರದ ಸಾಧ್ಯತೆಯಾಗಿದೆ.ಆದರೆ ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ನಾಲ್ಕು ಸುತ್ತಿನ ಮಾತುಕತೆಯ ನಂತರವೂ, ಚೀನಾ ಪಾಂಗೊಂಗ್ ತ್ಸೊ ಪ್ರದೇಶದಲ್ಲಿ ಫಿಂಗರ್ 5 ರಿಂದ ಫಿಂಗರ್ 8 ಅನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ.








