Virat Rohit | ಕಿಂಗ್ – ಹಿಟ್ ಮ್ಯಾನ್ ಟೈಂ ಕರಾಬು
ಟಿ 20 ವಿಶ್ವಕಪ್ 2022 ಟೂರ್ನಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತಷ್ಟು ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳಿವೆ ಎಂದು ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಫಾರ್ಮ್ ನಲ್ಲಿ ಇಲ್ಲದ ಕಾರಣ ಅವರು ರನ್ ಗಳಿಸಲು ಪರದಾಡಬಹುದು. ಒಂದು ವೇಳೆ ಅವರಿಬ್ಬರಿಗೂ ಇದು ಕೊನೆಯ ವಿಶ್ವಕಪ್ ಅಂತಾ ಅಂದುಕೊಂಡರೇ ಒತ್ತಡ ಡಬಲ್ ಆಗುವ ಸಾಧ್ಯತೆಗಳಿವೆ ಎಂದು ಅಖ್ತರ್ ಹೇಳಿದ್ದಾರೆ.
ವೃತ್ತಿ ಜೀವನದಲ್ಲಿ ಯಾವುದೇ ಆಟಗಾರನಿಗೆ ಇಂತಹ ಪರಿಸ್ಥಿತಿ ಎದುರಾಗುವುದು ಸಹಜ, ಸಚಿನ್ ತೆಂಡೂಲ್ಕರ್ ಕೂಡ ದೀರ್ಘಕಾಲ ಶತಕ ಗಳಿಸಲು ಸಾಧ್ಯವಾಗದೇ ಪರದಾಡಿದ್ದು ಉಂಟು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಉಲ್ಲೇಖಿಸಿದ್ದಾರೆ .
ಅಂದಹಾಗೆ ವಿರಾಟ್ ಕೊಹ್ಲಿ ಟಿ 20 ಕ್ರಿಕೆಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು.
ಹಿಟ್ ಮ್ಯಾಚ್ ಸಾರಥ್ಯದಲ್ಲಿ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಟಿ 20 ಸರಣಿಗಳನ್ನು ಗೆದ್ದುಕೊಳ್ತು. ಆದ್ರೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ದಾರುಣವಾಗಿ ವಿಫಲರಾದರು.
ಆರ್ ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ, 341 ರನ್ ಗಳಿಸಿದ್ರೆ, ಮುಂಬೈ ನಾಯಕರಾಗಿ ರೋಹಿತ್ ಶರ್ಮಾ ಕೇವಲ 268 ರನ್ ಮಾತ್ರ ಸಿಡಿಸಿದರು. ಹೀಗಾಗಿ ಇಬ್ಬರ ಮೇಲೆ ಹಿರಿಯ ಕ್ರಿಕೆಟಿಗರು ಬುಸ್ ಬುಸ್ ಎನ್ನುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಶೋಯೆಬ್ ಅಖ್ತರ್ ಹಾಗೂ ಟೀಂ ಇಂಡಿಯಾದ ಮಾಜಿ ಬೌಲರ್ ಹರ್ಭಜನ್ ಸಿಂಗ್ ನಡುವೆ ವಿರಾಟ್ ಮತ್ತು ರೋಹಿತ್ ಬಗ್ಗೆ ಆಸಕ್ತಿದಾಯಕ ಚರ್ಚೆ ನಡೆದಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇದೇ ರೀತಿಯ ಪ್ರದರ್ಶನ ಮುಂದುವರೆಸಿದ್ರೆ, ಅವರಿಗೆ ಇದೇ ಕೊನೆಯ ಐಪಿಎಲ್, ವರ್ಲ್ಡ್ ಕಪ್ ಎಂದಾದ್ರೆ ಫಾರ್ಮ್ ನಲ್ಲಿದ್ದಲ್ಲದ ಕಾರಣ ಅವರು ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ. ಅವರ ಕೆರಿಯರ್ ಮೇಲೆ ತೀವ್ರ ಸ್ವರೂಪದ ಪ್ರಭಾವ ಬೀರಬಹುದು ಎಂದಿದ್ದಾರೆ ಅಖ್ತರ್.
ಇದಕ್ಕೆ ಸಚಿನ್ ಅವರನ್ನ ಉದಾಹರಣೆಗೆ ತೆಗೆದುಕೊಂಡರೇ ಒಂದು ಸಮಯದಲ್ಲಿ ಸಚಿನ್ ಕೂಡ ಸೆಂಚೂರಿ ಸಿಡಿಸಲು ಸಾಕಷ್ಟು ಶ್ರಮಿಸಿದ್ದರು ಎಂದು ಅಖ್ತರ್ ನೆನಪಿಸಿಕೊಂಡರು.
ಇದಕ್ಕೆ ಭಜ್ಜಿ ಪ್ರತಿಕ್ರಿಯೆ ನೀಡುತ್ತಾ ಹೌದು..! ವಿರಾಟ್, ರೋಹಿತ್ ಗೆ ಈ ಐಪಿಎಲ್ ಸೀಸನ್ ಚೆನ್ನಾಗಿರಲಿಲ್ಲ. ನಿಜ ಹೇಳಬೇಕಾದ್ರೆ ಅವರಿಬ್ಬರಿಗೆ ಟಿ 20 ವರ್ಲ್ಡ್ ಕಪ್ ತುಂಬಾ ನಿರ್ಣಾಯಕವಾಗಿದೆ.
ಹೀಗಾಗಿ ವಿರಾಟ್ ಕೊಹ್ಲಿ, ಮತ್ತು ರೋಹಿತ್ ಶರ್ಮಾ ಈ ವಿಶ್ವಕಪ್ ನಲ್ಲಿ ತಮ್ಮ ತಾಕತ್ತು ತೋರಿಸಲೇ ಬೇಕು. ಒಂದು ವೇಳೆ ಇಲ್ಲೂ ವಿಫಲವಾದ್ರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.








